ಕಾಶ್ಮೀರದಲ್ಲಿ ಉಗ್ರರ ದಾಳಿ, ಜೀವಂತವಾಗಿ ಸೆರೆ ಸಿಕ್ಕ ಉಗ್ರ
ನವದೆಹಲಿ, ಆಗಸ್ಟ್ 5 : ಜಮ್ಮು ಕಾಶ್ಮೀರದಲ್ಲಿ ಬಿಎಸ್ಎಫ್ ಶಿಬಿರದ ಮೇಲೆ ದಾಳಿ ಮಾಡಿದ್ದ ಉಗ್ರರ ಪೈಕಿ ಒಬ್ಬನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. ಉಗ್ರರು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಮೂವರನ್ನು ರಕ್ಷಣೆ ಮಾಡಲಾಗಿದೆ.
ಉಗ್ರನ ಹತ್ಯೆ : ಜಮ್ಮು-ಕಾಶ್ಮೀರದಲ್ಲಿ ಬಿಎಸ್ಎಫ್ ಶಿಬಿರಗಳ ಮೇಲೆ ದಾಳಿ ಮಾಡಿರುವ ಉಗ್ರರು ಮೂವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಬಿಎಸ್ಎಫ್ ಯೋಧರು ಒಬ್ಬ ಉಗ್ರನನ್ನು ಹತ್ಯೆ ಮಾಡಿದ್ದಾರೆ.
ಬಿಎಸ್ಎಫ್ ಕ್ಯಾಂಪ್ ಮೇಲೆ ಉಗ್ರರ ದಾಳಿ : ಜಮ್ಮು-ಕಾಶ್ಮೀರದಲ್ಲಿ ಬಿಎಸ್ಎಫ್ ಶಿಬಿರಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಬ್ಬ ಯೋಧ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, 6ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಾಲ್ವರು ಉಗ್ರರು ಈ ಕತ್ಯವೆಸಗಿದ್ದಾರೆ.
ಜಮ್ಮು-ಕಾಶ್ಮೀರ
ಹೆದ್ದಾರಿಯ
ಉದಾಮ್ಪುರ್
ಎಂಬಲ್ಲಿ
ಬುಧವಾರ
ಬೆಳಗ್ಗೆ
ಈ
ಗುಂಡಿನ
ದಾಳಿ
ನಡೆದಿದೆ.
ಬಿಎಸ್ಎಫ್
ಯೋಧರು
ಪ್ರತಿದಾಳಿ
ನಡೆಸುತ್ತಿದ್ದು,
ಗುಂಡಿನ
ಚಕಮಕಿ
ಮುಂದುವರೆದಿದೆ.
ಹೆದ್ದಾರಿಯಲ್ಲಿನ
ವಾಹನ
ಸಂಚಾರವನ್ನು
ಸ್ಥಗಿತಗೊಳಿಸಲಾಗಿದೆ.
[ಚಿತ್ರಗಳು
:
ಪಂಜಾಬಿನಲ್ಲಿ
ಉಗ್ರರನ್ನು
ಮಟ್ಟ
ಹಾಕಿದ
ಯೋಧರು]
ಅಮರನಾಥ
ಯಾತ್ರೆಗೆ
ಹೊರಟ
ಭಕ್ತರು
ಈ
ಸ್ಥಳದಿಂದ
ಹೊರಟ
ಕೆಲವೇ
ಕ್ಷಣಗಳಲ್ಲಿ
ಈ
ಗುಂಡಿನ
ದಾಳಿ
ನಡೆದಿದೆ.
ಭಕ್ತಾದಿಗಳನ್ನು
ಗುರಿಯಾಗಿಸಿಕೊಂಡು
ದಾಳಿ
ಮಾಡಿರಬಹುದು
ಎಂದು
ಶಂಕಿಸಲಾಗಿದೆ.
ಯೋಧರು
ಸ್ಥಳವನ್ನು
ಸುತ್ತುವರೆದಿದ್ದಾರೆ.
ಅಮರನಾಥ ಯಾತ್ರೆಗೆ ಹೊರಟ ಭಕ್ತಾದಿಗಳ ಮೇಲೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಕೆಲವು ದಿನಗಳ ಹಿಂದೆ ಮಾಹಿತಿ ನೀಡಿತ್ತು. ರಾಜ್ಯ ಗೃಹಖಾತೆ ಸಚಿವ ಕಿರಣ್ ರಿಜು ಅವರು ಈ ಕುರಿತು ಲೋಕಸಭೆಯಲ್ಲಿಯೂ ಹೇಳಿಕೆ ನೀಡಿದ್ದರು.