ಎಡರಂಗದ ಕೈಗೆ ಕೇರಳ, ಮುಖ್ಯಮಂತ್ರಿ ಗಾದಿ ಯಾರಿಗೆ?
ತಿರುವನಂತಪುರ, ಮೇ, 19: ಕೇರಳದಲ್ಲಿ ಎಡಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸನ್ನದ್ಧವಾಗಿದೆ. ಸಿಪಿಐಎಂ ನೇತೃತ್ವದ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್(ಎಲ್ ಡಿಎಫ್) ಸರಳ ಬಹುಮತ ಪಡೆದುಕೊಂಡಿದ್ದು ಅಧಿಕಾರ ಹಿಡಿಯಲು ವೇದಿಕೆ ಸಿದ್ಧವಾಗಿದೆ.[ವಿಜಯೋತ್ಸಾಹದ ಚಿತ್ರಗಳು]
ಇದರೊಂದಿಗೆ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಸಂಗತಿಯು ಕುತೂಹಲ ಮೂಡಿಸಿದೆ. 92 ವರ್ಷದ ವಿ ಎಸ್ ಅಚ್ಯುತಾನಂದನ್ ಮತ್ತು ಪಿಣರಾಯಿ ವಿಜಯನ್ ನಡುವೆ ಗಾದಿಗೆ ಸ್ಪರ್ಧೆ ಏರ್ಪಟ್ಟಿದೆ. ಆದರೆ ಯಾರು ಮುಖ್ಯಮಂತ್ರಿ ಎಂಬುದು ಮೇ 20 ಕ್ಕೆ ಅಂತಿಮವಾಗಲಿದೆ.['ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣರಲ್ಲ']
ಚುನಾವಣೆ ಆರಂಭದಲ್ಲಿ ವಿಜಯನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಬಿಂಬಿಸಲಾಗಿತ್ತು. ಆದರೆ ಚುನಾವಣೆ ಹತ್ತಿರ ಬಂದಾಗ ಕೊನೆ ಘಳಿಗೆಯಲ್ಲಿ 'ನಾನು ರೇಸ್ ನಲ್ಲಿ ಇದ್ದೇನೆ' ಎಂದು ಹೇಳುವ ಮೂಲಕ ಅಚ್ಯುತಾನಂದನ್ ಕುತೂಹಲ ಹುಟ್ಟುಹಾಕಿದ್ದರು.[ಅಸ್ಸಾಂನಲ್ಲಿ ಕೇಸರಿ ಬಾವುಟ, ಮೈತ್ರಿಯತ್ತ ಬಿಜೆಪಿ]
ಅಧಿಕಾರ
ಹಂಚಿಕೆ?
ಅಧಿಕಾರ
ಹಂಚಿಕೆ
ಸಾಧ್ಯತೆಯೂ
ಎದುರಾಗಿದೆ.
ಮೊದಲ
ಎರಡು
ವರ್ಷ
ಅಚ್ಯುತಾನಂದನ್
ಮುಖ್ಯಮಂತ್ರಿಯಾಗಿ
ಕೆಲಸ
ಮಾಡಿದರೆ
ಮುಂದಿನ
ಮೂರು
ವರ್ಷ
ಕಾಲ
ವಿಜಯನ್
ಅಧಿಕಾರ
ನಡೆಸುವ
ಸಾಧ್ಯತೆಯನ್ನು
ಅಲ್ಲಗಳೆಯುವಂತಿಲ್ಲ.[ಅಮ್ಮ
ರಿಟರ್ನ್ಸ್,
ತಮಿಳುನಾಡಿನಲ್ಲಿ
ಎಐಎಡಿಎಂಕೆ
ದಾಖಲೆ]
ಸಿಪಿಐಎಂ ಗೆ ಇದೊಂದು ಸವಾಲಾಗೇ ಪರಿಣಮಿಸಿದ್ದರೂ ಇಬ್ಬರು ನಾಯಕರು ಪಕ್ಷಕ್ಕೆ ಅನೇಕ ವರ್ಷದಿಂದ ದುಡಿದ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಆಧಾರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಲಾಗಿದೆ.[ಕೇರಳದಲ್ಲಿ ಮೂರು ಸ್ಥಾನ ಗೆದ್ದ ಜೆಡಿಎಸ್]