ಪಠಾಣ್ ಕೋಟ್ ದಾಳಿ : ಪಾಕ್ ಜೊತೆ ಶಾಂತಿ ಮಾತುಕತೆ ಇಲ್ಲ
ಬೆಂಗಳೂರು, ಜನವರಿ 11 : 'ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ಸಂಚು ರೂಪಿಸಿದವರ ವಿರುದ್ಧ ಕ್ರಮ ಕೈಗೊಂಡರೆ ಮಾತ್ರ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲಾಗುತ್ತದೆ' ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಹೇಳಿದ್ದಾರೆ.
ಪತ್ರಿಕೆಯೊಂದಕ್ಕೆ
ಸಂದರ್ಶನ
ನೀಡಿರುವ
ಅಜಿತ್
ಡೋವಲ್
ಅವರು,
'ಜನವರಿ
15ರಂದು
ನಿಗದಿಯಾಗಿದ್ದ
ಭಾರತ
ಮತ್ತು
ಪಾಕಿಸ್ತಾನ
ವಿದೇಶಾಂಗ
ಕಾರ್ಯದರ್ಶಿಗಳ
ಸಭೆಯನ್ನು
ರದ್ದುಗೊಳಿಸಲಾಗಿದೆ.
ಪಠಾಣ್
ಕೋಟ್
ದಾಳಿಯ
ಸಂಚು
ರೂಪಿಸಿದವರ
ವಿರುದ್ಧ
ಕ್ರಮ
ಕೈಗೊಂಡರೆ
ಮಾತ್ರ
ಶಾಂತಿ
ಮಾತುಕತೆ
ನಡೆಸಲಾಗುತ್ತದೆ'
ಎಂದು
ತಿಳಿಸಿದ್ದಾರೆ.
[ಪಠಾಣ್
ಕೋಟ್
ಉಗ್ರರ
ದಾಳಿ
:
ಟೈಮ್
ಲೈನ್]
'ಪಠಾಣ್ ಕೋಟ್ ದಾಳಿಯ ಸಂಚು ರೂಪಿಸಿದವರ ವಿರುದ್ಧ ಪಾಕ್ ಕ್ರಮ ಕೈಗೊಂಡ ನಂತರ ಶಾಂತಿ ಮಾತುಕತೆಯನ್ನು ಮುಂದುವರೆಸಲಾಗುತ್ತದೆ. ಪಾಕ್ ಕೈಗೊಳ್ಳುವ ಕ್ರಮಗಳು ತೃಪ್ತಿದಾಯಕವಾಗಿರಬೇಕು' ಎಂದು ಡೋವಲ್ ಸ್ಪಷ್ಟಪಡಿಸಿದ್ದಾರೆ. [ವಾಕಿಟಾಕಿ ಮರೆತು ದಾರಿ ತಪ್ಪಿದ ಉಗ್ರರು!]
'ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಲಾಹೋರ್ಗೆ ಅಚ್ಚರಿಯ ಭೇಟಿ ನೀಡಿದ್ದರು. ಮೋದಿ ಅವರ ಭೇಟಿಯ ಉದ್ದೇಶ ನಾವು ಶಾಂತಿ ಮಾತುಕತೆಯನ್ನು ಬಯಸುತ್ತಿದ್ದೇವೆ ಎಂಬುದಾಗಿತ್ತು. ಆದರೆ, ಜೈಷ್ ಇ ಮೊಹಮ್ಮದ್ ಸಂಘಟನೆ ಪಠಾಣ್ ಕೋಟ್ ಮೇಲೆ ದಾಳಿ ಮಾಡುವ ಮೂಲಕ ಅದನ್ನು ಮುರಿದಿದೆ' ಎಂದು ಡೋವಲ್ ಹೇಳಿದ್ದಾರೆ.[ಚಿತ್ರಗಳು : ನರೇಂದ್ರ ಮೋದಿ ಅಚ್ಚರಿಯ ಲಾಹೋರ್ ಭೇಟಿ]
'ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ ಉಗ್ರರ ಬಗ್ಗೆ ಭಾರತ ಪಾಕಿಸ್ತಾನಕ್ಕೆ ಹಲವು ಸಾಕ್ಷಿಗಳನ್ನು ಕಳುಹಿಸಿಕೊಟ್ಟಿದೆ. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕ್ರಮ ಕೈಗೊಂಡರೆ ಮಾತ್ರ ಶಾಂತಿ ಮಾತುಕತೆ ಮುಂದುವರೆಸುತ್ತೇವೆ' ಎಂದು ಡೋವಲ್ ತಿಳಿಸಿದ್ದಾರೆ. [ಪಿಟಿಐ ಚಿತ್ರ]