ಯಮಯಾತನೆ ಅನುಭವಿಸಿ ನಮ್ಮನ್ನಗಲಿದ 'ಶಕ್ತಿಮಾನ್'
ನವದೆಹಲಿ, ಮಾರ್ಚ್ 17: ಉತ್ತರಾಖಂಡದ ಬಿಜೆಪಿ ಮುಖಂಡರಿಂದ ಹಲ್ಲೆಗೊಳಗಾಗಿದ್ದ ಕುದುರೆ ಶಕ್ತಿಮಾನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಸಾಮಾಜಿಕ ತಾಣಗಳಲ್ಲೂ ಅಗಲಿದ ಶಕ್ತಿಮಾನ್ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ.
ಪ್ರಮೋದ್ ಬೋರಾ, ಗಣೇಶ್ ಜೋಶಿ ಸೇರಿದಂತೆ ಉತ್ತರಾಖಂಡದ ಬಿಜೆಪಿ ನಾಯಕರು ಪ್ರತಿಭಟನೆಯೊಂದರ ವೇಳೆ ಕುದುರೆ ಕಾಲನ್ನು ಮುರಿದು ಹಾಕಿದ್ದರು. ಅಂತಿಮವಾಗಿ ಶಕ್ತಿಮಾನ್ ತನ್ನ ಇಹಲೋಕ ಯಾತ್ರೆಯನ್ನು ಮುಗಿಸಿದೆ. 45 ದಿನ ಯಾತನೆ ಅನುಭವಿಸಿದ ಕುದುರೆ ಬುಧವಾರ ಸಂಜೆ ಸಾವನ್ನಪ್ಪಿದೆ.[ಪೊಲೀಸ್ ಕುದುರೆ ಕಾಲು ಮುರಿದ್ರೆ ಸುಮ್ನೆ ಬಿಟ್ಟಾರೆಯೆ?]
ಡೆಹರಾಡೂನ್ ನಲ್ಲಿ ಮಾರ್ಚ್ 14 ರಂದು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭನೆ ವೇಳೆ ಗಣೇಶ್ ಜೋಶಿ ಸೇರಿದಂತೆ ಅನೇಕರು ಪೊಲೀಸ್ ಕುದುರೆ ಮೇಲೆ ಅಮಾನವೀಯ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಕುದುರೆ ಗಂಭೀರ ಗಾಯಗೊಂಡಿತ್ತು.['ಕುದುರೆ ಕಾಲು ಮುರಿದಿದ್ರೆ, ನನ್ನ ಕಾಲು ಮುರಿಯಲಿ']
ನಡುರಸ್ತೆಯಲ್ಲಿ ಕುದುರೆ ಕಾಲು ಮುರಿದ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, 'ನಾನು ಯಾವ ತಪ್ಪು ಮಾಡಿಲ್ಲ, ನಾನು ತಪ್ಪಿತಸ್ಥ ಎಂದು ಸಾಬೀತಾದರೆ ನನ್ನ ಕಾಲನ್ನು ಕಡಿದು ಹಾಕಿ' ಎಂದು ಜೋಶಿ ಅವರು ಬುಧವಾರ ಘೋಷಣೆ ಸಹ ಹಾಕಿದ್ದರು. ಇದೀಗ ಕುದುರೆ ಸಾವನ್ನಪ್ಪಿದ್ದು ಮುಖಂಡರ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕು.[ಜಗತ್ತಿನ ಹಿರಿಯ ಶ್ವಾನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ]
#Shaktiman died because of the state govt’s mistake & no proper treatment was provided initially and he was used to score political mileage
— Uttarakhand BJP (@UttarakhandBJP) April 20, 2016
Sad to know that Shaktiman has died. If we human beings can't protect animal rights,from whom we will expect humanity & morality? #Shaktiman
— Rajeev Shukla (@ShuklaRajiv) April 20, 2016
Poor Shaktimaan don't worry dead cows etc will give you company.
— Awesome Panda (@LullPanda) April 20, 2016
RIP #Shaktiman & all unnamed uncared animals. https://t.co/xsMrYJB7sD