ಅಗಲಿದ 'ಶಕ್ತಿಮಾನ್' ಹೆಸರಲ್ಲಿ ಪೆಟ್ರೋಲ್ ಬಂಕ್
ಡೆಹರಾಡೂನ್, ಏಪ್ರಿಲ್, 29: ಉತ್ತರಾಖಂಡದ ಬಿಜೆಪಿ ಮುಖಂಡರಿಂದ ಹಲ್ಲೆಗೊಳಗಾಗಿ ಪ್ರಾಣ ಕಳೆದುಕೊಂಡಿದ್ದ ಪೊಲೀಸ್ ಕುದುರೆ ಶಕ್ತಿಮಾನ್ ಹೆಸರಿನಲ್ಲಿ ಪೆಟ್ರೋಲ್ ಬಂಕ್ ನಿರ್ಮಿಸಲಾಗುತ್ತಿದೆ.
ಉತ್ತರಾಖಂಡದ ಡಿಜಿಪಿ ಬಿಎಸ್ ಸಿಂಧು ಶಕ್ತಿಮಾನ್ ಹೆಸರಿನ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಈ ಮೂಲಕ ಅಗಲಿದ ಪೊಲೀಸ್ ಕುದುರೆಯ ನೆನಪನ್ನು ಚಿರಸ್ಥಾಯಿ ಮಾಡಲು ಇಲಾಖೆ ಮುಂದಾಗಿದೆ.[ಯಮಯಾತನೆ ಅನುಭವಿಸಿ ನಮ್ಮನ್ನಗಲಿದ 'ಶಕ್ತಿಮಾನ್']
ಪೊಲೀಸ್ ಜನ ಕಲ್ಯಾಣ ಸಮಿತಿಯಿಂದ ಪೆಟ್ರೋಲ್ ಬಂಕ್ ನಿರ್ವಹಣೆ ಮಾಡಲಾಗುತ್ತದೆ. ಪೊಲೀಸ್ ಪ್ರಧಾನ ಕಚೇರಿಯಿಂದ 250 ಮೀಟರ್ ದೂರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.[ಕಾಲು ಮುರಿದು ಕೊಂದವರಿಗೆ 'ಶಕ್ತಿಮಾನ್' ಪತ್ರ]
ಡೆಹರಾಡೂನ್ ನಲ್ಲಿ ಮಾರ್ಚ್ 14 ರಂದು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಬಿಜೆಪಿ ಮುಖಂಡ ಗಣೇಶ್ ಜೋಶಿ ಸೇರಿದಂತೆ ಅನೇಕರು ಪೊಲೀಸ್ ಕುದುರೆ ಶಕ್ತಿಮಾನ್ ಮೇಲೆ ಅಮಾನವೀಯ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಕುದುರೆಯ ಕಾಲು ಮುರಿದು ಗಂಭೀರ ಗಾಯವಾಗಿತ್ತು. ನಿರಂತರ 45 ದಿನಗಳ ಕಾಲ ಯಮಯಾತನೆ ಅನುಭವಿಸಿದ ಕುದುರೆ ಚಿಕಿತ್ಸೆಗೆ ಸ್ಪಂದಿಸದೆ ಏಪ್ರಿಲ್ 20 ರಂದು ಸಾವನ್ನಪ್ಪಿತ್ತು.