ಎಲ್ಲೆ ಮೀರಿದ ಸಂಘರ್ಷ: ಉದ್ಘಾಟನೆಯ ಮರುದಿನವೇ RSS ಕಚೇರಿ ಧ್ವಂಸ
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಕಚೇರಿ ಉದ್ಘಾಟನೆಗೊಂಡ ಮರುದಿನವೇ ಧ್ವಂಸಗೊಂಡಿದೆ. ಕೇರಳ ಕಣ್ಣೂರಿನ ಪೆರುಂತಟ್ಟಿಲ್ ಎನ್ನುವಲ್ಲಿ ಹೊಸ ಕಚೇರಿ ಉದ್ಘಾಟನೆಗೊಂಡಿತ್ತು.
ಕಣ್ಣೂರು, ಮೇ 1: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಕಚೇರಿ ಉದ್ಘಾಟನೆಗೊಂಡ ಮರುದಿನವೇ ಧ್ವಂಸಗೊಂಡಿದೆ.
ಕೇರಳ ಕಣ್ಣೂರಿನ ಪೆರುಂತಟ್ಟಿಲ್ ಎನ್ನುವಲ್ಲಿ RSSನ ನೂತನ ಕಚೇರಿ ಏಪ್ರಿಲ್ 30ರಂದು ಉದ್ಘಾಟನೆಗೊಂಡಿತ್ತು. 'ಸೇವಾಲಯಂ' ಹೆಸರಿನ ಈ RSS ಕಚೇರಿಯನ್ನು ಸಂಘಟನೆಯ ಹಿರಿಯ ಮುಖಂಡ ನಂದಕುಮಾರ್ ಉದ್ಘಾಟಿಸಿದ್ದರು. (ಕೇರಳದಲ್ಲಿ ಸಂಘ ಪರಿವಾರದ ತಲೆಗಳಿಗೆ ಬೆಲೆಯಿಲ್ಲ)
ಉದ್ಘಾಟನೆಯ ಮರುದಿನವೇ (ಮೇ 1) ಕಚೇರಿಯನ್ನು ಕೆಲವು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಕಚೇರಿಯ ಟೇಬಲ್, ಕುರ್ಚಿ, ಹೂಕುಂಡ ಸೇರಿದಂತೆ ಕಚೇರಿಯಲ್ಲಿನ ವಸ್ತುಗಳನ್ನು ಧ್ವಂಸಗೊಳಿಸಿ ಚೆಲ್ಲಾಪಿಲ್ಲಿಗೊಳಿಸಿದ್ದಾರೆ.
ನಿನ್ನೆ ಕಚೇರಿ ಉದ್ಘಾಟನೆಗೊಂಡಿತ್ತು, ಇಂದು ಎಡಪಕ್ಷದ ಗೂಂಡಾಗಳು ಕಚೇರಿಯನ್ನು ಧ್ವಂಸಗೊಳಿಸಿದ್ದಾರೆಂದು RSS ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ಕೇರಳದ ಕಣ್ಣೂರು, ತ್ರಿಶೂರು, ಕೊಲ್ಲಂ, ಕೋಝಿಕ್ಕೋಡ್ ಮುಂತಾದ ಕಡೆ ಎಡಪಕ್ಷಗಳು ಮತ್ತು ಹಿಂದೂಪರ ಸಂಘಟನೆಗಳ ನಡುವೆ ಸಂಘರ್ಷ ಇಂದು ನಿನ್ನೆಯದಲ್ಲ.
RSS office vandalised within 24 hours of it's inaugural at Kannur. Yesterday RSS Karyalay was inaugurated, today Vandalised by LeftGoons. pic.twitter.com/YwyVkWlQ7O
— RSS (@RSS_Org) May 1, 2017
ಅದರಲ್ಲೂ, ಪಿಣರಾಯಿ ವಿಜಯನ್ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಭಾಗದಲ್ಲಿ ಸಂಘರ್ಷಗಳು ಎಲ್ಲೆ ಮೀರಿವೆ.