ನಿಯೋಜಿತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವ್ಯಕ್ತಿಚಿತ್ರ
ನವದೆಹಲಿ, ಆಗಸ್ಟ್ 5: ಬಹುನಿರೀಕ್ಷಿತ ಉಪರಾಷ್ಟ್ರಪತಿ ಚುನಾವಣೆಗೆ ಇಂದು ಬೆಳಗ್ಗೆ ಮತದಾನ ನಡೆದಿದ್ದು, ಈಗಾಗಲೇ ಅಧಿಕೃತ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆಯೇ ಎನ್ ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರು ಭಾರತದ ಮುಂದಿನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಹಾಲಿ ಉಪರಾಷ್ಟ್ರಪತಿ ಹಮಿದ್ ಅನ್ಸಾರಿ ಅವರ ಅಧಿಕಾರಾವಧಿ ಆಗಸ್ಟ್ 10 ರಂದು ಮುಕ್ತಾಯವಾಗಲಿದ್ದು, ಭಾರತದ ಮುಂದಿನ ಉಪರಾಷ್ಟ್ರಪತಿಯಾಗಿ ಐದು ವರ್ಷಗಳ ಕಾಲ ವೆಂಕಯ್ಯ್ ನಾಯ್ಡು ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ
ಭಾರತದ ನಿಯೋಜಿತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.
ಕೃಷಿಕ ಕುಟುಂಬದ ಹಿನ್ನೆಲೆ
-
ಆಂಧ್ರದ
ನೆಲ್ಲೂರು
ಜಿಲ್ಲೆಯ
ಚಾವಟಪಾಲೆಂನಲ್ಲಿ
1949ರ
ಜುಲೈ
1ರಂದು
ಜನನ.
-
ತಂದೆ
ರಂಗಯ್ಯ
ಮತ್ತು
ತಾಯಿ
ರಮಣಮ್ಮ
ಕೃಷಿಕರು.
-
ಶಾಲಾ
ದಿನಗಳಲ್ಲೇ
ಆರ್
ಎಸ್
ಎಸ್
ಮತ್ತು
ಎಬಿವಿಪಿ
ನಂಟು.
ಉಷಾ ಅವರೊಂದಿಗೆ ವಿವಾಹ
-
ಆಂಧ್ರ
ವಿಶ್ವವಿದ್ಯಾಲಯ
ಕಾನೂನು
ಕಾಲೇಜಿನಿಂದ
ಅಂತಾರಾಷ್ಟ್ರೀಯ
ಕಾನೂನಿನಲ್ಲಿ
ಪದವಿ.
-
ವಿದ್ಯಾರ್ಥಿಯಾದಾಗಿನಿಂದಲೂ
ಉತ್ತಮ
ವಾಗ್ಮಿ
ಎಂಬ
ಹೆಗ್ಗಳಿಕೆ.
-
1971
ಏಪ್ರಿಲ್
14
ರಂದು
ಎಂ.ಉಷಾ
ಅವರೊಂದಿಗೆ
ವಿವಾಹ.
ಎಂಎಲ್ಎ, ಸಂಸದ
-
ಇಬ್ಬರು
ಮಕ್ಕಳು
(ಒಬ್ಬ
ಮಗಳು,
ಒಬ್ಬ
ಮಗ)
-
1972
ರಲ್ಲಿ
ಜೈ
ಆಂಧ್ರ
ಚಳವಳಿಯಲ್ಲಿ
ಭಾಗಿ
-
1978
ಮತ್ತು
1983ರಲ್ಲಿ
ನೆಲ್ಲೂರು
ಜಿಲ್ಲೆಯ
ಉದಯಗಿರಿ
ಕ್ಷೇತ್ರದಿಂದ
ಎರಡು
ಬಾರಿ
ವಿಧಾನಸಭೆಗೆ
ಆಯ್ಕೆ
-
1998ರಲ್ಲಿ
ಕರ್ನಾಟಕದಿಂದ
ರಾಜ್ಯಸಭೆಗೆ
ಆಯ್ಕೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ
-
ಅಲ್ಲಿಂದ
ಬಿಜೆಪಿಯಲ್ಲಿ
ಉನ್ನತ
ಮಟ್ಟಕ್ಕೆ
ಬೆಳೆದ
ವೆಂಕಯ್ಯ
ನಾಯ್ಡು
ರಾಜ್ಯ
ಮತ್ತು
ರಾಷ್ಟ್ರಮಟ್ಟದಲ್ಲೂ
ಗುರುತಿಸಿಕೊಂಡರು.
-
2002ರಿಂದ
2004ರವರೆಗೆ
ಬಿಜೆಪಿ
ಪಕ್ಷದ
ರಾಷ್ಟ್ರೀಯ
ಅಧ್ಯಕ್ಷರಾಗಿ
ಕೆಲಸ
ನಿರ್ವಹಣೆ.
-
2004
ಹಾಗೂ
2010ರಲ್ಲಿ
ಕರ್ನಾಟಕದಿಂದಲೇ
ರಾಜ್ಯಸಭೆಗೆ
ಮರು
ಆಯ್ಕೆ.
ಉಪರಾಷ್ಟ್ರಪತಿಯಾಗಿ ಆಯ್ಕೆ
-2014-2017
ರಲ್ಲಿ
ನಗರಾಭಿವೃದ್ಧಿ
ಸಚಿವರಾಗಿ
ಕಾರ್ಯನಿರ್ವಹಣೆ
-2016-2017
ರಲ್ಲಿ
ವಾರ್ತಾ
ಮತ್ತು
ಪ್ರಸಾರ
ಖಾತೆ
ಸಚಿವರಾಗಿ
ಕಾರ್ಯನಿರ್ವಹಣೆ
-
2017,
ಜುಲೈ
17ರಂದು
ತಮ್ಮ
ಸಚಿವ
ಸ್ಥಾನಕ್ಕೆ
ರಾಜೀನಾಮೆ.
-
2017
ಆಗಸ್ಟ್
5
ಉಪರಾಷ್ಟ್ರಪತಿಯಾಗಿ
ಆಯ್ಕೆ