ತವರಿಗೆ ಮರಳಿದ ಪಾಕಿಸ್ತಾನದ ಹೈಕಮಿಷನ್ ಸಿಬ್ಬಂದಿ
ಭಾರತದಲ್ಲಿನ ಪಾಕಿಸ್ತಾನ ಹೈ ಕಮೀಷನ್ ಕಚೇರಿಯ ಆರು ಸಿಬ್ಬಂದಿಗಳು ಬುಧವಾರ ತಮ್ಮ ದೇಶಕ್ಕೆ ಮರಳಿದಿದ್ದಾರೆ. ಗೂಢಚರ್ಯೆ ಪ್ರಕರಣದಲ್ಲಿ ಆರೋಪ ಹೊತ್ತ ಅಧಿಕಾರಿಗಳು ಪಾಕಿಸ್ತಾನಕ್ಕೆ ಬುಧವಾರ ತೆರಳಿರುವ ಸುದ್ದಿ ಬಂದಿದೆ.
ನವದೆಹಲಿ, ನವೆಂಬರ್ 02: ಭಾರತದಲ್ಲಿನ ಪಾಕಿಸ್ತಾನ ಹೈ ಕಮೀಷನ್ ಕಚೇರಿಯ ಆರು ಸಿಬ್ಬಂದಿಗಳು ಬುಧವಾರ ತಮ್ಮ ದೇಶಕ್ಕೆ ಮರಳಿದಿದ್ದಾರೆ. ಗೂಢಚರ್ಯೆ ಪ್ರಕರಣದಲ್ಲಿ ಆರೋಪ ಹೊತ್ತ ಅಧಿಕಾರಿಗಳು ಪಾಕಿಸ್ತಾನಕ್ಕೆ ಬುಧವಾರ ತೆರಳಿರುವ ಸುದ್ದಿ ಬಂದಿದೆ.
ಈ ಎಲ್ಲ ಅಧಿಕಾರಿಗಳು ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ತಿಳಿದು ಬಂದಿದೆ. ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ಹದಗೆಡವುತ್ತಿರುವ ಹಿನ್ನೆಲೆಯಲ್ಲಿ ಈ ಅಧಿಕಾರಿಗಳು ತಮ್ಮ ದೇಶಕ್ಕೆ ಮರಳುವುದು ಅನಿವಾರ್ಯವಾಗಿತ್ತು.
ಪಾಕಿಸ್ತಾನಿ
ರಾಯಭಾರ
ಕಚೇರಿಯ
ನೌಕರನೊಬ್ಬ
ಗೂಢಚರ್ಯೆ
ಜಾಲದಲ್ಲಿ
ಷಾಮೀಲಾಗಿರುವುದಾಗಿ
ಭಾರತೀಯ
ಪೊಲೀಸರು
ಪ್ರಕಟಿಸಿದ
ಬಳಿಕ
ಉಭಯ
ರಾಷ್ಟ್ರಗಳೂ
ಅಕ್ಟೋಬರ್
27ರಂದು
ಸೇಡಿನ
ಕ್ರಮವಾಗಿ
ತಮ್ಮ
ತಮ್ಮ
ಸಿಬ್ಬಂದಿಯನ್ನು
ಹಿಂದಕ್ಕೆ
ಕರೆಸಿಕೊಳ್ಳುವುದಾಗಿ
ಪ್ರಕಟಿಸಿದ್ದವು.
ರಾಜತಾಂತ್ರಿಕ ರಕ್ಷಣೆಗಳನ್ನು ಹೊಂದಿದ್ದ ಪಾಕಿಸ್ತಾನಿ ಹೈ ಕಮೀಷನ್ ನ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೆಹಮೂದ್ ಅಖ್ತರ್ ಅವರ ಮೇಲೆ ಗೂಢಚರ್ಯೆ ಮಾಡಿದ ಆರೋಪ ಎದುರಾಗಿತ್ತು.
ಭಾರತ ಪಾಕ್ ಗಡಿಯಲ್ಲಿ ಬಿಎಸ್ಎಫ್ ಸಿಬ್ಬಂದಿ ನಿಯೋಜನೆಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಇಬ್ಬರು ಸಹಚರರ ಮೂಲಕ ಪಡೆದು, ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪ ಹೊತ್ತಿದ್ದರು.(ಪಿಟಿಐ)