ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಡರಂಗದ ಕೈಗೆ ಕೇರಳ, ಮುಖ್ಯಮಂತ್ರಿ ಗಾದಿ ಯಾರಿಗೆ?

By ವಿಕಾಸ್ ನಂಜಪ್ಪ
|
Google Oneindia Kannada News

ತಿರುವನಂತಪುರ, ಮೇ, 19: ಕೇರಳದಲ್ಲಿ ಎಡಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸನ್ನದ್ಧವಾಗಿದೆ. ಸಿಪಿಐಎಂ ನೇತೃತ್ವದ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್(ಎಲ್ ಡಿಎಫ್) ಸರಳ ಬಹುಮತ ಪಡೆದುಕೊಂಡಿದ್ದು ಅಧಿಕಾರ ಹಿಡಿಯಲು ವೇದಿಕೆ ಸಿದ್ಧವಾಗಿದೆ.[ವಿಜಯೋತ್ಸಾಹದ ಚಿತ್ರಗಳು]

ಇದರೊಂದಿಗೆ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಸಂಗತಿಯು ಕುತೂಹಲ ಮೂಡಿಸಿದೆ. 92 ವರ್ಷದ ವಿ ಎಸ್ ಅಚ್ಯುತಾನಂದನ್ ಮತ್ತು ಪಿಣರಾಯಿ ವಿಜಯನ್ ನಡುವೆ ಗಾದಿಗೆ ಸ್ಪರ್ಧೆ ಏರ್ಪಟ್ಟಿದೆ. ಆದರೆ ಯಾರು ಮುಖ್ಯಮಂತ್ರಿ ಎಂಬುದು ಮೇ 20 ಕ್ಕೆ ಅಂತಿಮವಾಗಲಿದೆ.['ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣರಲ್ಲ']

kerala

ಚುನಾವಣೆ ಆರಂಭದಲ್ಲಿ ವಿಜಯನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಬಿಂಬಿಸಲಾಗಿತ್ತು. ಆದರೆ ಚುನಾವಣೆ ಹತ್ತಿರ ಬಂದಾಗ ಕೊನೆ ಘಳಿಗೆಯಲ್ಲಿ 'ನಾನು ರೇಸ್ ನಲ್ಲಿ ಇದ್ದೇನೆ' ಎಂದು ಹೇಳುವ ಮೂಲಕ ಅಚ್ಯುತಾನಂದನ್ ಕುತೂಹಲ ಹುಟ್ಟುಹಾಕಿದ್ದರು.[ಅಸ್ಸಾಂನಲ್ಲಿ ಕೇಸರಿ ಬಾವುಟ, ಮೈತ್ರಿಯತ್ತ ಬಿಜೆಪಿ]

ಅಧಿಕಾರ ಹಂಚಿಕೆ?
ಅಧಿಕಾರ ಹಂಚಿಕೆ ಸಾಧ್ಯತೆಯೂ ಎದುರಾಗಿದೆ. ಮೊದಲ ಎರಡು ವರ್ಷ ಅಚ್ಯುತಾನಂದನ್ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರೆ ಮುಂದಿನ ಮೂರು ವರ್ಷ ಕಾಲ ವಿಜಯನ್ ಅಧಿಕಾರ ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.[ಅಮ್ಮ ರಿಟರ್ನ್ಸ್, ತಮಿಳುನಾಡಿನಲ್ಲಿ ಎಐಎಡಿಎಂಕೆ ದಾಖಲೆ]

ಸಿಪಿಐಎಂ ಗೆ ಇದೊಂದು ಸವಾಲಾಗೇ ಪರಿಣಮಿಸಿದ್ದರೂ ಇಬ್ಬರು ನಾಯಕರು ಪಕ್ಷಕ್ಕೆ ಅನೇಕ ವರ್ಷದಿಂದ ದುಡಿದ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಆಧಾರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಲಾಗಿದೆ.[ಕೇರಳದಲ್ಲಿ ಮೂರು ಸ್ಥಾನ ಗೆದ್ದ ಜೆಡಿಎಸ್]

English summary
It has been a red wave in Kerala. The LDF has trounced the UDF as the exit polls had suggested. With the LDF set to form the government the big question now is who would be the Chief Minister. The obvious race is between the 92 year old V S Achuthanandan and Pinrayi Vijayan. While both are hot contenders, a final decision on this would be taken on May 20 when the party meets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X