ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸುದ್ದಿಗಳಿವು
ಬೆಂಗಳೂರು, ಆಗಸ್ಟ್ 01 : ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಓದಲ್ಪಟ್ಟ, ಚರ್ಚಿಸಲ್ಪಟ್ಟ ಸುದ್ದಿಗಳ ಸಂಗ್ರಹ ಇಲ್ಲಿದೆ. ಕರ್ನಾಟಕ ಜಿಲ್ಲಾಸುದ್ದಿ, ಕ್ರೀಡೆ, ಉದ್ಯೋಗ, ಜ್ಯೋತಿಷ್ಯ, ರಾಜಕೀಯ ಸೇರಿದಂತೆ ದೇಶ -ವಿದೇಶದ ಸುದ್ದಿಗಳು ಇದರಲ್ಲಿ ಸೇರಿವೆ.
ಅತಿ ಹೆಚ್ಚು ವೀಕ್ಷಿಸಲ್ಪಟ್ಟ, ಓದುಗರಿಂದ ಹೆಚ್ಚು ಕಾಮೆಂಟ್ ಪಡೆದ ಪೋಸ್ಟ್ ಗಳ ಪೈಕಿ ವೈವಿಧ್ಯಮಯ ಸುದ್ದಿಗಳ ಜತೆ ಸಾರ್ವಜನಿಕರ ಟೀಕೆ ಟಿಪ್ಪಣಿಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗಿದೆ. ತೀರಾ ಕೆಟ್ಟ ಭಾಷೆ ಬಳಕೆ ಕಾಮೆಂಟ್ ಗಳನ್ನು ಅರಗಿಸಿಕೊಂಡು, ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಎಂದಿನಂತೆ ನಮ್ಮನ್ನು ತಿದ್ದಿ ತೀಡುತ್ತಿರುವ ಓದುಗ ಮಹಾ ಪ್ರಭುಗಳಿಗೆ ನಮ್ಮ ತಂಡ ಆಭಾರಿಯಾಗಿದೆ.
2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ವೆಬ್ ತಾಣ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ).
ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ. ಮೊಬೈಲ್ ಫೋನಿನಲ್ಲಿ ಒನ್ ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ವಿಹರಿಸುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ವಿಡಿಯೋ ಇಲ್ಲಿದೆ ನೋಡಿ...
ಅಚ್ಚರಿ ತಂದ ಪಿಡಿಒ ನೇಮಕಾತಿ ಸುದ್ದಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಗ್ರಾಮ ಪ೦ಚಾಯಿತಿ ಕಾರ್ಯದರ್ಶಿ ಗ್ರೇಡ್-1 ವೃ೦ದದ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ ಸುದ್ದಿ ಹೆಚ್ಚು ಸದ್ದು ಮಾಡಿತ್ತು. 2016ರ ನೇಮಕಾತಿ ಪ್ರಕ್ರಿಯೆ ಬಗ್ಗೆ ಸುದ್ದಿ ಇದ್ದರೂ ಈ ಬಾರಿಯ ನೇಮಕಾತಿಗೆ ಮುನ್ನುಡಿಯಂತೆ ಓದುಗರು ಈ ಬಗ್ಗೆ ಹೆಚ್ಚು ಚರ್ಚಿಸಿದರು.
ರೋಹಿಣಿ ಸಿಂಧೂರಿ ವರ್ಗಾವಣೆ
ಭೀಮನ ಅಮಾವಾಸ್ಯೆ
ಇಂದಿರಾಗಾಂಧಿ ಬಗ್ಗೆ ಸುದ್ದಿ
ರವಿಬೆಳೆಗೆರೆ ಹಾಗೂ ಸಿದ್ದರಾಮಯ್ಯ
ನೀವೆಲ್ಲ ನೆನಪಾಗ್ತೀರಿ. ನಾವು ಕೆಲ ಪತ್ರಕರ್ತರು, ಕೆಲ ಸಂಘಟನೆಗಳು ಈ ಬಾರಿ ಸಿದ್ರಾಮಯ್ಯನ ಪಂಚೆ ಪೀಕಲು ನಿರ್ಧರಿಸಿದ್ದೇವೆ. ಆತನ ಕಥೆ ಮುಗಿಸ್ತೇವೆ. "killiing the messenger" ಎಂಬ ಮಾತಿದೆ: ದೂತನನ್ನು ಕೊಂದು ಬಿಡು ಅಂತ. ಪತ್ರಕರ್ತ ಒಬ್ಬ ನಿರಪರಾಧಿ ದೂತ. ಅವನನ್ನೇ ಕೊಂದು ಬಿಟ್ಟಿದ್ದಾರೆ? ಬಿಂದಾಸ್ ಬರೀತಾ ಕೂತವನಿಗೆ ಈ ಶಿಕ್ಷೆ. ಇನ್ನಷ್ಟು ಓದಿ
ನಟಿ ರಮ್ಯಾ ಬಾರ್ನಾ ಮದುವೆ
ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರ ಸಹೋದರಿಯ ಪುತ್ರ ಫಹಾನ್ ಅವರನ್ನು ವರಿಸಿರುವುದಾಗಿ 'ಹನಿ ಹನಿ' ಖ್ಯಾತಿಯ ಕನ್ನಡ ನಟಿ ರಮ್ಯಾ ಬಾರ್ನಾ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ವಾಹಿನಿಯೊಂದರ ಬಳಿ ಮಾತನಾಡಿದ ಅವರು, ಮನೆಯಲ್ಲಿ ತಮ್ಮ ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣದಿಂದಲೇ ವಿವಾಹದ ವಿಚಾರವನ್ನು ತಾವು ಗುಟ್ಟಾಗಿಟ್ಟುಕೊಂಡಿದ್ದಾಗಿ ಹೇಳಿದರು.
ಕೋಡಿಶ್ರೀಗಳ ಭವಿಷ್ಯ
ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರು ಹಾಸನದಲ್ಲಿ ಶನಿವಾರ (ಜು 1) ಮುಂದಿನ ಅಸೆಂಬ್ಲಿ ಚುನಾವಣೆಯ ಬಗ್ಗೆ ಮಾರ್ಮಿಕವಾಗಿ ಭವಿಷ್ಯ ನುಡಿದಿದ್ದಾರೆ.
ಎಲ್ ಐ ಸಿಗೆ ಭಾರಿ ನಷ್ಟ
ಐಟಿಸಿ ಷೇರುಗಳ ಮೇಲೆ ಅವಲಂಬಿತವಾಗಿದ್ದ ಜೀವವಿಮಾ ನಿಗಮ (ಎಲ್ ಐಸಿ) ಸಂಸ್ಥೆಯು ಮಂಗಳವಾರ ಮಧ್ಯಾಹ್ನದ ವೇಳೆಗೆ ಭಾರಿ ನಷ್ಟ ಅನುಭವಿಸಿದೆ. ಷೇರುಪೇಟೆಯಲ್ಲಿ 30 ನಿಮಿಷಗಳಲ್ಲಿ 7,000 ಕೋಟಿ ರು ಕಳೆದುಕೊಂಡಿತು.
ವೈರಲ್ ಆದ ಸೆಲ್ಫಿ
ಇಂಥದೊಂದು ಹೃದಯ ಕಲಕುವ, ಮನಸ್ಸನ್ನು ಒದ್ದೆಮುದ್ದೆ ಮಾಡುವ ಘಟನೆಯೊಂದು ಕೇರಳದ ಕೊಚ್ಚಿಯಲ್ಲಿ ನಡೆದಿದೆ. ರಮೇಶ್ ಎಂಬುವವರು ತಾವು ಅತಿಯಾಗಿ ಪ್ರೀತಿಸುವ ಹೆಂಡತಿ 'ಅಚ್ಚು'ವಿನ ಜೊತೆ ತೆಗೆಸಿಕೊಂಡ ಫೋಟೋ ಮತ್ತು ಅದರ ಹಿಂದಿನ ಕಥೆ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರಿನ ಪೊರೆ ಕಟ್ಟುವುದರಲ್ಲಿ ಸಂಶಯವೇ ಇಲ್ಲ.
ಸಿದ್ದರಾಮಯ್ಯ ಕೇಳಿದ ಪ್ರಶ್ನೆ
ನೀಲಿಚಿತ್ರ ಯಾನೆ ಬ್ಲೂಫಿಲಂ ಅಂದರೆ ಏನು ಗೊತ್ತೇನ್ರೀ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಯ ಅಥಣಿಯ ಸಾವಿರಾರು ಜನತೆಯನ್ನು ಕೇಳಿದ್ದಾರೆ.
ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸೆಂಬ್ಲಿ ಅನ್ನೋದು ದೇಗುಲ ಇದ್ದ ಹಾಗೆ. ಅಲ್ಲಿ ನೀವು ಆರಿಸಿದ ಜನಪ್ರತಿನಿಧಿ ಬ್ಲೂಫಿಲಂ ನೋಡುತ್ತಾರಲ್ಲಾ,ನೀವು ನಿಮ್ಮ ನಾಯಕರನ್ನು ಕೇಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಯಾವ ರಾಶಿಗೆ ಏನು ಫಲ
ಭಾರತ- ಚೀನಾ ಯುದ್ಧ
ಎಚ್ಡಿಕೆ ಕ್ಯಾಬ್ಸ್
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಬಲದಲ್ಲಿ ಎಚ್ ಡಿಕೆ ಕ್ಯಾಬ್ಸ್ ರಸ್ತೆಗಿಳಿಯುವುದು ಪಕ್ಕಾ ಆಗಿದೆ. ಆಗಸ್ಟ್ ತಿಂಗಳ ಮಧ್ಯದಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಎಚ್ ಡಿಕೆ ಕ್ಯಾಬ್ಸ್ ಸಂಚಾರ ಆರಂಭಿಸಲಿದೆ. ಈಗಾಗಲೇ ಬೆಂಗಳೂರಿನ ಇಪ್ಪತ್ತು ಸಾವಿರ ಚಾಲಕರು ಇದಕ್ಕೆ ಸೇರಿದ್ದಾರೆ ಎಂದು ಕಂಪೆನಿ ಹೇಳಿಕೊಂಡಿದೆ.
ಪ್ರಜ್ವಲ್ ಕ್ಷಮೆ
ಕಾನ್ಸ್ ಟೇಬಲ್ ಹುದ್ದೆ
ಖಾಲಿ ಇರುವ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪೊಲೀಸ್ ಇಲಾಖೆ ಅಧಿಸೂಚನೆ ಹೊರಡಿಸಿದೆ.