ಬಡತನದ ಕಾರಣಕ್ಕೆ 650 ರುಪಾಯಿಗೆ ಹೆಣ್ಣುಮಗು ಮಾರಿದ ದಂಪತಿ
ಅಗರ್ತಲ, ಸೆಪ್ಟೆಂಬರ್ 26: ತ್ರಿಪುರಾ ರಾಜ್ಯದಲ್ಲಿ ನಡೆದ ಈ ಘಟನೆ ಬಡತನದ ಕ್ರೂರ ಹಾಗೂ ಅಸಹಾಯಕ ಮುಖವನ್ನು ತೆರೆದಿಡುತ್ತದೆ. ಅಲ್ಲಿನ ಧಲಾಯ್ ಜಿಲ್ಲೆಯ ಬುಡಕಟ್ಟು ದಂಪತಿ, ತಮ್ಮಿಂದ ಮಗುವಿನ ಖರ್ಚು ಸಂಭಾಳಿಸುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹೆಣ್ಣುಮಗುವನ್ನು ಮಾರಾಟ ಮಾಡಿದ್ದಾರೆ.
ಅಲ್ಲಿನ ಸ್ಥಳೀಯ ಪತ್ರಿಕೆಯೊಂದರಲ್ಲಿ ಈ ಬಗ್ಗೆ ವರದಿಯಾಗಿದ್ದು, ಆ ಕುಟುಂಬ ಬಡತನ ರೇಖೆಗಿಂತ ಕೆಳಗಿದೆ. ಹೆಣ್ಣುಮಗುವನ್ನು 650 ರುಪಾಯಿಗೆ ಮಾರಲಾಗಿದೆ ಎಂದು ಪ್ರಕಟಿಸಲಾಗಿದೆ. ಟಿಎಂಸಿ ಶಾಸಕ ಸುದೀಪ್ ರಾಯ್ ಬರ್ಮನ್ ಈ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.[25 ವರ್ಷದ ನಂತರ ಆತನನ್ನು ಕಂಡದ್ದು ಅದೇ ಮೊದಲು ಹಾಗೂ ಕೊನೆ]
ತೀರಾ ಕುಗ್ರಾಮಗಳಲ್ಲಿ ಬುಡಕಟ್ಟು ಜನಾಂಗದವರು ವಾಸವಿದ್ದಾರೆ. ಆಹಾರ ಸರಿಯಾಗಿ ದೊರೆಯದೆ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಾಧ್ಯಮಗಳಿಂದ ಈ ಘಟನೆ ಬೆಳಕಿಗೆ ಬಂದಿದೆ. ಸರಕಾರ ಇದನ್ನು ಮುಚ್ಚಿಹಾಕಲು ಯತ್ನಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.[ಬೆಳಗೆರೆ ಅವರ 'ಸಮಾಧಾನ'ದ ಒಂದು ಪತ್ರ: ದುರುಳ ತಂದೆಗೆ ಮರುಳಾದ ಮಕ್ಕಳು]
ಗಂದಚೆರ್ರಾ ಪ್ರದೇಶದಲ್ಲಿ ಶನಿವಾರ ಮಗು ಮಾರಾಟ ನಡೆದಿದೆ. ಅದೇ ಜಿಲ್ಲೆಯ ಕಮಲ್ ಪುರ್ ನಲ್ಲಿ ಈ ಹಿಂದೆ ಮಗುವಿನ ಮಾರಾಟ ಮಾಡಲಾಗಿತ್ತು. ಎಷ್ಟೋ ಮಂದಿ ಅವರ ಜೀವನ ನಡೆಸಲು ಹೆಣ್ಣುಮಗುವನ್ನು ಮಾರಾಟ ಮಾಡಿದ ನಿದರ್ಶನಗಳಿವೆ ಎಂದು ಬರ್ಮನ್ ಹೇಳಿದ್ದಾರೆ.