ಚಿತ್ರಗಳಲ್ಲಿ : ದೇಶ , ವಿದೇಶಗಳ ಸಂಕ್ಷಿಪ್ತ ಸುದ್ದಿಗಳು
ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.
ಬೆಂಗಳೂರು, ಫೆಬ್ರವರಿ 19: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ...
ಕೋಳಿ, ಗೂಳಿ, ಟಗರು ಫೈಟ್ ಬಗ್ಗೆ ಕೇಳಿರಬಹುದು. ಆದರೆ, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿನಲ್ಲಿ ಸಾಕು ನಾಯಿಗಳ ನಡುವೆ ಫೈಟ್ ನಡೆಸಲಾಗುತ್ತದೆ. ಚಳಿಗಾಲದಲ್ಲಿ ಇದೊಂದು ಮೋಜಿನ ಆಟವಾಗಿದೆ. ಈ ಆಟದ ಚಿತ್ರದ ಇಲ್ಲಿದೆ ನೋಡಿ..
ಏರೋ ಇಂಡಿಯಾ 2017 ರಂದು ಫೆಬ್ರವರಿ 18ರಂದು ಮುಕ್ತಾಯ ಕಂಡಿದೆ. ಇಳಿ ಸಂಜೆ ವೇಳೆಯಲ್ಲಿ ಸೂರ್ಯಾಸ್ತದ ಸಂದರ್ಭದಲ್ಲಿ ಯೋಧರೊಬ್ಬರು ಸೂರ್ಯಾಸ್ತನ ನೆರಳಿನಲ್ಲಿ ಕಂಡಿದ್ದು ಹೇಗೆ ? ಸುಂದರ ಚಿತ್ರ ನಿಮಗಾಗಿ ಪಿಟಿಐ ಚಿತ್ರಗಳು ಇಲ್ಲಿವೆ.
ಕಾಬೂಲಿನಲ್ಲಿ ನಾಯಿ ಫೈಟ್
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿನಲ್ಲಿ ಸಾಕು ನಾಯಿಗಳ ನಡುವೆ ಫೈಟ್ ನಡೆಸಲಾಗುತ್ತದೆ. ಚಳಿಗಾಲದಲ್ಲಿ ಇದೊಂದು ಮೋಜಿನ ಆಟವಾಗಿದೆ. ಅದರೆ, ಈ ಆಟದಲ್ಲಿ ನಾಯಿಗಳು ಸಾಯುವ ತನಕ ಆಡಿಸುವುದಿಲ್ಲ. ಒಂದು ನಾಯಿ ಪೆಟ್ಟು ತಿಂದು ಹಣ್ಣಾಗಿ ಬಿದ್ದರೆ ಅಥವಾ ಓಡಿ ಹೋದರೆ ಆಟ ಮುಕ್ತಾಯ ಎಂದು ಹಾಡಲಾಗುತ್ತದೆ.
ಎಡಪ್ಪಾಡಿ ಕೆ ಪಳನಿಸ್ವಾಮಿ
ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ವ್ಯಕ್ತಿಚಿತ್ರ ಇರುವ ಪಿಟಿಐ ಗ್ರಾಫಿಕ್ಸ್
ಕಾಲೇಜು ಹುಡುಗಿಯರ ಸೆಲ್ಫಿ
ಪಟಿಯಾಲ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜಿನ ವಿದ್ಯಾಥಿನಿಯರು, ಸಾಂಪ್ರದಾಯಿಕ ಉಡುಗೆ ತೊಟ್ಟು ಸೆಲ್ಫಿ ತೆಗೆದುಕೊಳ್ಳುತ್ತಿರುವ ಚಿತ್ರ.
ಏರೋ ಇಂಡಿಯಾ
ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ 11ನೇ ಏರೋ ಇಂಡಿಯಾ ಮುಕ್ತಾಯಗೊಂಡಿದೆ. ಸಂಜೆ ಸೂರ್ಯನ ಹಿನ್ನಲೆಯಲ್ಲಿ ಫೋನ್ ಕಾಲ್ ನಲ್ಲಿ ನಿರತನಾಗಿರುವ ಯೋಧರೊಬ್ಬರ ಚಿತ್ರವನ್ನು ಪಿಟಿಐ ಛಾಯಗ್ರಾಹಕ ಶೈಲೇಂದ್ರ ಭೋಜಕ್ ತೆಗೆದಿದ್ದಾರೆ.
ಸ್ಟಾಲಿನ್
ತಮಿಳುನಾಡು ವಿಧಾನಸಭೆಯಲ್ಲಿ ಪಳನಿಸ್ವಾಮಿ ಅವರು ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ನನ್ನ ಬಟ್ಟೆ ಹರಿಯಲಾಗಿದೆ ಎಂದು ಡಿಎಂಕೆ ಮುಖಂಡ ಸ್ಟಾಲಿನ್ ಅವರು ಹೊರಕ್ಕೆ ಬಂದಿದ್ದು ಹೀಗೆ
ಅಂಧರ ವಿಶ್ವಕಪ್ ವಿಜೇತರು
ಚಿಕ್ಕಮಗಳೂರು: ಏಕಲವ ಪ್ರಶಸ್ತಿ ವಿಜೇತ ಜೆಎಂ ಶವದ್ ಹಾಗೂ ಅಂಧರ ಕ್ರಿಕೆಟ್ ತಂಡದ ಬೌಲರ್ ಆರ್ ಸುನಿಲ್ ಅವರಿಗೆ ಆತ್ಮೀಯ ಸ್ವಾಗತ ಕೋರಲಾಗಿದೆ. ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಸುನಿಲ್ ಅವರು ನಾಲ್ಕು ವಿಕೆಟ್ ಕಿತ್ತಿದ್ದರು. ಆಶಾಕಿರಣ ಅಂಧರ ಶಾಲೆಗೆ ಭೇಟಿ ನೀಡಿದರು.
ದಿಗ್ಗಜರ ಸಮಾಗಮ
ಮುಂಬೈ: ಹರ್ಷ್ ಅವರ ದ ಟಾರ್ಚ್ ಬೇರರ್ ಕೃತಿಯನ್ನು ಲೋಕಾರ್ಪಣೆ ಮಾಡಿದ ಅಮಿತಾಬ್ ಬಚ್ಚನ್, ನೀತು ಅಂಬಾನಿ, ಪಂಡಿತ್ ಶಿವಕುಮಾರ್ ಶರ್ಮ, ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್