ಹೆಣ್ಣುಮಗು ಎಂಬ ಕಾರಣಕ್ಕೆ ಕ್ರಿಮಿನಾಶಕ ಹಾಕಿ ತಾಯಿಯೇ ಕೊಂದಳು!
ಹೆಣ್ಣುಮಗು ಆದರೆ ವಿಚ್ಛೇದನ ನೀಡ್ತೀನಿ ಎಂದು ಪತಿ ಬೆದರಿಕೆ ಹಾಕಿದ ಕಾರಣಕ್ಕೆ ತೆಲಂಗಾಣದಲ್ಲಿ ಮಹಿಳೆಯೊಬ್ಬಳು ತನ್ನ ಒಂದು ತಿಂಗಳ ಮಗುವಿಗೆ ಹಾಲಿನಲ್ಲಿ ಕ್ರಿಮಿನಾಶಕ ಹಾಕಿ ಕೊಂದಿದ್ದಾಳೆ
ಹೈದರಾಬಾದ್, ಫೆಬ್ರವರಿ 14: ತೆಲಂಗಾಣದಲ್ಲಿ ಮಹಿಳೆಯೊಬ್ಬಳು ಕ್ರಿಮಿನಾಶಕ ಬೆರೆಸಿದ ಹಾಲು ಕುಡಿಸಿ, ತನ್ನ ನವಜಾತ ಶಿಶುವನ್ನು ಕೊಂದಿದ್ದಾಳೆ. ಇನ್ನೊಂದು ಹೆಣ್ಣು ಮಗು ಆದರೆ ವಿಚ್ಛೇದನ ಕೊಡ್ತೀನಿ ಎಂದು ಪತಿ ಹೇಳಿದ ಕಾರಣಕ್ಕೆ ಅ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಸೋಮವಾರ ಈ ಪ್ರಕರಣ ಬೆಳಕಿಗೆ ಬಂದ ಮೇಲೆ ನಾಗಮಣಿ ಹಾಗೂ ಆಕೆ ಪತಿ ರಾಮವತ್ ಜಯರಾಮ್ ನನ್ನು ಬಂಧಿಸಿದ್ದಾರೆ.
ನಲ್ಗೊಂಡ ಜಿಲ್ಲೆಯ ದೇವರಕೊಂಡ ಬುಡಕಟ್ಟು ಪ್ರದೇಶದ ಪದ್ಮಾವತಿಯಲ್ಲಿ ನಾಗಮಣಿ ವಾಸವಿದ್ದಾಳೆ. ಈ ತಿಂಗಳು ಹೆಣ್ಣುಮಗುವಿಗೆ ಆಕೆ ಜನ್ಮ ನೀಡಿದ್ದಳು. ನಾಲ್ಕು ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿ, ಫೆಬ್ರವರಿ 9ರಂದು ದೇವರಕೊಂಡ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿತ್ತು.[ಬೆಂಗಳೂರಿನಲ್ಲಿ ಚರ್ಚಿನ ಮುಂದೆಯೇ ಕೊಚ್ಚಿಕೊಂದರು]
ಮಗು ಸಾವಿನ ಕಾರಣದ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ವೇಳೆ ಗೊತ್ತಾಗಿದ್ದೇನೆಂದರೆ, ಇನ್ನೊಂದು ಹೆಣ್ಣುಮಗು ಆದರೆ ವಿಚ್ಛೇದನ ನೀಡಿ, ಮತ್ತೊಂದು ಮದುವೆ ಆಗುವುದಾಗಿ ಆ ಮಹಿಳೆಯ ಪತಿ ಬೆದರಿಕೆ ಹಾಕಿದ್ದ. ಈ ದಂಪತಿಗೆ ಇದು ಮೂರನೇ ಹೆಣ್ಣುಮಗುವಾಗಿತ್ತು.[ಎಸ್ಪಿ ಶಾಸಕನ ಮೇಲೆ ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆ ಶವ ಪತ್ತೆ]
ದೊಡ್ಡ ಮಗುವನ್ನು ಆ ಮಹಿಳೆಯ ಅತ್ತೆ-ಮಾವ ನೋಡಿಕೊಳ್ಳುತ್ತಿದ್ದಾರೆ. ಅದಕ್ಕೆ ಈಗ ಐದು ವರ್ಷ. ಎರಡನೇ ಮಗು ಹುಟ್ಟಿದ ನಂತರ ಮೃತಪಟ್ಟಿತ್ತು. ಮೂರನೆಯದು ಹೆಣ್ಣುಮಗುವಾದ್ದರಿಂದ ಆ ಮಹಿಳೆ ಇಂಥ ಕೃತ್ಯ ಎಸಗಿದ್ದಾಳೆ