ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ 45ನೇ ಬಾರಿ ವರ್ಗಾವಣೆ
ಚಂಡೀಗಢ, ಏ.2: ದಕ್ಷ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರನ್ನು ಹರ್ಯಾಣದ ಬಿಜೆಪಿ ಸರ್ಕಾರ ವರ್ಗಾವಣೆ ಮಾಡಿದೆ. ಸುಮಾರು 24 ವರ್ಷಗಳ ವೃತ್ತಿ ಬದುಕಿನಲ್ಲಿ ಖೇಮ್ಕಾ ಅವರು 45ನೇ ಬಾರಿಗೆ ವರ್ಗಾವಣೆಗೊಳ್ಳುತ್ತಿದ್ದಾರೆ. ಸಾರಿಗೆ ಇಲಾಖೆಯಲ್ಲಿದ್ದ ಅಶೋಕ್ ಅವರನ್ನು ಪ್ರಾಚ್ಯ ವಸ್ತು ಇಲಾಖೆಗೆ ಸೇರಿಸಲಾಗಿದೆ.
ಭ್ರಷ್ಟಾಚಾರ
ವಿರುದ್ಧ
ಹೋರಾಟ
ನಡೆಸಿದ,
ಎಐಸಿಸಿ
ಅಧ್ಯಕ್ಷೆ
ಸೋನಿಯಾಗಾಂಧಿ
ಅವರ
ಅಳಿಯ
ರಾಬರ್ಟ್
ವಾದ್ರಾ
ಭೂಕಬಳಿಕೆ
ಹಗರಣವನ್ನು
ಬಯಲಿಗೆಳೆದ
ಹಿರಿಯ
ಐಎಎಸ್
ಅಧಿಕಾರಿ
ಅಶೋಕ್
ಖೇಮ್ಕಾ
ಅವರನ್ನು
ಸಾರಿಗೆ
ಇಲಾಖೆಯಿಂದ
ಪ್ರಾಚ್ಯ
ವಸ್ತು
ಇಲಾಖೆ
ನಿರ್ದೇಶಕರಾಗಿ
ನೇಮಕ
ಮಾಡಿದ್ದಕ್ಕೆ
ಸಾರ್ವಜನಿಕರು
ಅಸಮಾಧಾನ
ವ್ಯಕ್ತಪಡಿಸಿದ್ದಾರೆ.
ಸ್ವತಃ
ಖೇಮ್ಕಾ
ಅವರು
ಈ
ಬಗ್ಗೆ
ಪ್ರತಿಕ್ರಿಯಿಸಿ
ತಮ್ಮ
ನೋವು
ತೋಡಿಕೊಂಡಿದ್ದಾರೆ.
ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ಅಮೂಲಾಗ್ರವಾಗಿ ಸರಿಪಡಿಸಬೇಕಾದ ಅಗತ್ಯವಿದೆ. ಆದರೆ ಬಿಜೆಪಿ ಸರ್ಕಾರ ಪ್ರಾಚ್ಯವಸ್ತು ಇಲಾಖೆಗೆ ವರ್ಗಾವಣೆ ಮಾಡಿದ್ದು ಅತೀವ ನೋವು ತಂದಿದೆ. ಸಾರಿಗೆ ಇಲಾಖೆಯಲ್ಲಿನ ಭ್ರಷ್ಟಾಚಾರ ನಿಗ್ರಹಿಸಿ, ಪಾರದರ್ಶಕ ವ್ಯವಸ್ಥೆಗೆ ಒಳಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೆ. ಆದರೆ ಸರ್ಕಾರದ ನಡೆ ನೋವು ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
Tried
hard
to
address
corruption
and
bring
reforms
in
Transport
despite
severe
limitations
and
entrenched
interests.
Moment
is
truly
painful
—
Ashok
Khemka,
IAS
(@AshokKhemka_IAS)
April
1,
2015