ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಹಾಪುರುಷರ ಜಯಂತಿಗೆ ಶಾಲೆಗಿಲ್ಲ ರಜಾ: ಯೋಗಿ ಆದಿತ್ಯನಾಥ್
ಮಹಾಪುರುಷರ ಜನ್ಮದಿನಗಳಂದು ರಜೆ ನೀಡುವ ಬದಲು, ಆ ಮಹಾಪುರುಷರ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ, ಎಂದಿನಂತೆಯೇ ಶಾಲೆ ನಡೆಸಿ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲಕ್ನೋ, ಏಪ್ರಿಲ್ 14: ಉತ್ತರ ಪ್ರದೇಶದ ಶಾಲೆಗಳಿಗೆ ಇನ್ನು ಮುಂದೆ ಯಾವುದೇ ಮಹಾಪುರುಷರ ಜಯಂತಿಗಳಿಗೂ ರಜೆ ನೀಡುವಂತಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.[ಯೋಗಿ ಉದಾಹರಣೆ ಕೊಟ್ಟು ಮಹಾರಾಷ್ಟ್ರದ ಫಡಣವೀಸ್ ಗೆ ಚುಚ್ಚಿದ ಶಿವಸೇನೆ]
ಅಂಬೇಡ್ಕರ್ ಅವರ 126 ನೇ ಜಯಂತಿ ನಿಮಿತ್ತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ನಮಿಸಿ, ಮಾತನಾಡುತ್ತಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ, ರಾಷ್ಟ್ರಾಭಿವೃದ್ಧಿಗಾಗಿ ಹೋರಾಡಿದ ಮಹನೀಯರ ಜನ್ಮದಿನದಂದು ಶಾಲೆಗೆ ರಜೆ ನೀಡುವ ಬದಲು, ಆ ದಿನ ಎಂದಿನಂತೆಯೇ ಶಾಲೆ ನಡೆಸಿ ಎಂದು ಶಿಕ್ಷಕರಿಗೆ ಅವರು ಹೇಳಿದ್ದಾರೆ.[ಗಂಗಾ ಶುದ್ಧೀಕರಣಕ್ಕಾಗಿ ಚರ್ಮ ಕಾರ್ಖಾನೆ ಸ್ಥಳಾಂತರ]
ಮಹಾಪುರುಷರ ಜಯಂತಿಯಂದು ಆ ಮಹಾಪುರುಷರ ಬದುಕು, ಸಾಧನೆಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಿ. ಇದರಿಂದ ಅವರಲ್ಲೂ ದೇಶಭಕ್ತಿ ಮೊಳೆಯುತ್ತದೆ ಮತ್ತು ದೇಶಕ್ಕಾಗಿ ಹೋರಾಡಿದ ಮಹನೀಯರ ಪರಿಚಯವೂ ಅವರಿಗಾಗುತ್ತದೆ ಎಂದಿದ್ದಾರೆ.
Comments
yogi adityanath lucknow uttar pradesh br ambedkar india ಯೋಗಿ ಆದಿತ್ಯನಾಥ್ ಲಕ್ನೋ ಉತ್ತರ ಪ್ರದೇಶ ಅಂಬೇಡ್ಕರ್ ಭಾರತ
English summary
There will be no holidays for schools to the birth anniversaries of great personalities, Yogi Adityanath, Uttar Pradesh chief minister told today. He was adressing people in the eve of Dr. B R Ambedkar Birth anniversary
Story first published: Friday, April 14, 2017, 16:56 [IST]