ಅ.18ರ ತನಕ ಕಾವೇರಿ ನಿರ್ವಹಣಾ ಮಂಡಳಿ ರಚನೆ ಇಲ್ಲ
ನವದೆಹಲಿ, ಅಕ್ಟೋಬರ್ 04: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ಕೈಗೆತ್ತಿಕೊಂಡಿತು. ಈ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಅಕ್ಟೋಬರ್ 18ಕ್ಕೆ ಮುಂದೂಡಲಾಗಿದೆ.
ಅಕ್ಟೋಬರ್
04ರೊಳಗೆ
ಕಾವೇರಿ
ನಿರ್ವಹಣಾ
ಮಂಡಳಿ
ರಚಿಸುವಂತೆ
ಕೇಂದ್ರ
ಸರ್ಕಾರಕ್ಕೆ
ಸುಪ್ರೀಂಕೋರ್ಟ್
ಸೆಪ್ಟೆಂಬರ್
30ರಂದು
ನಿರ್ದೇಶಿಸಿತ್ತು.
ಇದಕ್ಕೆ
ಅಟಾರ್ನಿ
ಜನರಲ್
ಮುಕುಲ್
ರೊಹ್ಟಗಿ
ಕೂಡಾ
ಒಪ್ಪಿಗೆ
ಸೂಚಿಸಿದ್ದರು.
ಆದರೆ,
ನಂತರ
ನಡೆದ
ಬೆಳವಣಿಗೆಯಲ್ಲಿ
ಮಾಜಿ
ಪ್ರಧಾನಿ
ಎಚ್
ಡಿ
ದೇವೇಗೌಡರು
ಹಾಗೂ
ಪ್ರಧಾನಿ
ಮೋದಿ
ಅವರ
ಮಧ್ಯಸ್ಥಿಕೆಯಲ್ಲಿ
ನಿರ್ವಹಣಾ
ಮಂಡಳಿ
ರಚನೆ
ವಿರುದ್ಧ
ಅರ್ಜಿ
ಸಲ್ಲಿಸಲು
ತೀರ್ಮಾನಿಸಲಾಯಿತು.
ಎಜಿ ಮುಕುಲ್ ಹೇಳಿದ್ದೇನು?: ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂಕೋರ್ಟ್ ಆದೇಶ ಮಾಡುವಂತಿಲ್ಲ. ಶಾಸಕಾಂಗದ ನೀತಿ ನಿಯಮಗಳನ್ನು ಪಾಲಿಸಬೇಕು. ಮಂಡಳಿ ರಚನೆಗೆ ಕರ್ನಾಟಕ ಹಾಗೂ ತಮಿಳುನಾಡಿನಿಂದ ವಿರೋಧವಿದೆ. ಸದ್ಯಕ್ಕೆ ಮಂಡಳಿ ರಚನೆಯನ್ನು ಮುಂದೂಡುವಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ತಿಳಿಸಿದರು.
ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠದ ಮುಂದೆ ಅರ್ಜಿ ವಿಚಾರಣೆ ಬಾಕಿ ಇರುವಾಗ, ಏಕಪಕ್ಷೀಯವಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆದೇಶಿಸಿರುವುದು ಸರಿಯಲ್ಲ. ಇದು ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಮುಕುಲ್ ಅವರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ ದೀಪಕ್ ಮಿಶ್ರಾ ಹಾಗೂ ನ್ಯಾ ಉದಯ್ ಲಲಿತ್ ಅವರಿದ್ದ ನ್ಯಾಯಪೀಠ, ಅಕ್ಟೋಬರ್ 17ರಂದು ಕಾವೇರಿ ತಾಂತ್ರಿಕ ಉನ್ನತಾಧಿಕಾರಿಗಳ ತಂಡ ನೀಡುವ ವರದಿಯನ್ನು ಆಧಾರಿಸಿ ಮುಂದಿನ ವಿಚಾರಣೆ ನಡೆಸಲಾಗುವುದು ಎಂದರು.