ಚಿತ್ರಗಳಲ್ಲಿː ಶಬರಿಮಲೆಗೆ ಭಕ್ತರ ತಂಡ
ಶಬರಿಮಲೆ, ನ.18: ಹಿಂದೂಗಳ ಪವಿತ್ರ ಕ್ಷೇತ್ರ ಶಬರಿಮಲೆಗೆ ಭಕ್ತಾದಿಗಳ ಪ್ರವಾಹ ಮಂಗಳವಾರದಿಂದ ಆರಂಭವಾಗಿದೆ. ಮಕರ ಜ್ಯೋತಿ ದರ್ಶನವಾಗುವವರೆಗೂ ಪ್ರತಿದಿನ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ.
ನವೆಂಬರ್ 18 ರಂದು ಆಗಮಿಸಿದ್ದ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ಮೆಟ್ಟಿಲುಗಳನ್ನು ಏರಿ ಹರಕೆ ತೀರಿಸಿದರು. ಈ ಬಾರಿ ಸಂಕ್ರಾಂತಿ ಜನವರಿ 14 ಕ್ಕೆ ಬಂದಿದ್ದು ಅಲ್ಲಿಯವರೆಗೆ ವಿವಿಧ ರಾಜ್ಯಗಳಿಂದ ಜನ ಬರುತ್ತಲೇ ಇರುತ್ತಾರೆ. ಮಂಗಳವಾರ ನಡೆದ ವಿವಿಧ ಪೂಜೆ ಮತ್ತು ಭಕ್ತರ ಪಾಲ್ಗೊಳ್ಳುವಿಕೆಯ ಚಿತ್ರಗಳು....[ಸ್ವಾಮಿಯೇ ಶರಣಂ ಅಯ್ಯಪ್ಪ, ಸರತಿ ಸಾಲಲ್ಲಿ ಬನ್ರಪ್ಪ]
ಭಕ್ತರ ಪ್ರವಾಹ
ಮೆಟ್ಟಿಲುಗಳನ್ನೇರಿದ ಭಕ್ತರು
ಕೊಂಚ ವಿರಾಮ
ಕಾಲ್ನಡಿಗೆಯಲ್ಲಿ ಸಾಗುತ್ತಿರುವ ವೇಳೆ ವಿಶ್ರಾಂತಿ ಪಡೆದ ಕುಟುಂಬ.
ದರ್ಶನಕ್ಕೆ ತರಳೋಣ
ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಲು ಸಿದ್ಧರಾದ ಭಕ್ತರು.
ಸಂಗೀತವೂ ಇದೆ
ದರ್ಶನದ ನಂತರ ಸಂಗೀತ ಸುಧೆ.
ಬಾಲ ಸ್ವಾಮಿ
ಅಯ್ಯಪ್ಪನ ದರ್ಶನಕ್ಕೆ ಬಂದ ಬಾಲ ಸ್ವಾಮಿ.
ನೂಕು ನುಗ್ಗಲು
ಸೋಮವಾರದಿಂದ ಪ್ರವೇಶ ಆರಂಭವಾಗಿದ್ದು ಮಂಗಳವಾರ ಕಂಡು ಬಂದ ಭಕ್ತರ ನೂಕು ನುಗ್ಗಲು.
ಅಝಿ ಪೂಜಾ
ಅಗ್ನಿ ದೇವನನ್ನು ಭಜಿಸಲು ಭಕ್ತರಿಂದ ಅಝಿ ಪೂಜಾ.