ತಂಡಕ್ಕೆ ಮರಳಲು ಲ್ಯಾಂಗರ್ ನೆರವು ಕೋರಿದ ಗಂಭೀರ್
ಬೆಂಗಳೂರು, ಜು. 03: ಭಾರತ ತಂಡಕ್ಕೆ ಮರಳಲು ಗೌತಮ್ ಗಂಭೀರ್ ತೀವ್ರ ಕಸರತ್ತಿನಲ್ಲಿ ತೊಡಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆರಂಭಿಕ, ಕೋಚ್ ಜಸ್ಟಿನ್ ಲ್ಯಾಂಗರ್ ಬಳಿ ಪರ್ತ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಕಳೆದ 2014 ರಲ್ಲಿ ಇಂಗ್ಲೆಂಡಿನ ವಿರುದ್ಧ ಗಂಭೀರ್ ತಮ್ಮ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ನಂತರ ರಾಷ್ಟ್ರೀಯ ತಂಡದಿಂದ ಅವರನ್ನು ಕೈ ಬಿಡಲಾಗಿತ್ತು. ದೆಹಲಿ ಬ್ಯಾಟ್ಸಮನ್ ಗೆ ಬಾಂಗ್ಲಾ ಪ್ರವಾಸಕ್ಕೂ ಅವಕಾಶ ನಿರಾಕರಣೆ ಮಾಡಲಾಗಿತ್ತು.[ಸೂಪರ್ ರನ್ ಚೇಸರ್ ಹೃಷಿಕೇಶ್ ಕಾನಿಟ್ಕರ್ ನಿವೃತ್ತಿ]
ನನ್ನ ಆಟದ ಕಾರ್ಯಕ್ಷಮತೆಯನ್ನು ಮತ್ತಷ್ಟು ಉತ್ತಮ ಮಟ್ಟಕ್ಕೆ ಏರಿಸಿಕೊಳ್ಳಲು ಮುಂದಾಗಿದ್ದೇನೆ. ಜಸ್ಟಿನ್ ಲ್ಯಾಂಗರ್ ಬಳಿ ಅದಕ್ಕಾಗಿ ತರಬೇತಿ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಬ್ಯಾಟಿಂಗ್ ಗೆ ನನ್ನ ಮೊದಲ ಆದ್ಯತೆ. ನಂತರ ಆಸ್ಟ್ರೇಲಿಯಾದ ಬೌಲರ್ ಗಳನ್ನು ಎದುರಿಸುವ ಕ್ಷಮತೆ ಬೆಳೆಸಿಕೊಳ್ಳಲಿದ್ದೇನೆ. ಕೆಲ ಸಂದರ್ಭ ಜಿಮ್ನಾಸ್ಟಿಕ್ ಮತ್ತು ಮಾರ್ಷಲ್ ಆರ್ಟ್ ನ್ನು ಸಹ ಪ್ರ್ಯಾಕ್ಟೀಸ್ ಮಾಡಿದ್ದು ಖಯಷಿ ತಂದಿದೆ ಎಂದು ಗಂಭೀರ್ ಹೇಳಿದ್ದಾರೆ.[ಬಾಂಗ್ಲಾ ಪತ್ರಿಕೆಯಲ್ಲಿ ಇಂಡಿಯನ್ ಕ್ರಿಕೆಟರ್ಸ್ ಮಾನ ಹರಾಜು]
ಭಾರತದ ಆರಂಭಿಕರಾಧ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಆಟವನ್ನು ಇದೇ ವೇಳೆ ಮೆಚ್ಚಿಕೊಂಡಿದ್ದಾರೆ. 56 ಟೆಸ್ಟ್ ಮತ್ತು 147 ಏಕದಿನ ಮತ್ತು 37 ಟಿ-20 ಪಂದ್ಯಗಳನ್ನು ಆಡಿರುವ ಗಂಭೀರ್ 10 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.