ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿಯಲ್ಲಿ ಪುಂಡಾಟ ನಡೆಸಿ ಭಾರತವನ್ನು ದೂರಿದ ಪಾಕ್

|
Google Oneindia Kannada News

ನವದೆಹಲಿ, ಮೇ 11: ನಮ್ಮ ಹಳ್ಳಿಗಾಡಿನ ಕಡೆಗೆ ಒಂದು ಗಾದೆಯಿದೆ. 'ಕೋತಿ ತಾನು ತಿಂದು ಮುಸುರೆಯನ್ನು ಮೇಕೆ ಮೂತಿಗೆ ಒರೆಸಿತು' ಅಂತ.
ತಾನು ಮಾಡಿದ ತಪ್ಪನ್ನು ಬೇರೆಯವರ ಕಡೆಗೆ ತಿರುಗಿಸುವುದು ಎಂಬುದನ್ನು ಸೂಚಿಸುವ ಗಾದೆ ಮಾತಿದು.

ಗಡಿ ನಿಯಂತ್ರಣಾ ರೇಖೆಯ ಬಳಿ ಗುರುವಾರ ಬೆಳಗ್ಗೆ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ, ಈಗ ಇದಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಸಮನ್ಸ್ ಜಾರಿಗೊಳಿಸಿದೆ!

Pakistan summons Indian Deputy HC over ceasefire violations

ಹೌದು. ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಗುರುವಾರ, ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ಸೇನೆ ತಾನೇ ಸ್ವಯಂಪ್ರೇರಿತವಾಗಿ ಗುಂಡಿನ ಚಕಮಕಿ ಆರಂಭಿಸಿತ್ತು.

ಇದರ ಪರಿಣಾಮವಾಗಿ, ಭಾರತದ ಗಡಿ ಭಾಗದ ಹಳ್ಳಿಯಲ್ಲಿನ ಓರ್ವ ಮಹಿಳೆ ಮೃತಪಟ್ಟು ಪುರುಷನೊಬ್ಬ ಗಾಯಗೊಂಡಿದ್ದಾನೆಂದು ಭಾರತೀಯ ಮಾಧ್ಯಮಗಳು ಅಳಲು ತೋಡಿಕೊಂಡಿವೆ.

ಆದರೆ, ಅತ್ತ, ಪಾಕಿಸ್ತಾನ, ಭಾರತವೇ ಕದನ ವಿರಾಮ ಉಲ್ಲಂಘಿಸಿದ್ದು, ಇದರ ಪರಿಣಾಮವಾಗಿ ಓರ್ವ ಪಾಕಿಸ್ತಾನ ನಾಗರಿಕ ಸಾವನ್ನಪ್ಪಿದ್ದಾನೆ ಎಂದು ಬೊಬ್ಬೆಯಿಟ್ಟಿದೆ.

ಅದರ ಬೆನ್ನಲ್ಲೇ, ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈ ಕಮೀಷನರ್ ಗೆ ಸಮನ್ಸ್ ಜಾರಿಗೊಳಿಸಿರುವ ಪಾಕಿಸ್ತಾನ, ಭಾರತವೇ ಸ್ವಯಂ ಪ್ರೇರಿತವಾಗಿ ಕದನ ವಿರಾಮ ಉಲ್ಲಂಘಿಸಿರುವ ಬಗ್ಗೆ ಭಾರತ ಸರ್ಕಾರದ ವಿವರಣೆ ಕೇಳುವಂತೆ ತಾಕೀತು ಮಾಡಿದೆ.

English summary
Pakistan on Thursday summoned the Indian Deputy High Commissioner in Islamabad over fresh ceasefire violations on the Line of Control, that it said has left one Pakistani civilian dead and two others injured
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X