ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಹುಲ್ ಗಾಂಧಿಗೆ ಸಹರನ್ ಪುರ ಭೇಟಿ ಅನುಮತಿ ನಿರಾಕರಣೆ
ಮೇ 5ರಂದು ಶಬ್ಬೀರ್ ಪುರ ಗ್ರಾಮದಲ್ಲಿ ಸವರ್ಣೀಯರು ಹಾಗೂ ದಲಿತರ ನಡುವೆ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಭೇಟಿ ನೀಡಲು ಯತ್ನಿಸಿದ್ದರು.
ಲಕ್ನೋ, ಮೇ 26: ಸಹರನ್ ಪುರ ಜಿಲ್ಲೆಯ ಗಲಭೆ ಪೀಡಿತ ಗ್ರಾಮವಾದ ಶಬ್ಬೀರ್ ಪುರಕ್ಕೆ ಭೇಟಿ ನೀಡಲು ನಿರ್ಧರಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಜಿಲ್ಲೆಯನ್ನು ಪ್ರವೇಶಿಸಲು ಅಲ್ಲಿನ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ರಾಹುಲ್ ಗಾಂಧಿಯವರ ಸಹರನ್ ಪುರ ಭೇಟಿ ಶನಿವಾರಕ್ಕೆ ನಿಗದಿಯಾಗಿತ್ತು. ಈ ಬಗ್ಗೆ ಜಿಲ್ಲೆಯ ಹೊಸ ಪೊಲೀಸ್ ವರಿಷ್ಠಾಧಿಕಾರಿ ಬಬ್ಲು ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮೇ 5ರಂದು ಶಬ್ಬೀರ್ ಪುರ ಗ್ರಾಮದಲ್ಲಿ ಸವರ್ಣೀಯರು, ದಲಿತರಿಗೆ ಸೇರಿದ್ದ ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಹಿಂಸಾಚಾರ ಭುಗಿಲೆದ್ದಿತ್ತು.
Comments
English summary
The Saharanpur district authorities today refused permission to Congress Vice President Rahul Gandhi to visit the strife-torn district.
Story first published: Friday, May 26, 2017, 16:01 [IST]