ನಿರ್ಭಯಾ ಕೇಸಿನ ಅತ್ಯಾಚಾರಿ ವಿನಯ್ ಆತ್ಮಹತ್ಯೆಗೆ ಯತ್ನ
ನವದೆಹಲಿ, ಆಗಸ್ಟ್ 25: 2012ರಲ್ಲಿ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಮುಖ್ಯ ಅಪರಾಧಿ ವಿನಯ್ ಶರ್ಮ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಿಹಾರ್ ಜೈಲಿನಲ್ಲಿರುವ ವಿನಯ್ ಬುಧವಾರ ರಾತ್ರಿ ಮಾತ್ರೆ ಸೇವಿಸಿ ನಂತರ ನೇಣುಬಿಗಿದುಕೊಂಡು ಸಾವನ್ನಪ್ಪಲು ಯತ್ನಿಸಿ ವಿಫಲನಾಗಿದ್ದಾನೆ.
ನೋವು
ನಿವಾರಕ
ಮಾತ್ರೆಗಳನ್ನು
ನುಂಗಿ
ನಂತರ
ಟವೆಲ್
ಬಿಗಿದುಕೊಂಡು
ಆತ್ಮಹತ್ಯೆಗೆ
ಯತ್ನಿಸಿದ್ದ
ವಿನಯ್
ಶರ್ಮನನ್ನು
ದೀನ್
ದಯಾಳ್
ಆಸ್ಪತ್ರೆಗೆ
ಸೇರಿಸಲಾಗಿದೆ,
ವಿನಯ್
ಆರೋಗ್ಯ
ಸ್ಥಿತಿ
ಗಂಭೀರವಾಗಿದೆ.[ನಿರ್ಭಯ
ದೆಹಲಿ
ಗ್ಯಾಂಗ್
ರೇಪ್
ಅಪರಾಧಿಗಳಿಗೆ
ಡಬಲ್
ಶಿಕ್ಷೆ]
ಇದೇ ಪ್ರಕರಣ ಒಬ್ಬ ಆರೋಪಿ ರಾಮ್ ಸಿಂಗ್ 2013ರಲ್ಲೇ ಜೈಲಿನಲ್ಲೇ ನೇಣಿಗೆ ಶರಣಾಗಿದ್ದ. ಈ ಹಿಂದೆ ವಿನಯ್ ಶರ್ಮ ಕೂಡಾ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಭಾರತದ ಮಗಳು ವಿಡಿಯೋ ಯೂಟ್ಯೂಬಿನಲ್ಲಿ 'ಹಿಟ್']
2012, ಡಿಸೆಂಬರ್ 16ರಂದು ಇಡೀ ದೇಶವನ್ನು ಬೆಚ್ಚಿ ಬೀಳಿಸುವಂತೆ ಮಾಡಿದ ದೆಹಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿತ್ತು. ಬಳಿಕ ಅಕ್ಷಯ್ ಟಾಕೂರ್, ವಿನಯ್ ಶರ್ಮ, ಪವನ್ ಗುಪ್ತಾ, ಮುಖೇಶ್ ಎನ್ನುವ ನಾಲ್ವರಿಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.