ಗೋವುಗಳಿಗೆ ಬಣ್ಣ ಹಚ್ಚುವುದು, ಪ್ರಾಣಿ ಅಲಂಕಾರ ಇನ್ನು ಅಪರಾಧ
ದೇಶಾದ್ಯಂತ ಗೋ ಹತ್ಯೆ ಜಾರಿಯಾದ ಬೆನ್ನಲ್ಲೇ 1960ರ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಮತ್ತಷ್ಟು ಕಾನೂನುಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರ.
ನವದೆಹಲಿ, ಮೇ 26: ದೇಶಾದ್ಯಂತ ಗೋ ಹತ್ಯೆ ನಿಷೇಧದ ಕಾನೂನು ಶುಕ್ರವಾರ ಜಾರಿಯಾಗಿದೆ. ಇದರ ಬೆನ್ನಲ್ಲೇ, ಪ್ರಾಣಿ ಹಿಂಸೆ ತಡೆ (ಪಿಸಿಎ) ಕಾಯ್ದೆಯರಡಿ ಅನೇಕ ಹೊಸ ಕಾನೂನುಗಳನ್ನು ಜಾರಿಗೊಳಿಸಲಾಗಿದೆ.
ಹೊಸ
ಕಾನೂನಿನಲ್ಲಿ
ಅಳವಡಿಸಲಾಗಿರುವ
ವಿಚಾರಗಳು
ಹೀಗಿವೆ:
-
ಹಸು,
ದನ
ಅಥವಾ
ಕರುಗಳ
ಕೊಂಬುಗಳಿಗೆ,
ಕಾಲುಗಳಿಗೆ
ಅಥವಾ
ದೇಹದ
ಯಾವುದೇ
ಭಾಗಗಳಿಗೆ
ಯಾವುದೇ
ರೀತಿಯ
ಬಣ್ಣಗಳನ್ನು
ಹಚ್ಚುವಂತಿಲ್ಲ.[ಗೋಹತ್ಯೆ
ನಿಷೇಧಕ್ಕೆ
ಕೇಂದ್ರ
ಸರಕಾರ
ಮಹತ್ವದ
ನಿರ್ಧಾರ]
- ಅವುಗಳನ್ನು ಅನವಶ್ಯಕವಾಗಿ ಕೊರಳಿಗೆ ಹಗ್ಗ ಬಿಗಿದು ಕಟ್ಟುವಂತಿಲ್ಲ.
- ಅವು ವಾಸಿಸುವ ಸ್ಥಳಗಳಲ್ಲಿ ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಉತ್ತಮ ಆಹಾರ, ಶುದ್ಧ ನೀರು ಕೊಡತಕ್ಕದ್ದು.
- ಪ್ರಾಣಿಗಳಿಗೆ ಯಾವುದೇ ರೀತಿಯ ಅಲಂಕಾರ ಮಾಡುವಂತಿಲ್ಲ. ಒಡವೆ, ಹಾರ ಮುಂತಾದ ಯಾವುದೇ ಅಲಂಕಾರಿಕ ವಸ್ತುಗಳನ್ನು ಹಾಕುವಂತಿಲ್ಲ.
- ಹಸುವಿನ ಹಾಲು ಕುಡಿಯದಂತೆ ಕರುಗಳ ಬಾಯನ್ನು ಯಾವುದೇ ರೀತಿಯಲ್ಲಿ ಬಂದ್ ಮಾಡುವ ಹಾಗಿಲ್ಲ.
- ಆ ನಿರ್ದಿಷ್ಟ ಪ್ರಾಣಿಯ ಉಸ್ತುವಾರಿ ಹೊತ್ತಿರುವ ಮನುಷ್ಯ, ಪ್ರಾಣಿಗೆ ಈ ಮೇಲ್ಕಂಡ ಯಾವುದೇ ತೊಂದರೆ ನೀಡಲಾಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡಿರಬೇಕು. ಉತ್ತಮ ಆಹಾರ, ನೀರು, ಬೆಳಕು ಸಿಗುತ್ತಿರುವ ಬಗ್ಗೆ ಅರಿವು ಹೊಂದಿರಬೇಕು.
- ಪ್ರಾಣಿಗಳು ಯಾವುದೇ ರೀತಿಯ ದುರವಸ್ಥೆಯಲ್ಲಿದ್ದರೆ, ಆ ಪ್ರಾಣಿಗಳ ಉಸ್ತುವಾರಿ ಹೊತ್ತಿರುವ ವ್ಯಕ್ತಿಗಳೇ ಆ ತಪ್ಪುಗಳಿಗೆ ಹೊಣೆಗಾರರಾಗುತ್ತಾರೆ.