ಮೈಸೂರು ಪೇಟ ತೊಟ್ಟ ರಘುರಾಂ ರಾಜನ್
ನವದೆಹಲಿ, ಜೂ.22.: ಬುಧವಾರ ಸುದ್ದಿಗಳಿಗೇನು ಬರವಿಲ್ಲ. ದೇಶದಾದ್ಯಂತ ವಿವಿಧ ಘಟನಾವಳಿಗಳು ಸಂಭವಿಸಿದವು. ಅದರಲ್ಲಿ ಕೆಲವರಿಗೆ ಕೆಲವು ಪ್ರಮುಖವಾದರೆ ಇನ್ನು ಕೆಲವರಿಗೆ ಮತ್ತೆ ಕೆಲವು ಸುದ್ದಿ ಪ್ರಮುಖ.
ಬಿಹಾರದಲ್ಲಿ ಭಾರೀ ಮಳೆ ಆರ್ಭಟಿಸುತ್ತಿದೆ, ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್, ಉಪಗ್ರಹಗಳ ಯಶಸ್ವಿ ಉಡಾವಣೆ ನಂತರ ಸಾಧನೆಯ ಸಂಭ್ರಮದಲ್ಲಿ ಇಸ್ರೋದ ವಿಜ್ಞಾನಿಗಳು.[ಬಿಜೆಪಿ ಕಾರ್ಯಕಾರಣಿ: ಮೋದಿ ಮೇಲೆ ಅಡ್ವಾಣಿ ವಾರೆನೋಟ!]
ಕಾಶ್ಮೀರದ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಿದ ಕಾಶ್ಮೀರಿ ಪಂಡಿತರು. ಗುರ್ ಗಾಂವ್ ನಲ್ಲಿ ತಮ್ಮ ನಿಮಾದ ಪ್ರಮೋಶನ್ ವೊಂದರ ವೇಳೆ ಕಾಣಿಸಿಕೊಂಡ ನಟಿ ಯಾಮಿ ಗೌತಮ್ ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ...(ಪಿಟಿಐ ಚಿತ್ರಗಳು)
ಪೇಟ ತೊಟ್ಟ ರಾಜನ್
ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಅಧಿಕಾರವಧಿ ಮುಗಿಯುವ ಹಂತದಲ್ಲಿದೆ. ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಜನ್ ಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು .
ಮಳೆ ಆರ್ಭಟ
ಬಿಹಾರದಲ್ಲಿ ಮಂಗಳವಾರದಿಂದ ಭಾರೀ ಮಳೆ ಸುರಿಯುತ್ತಿದ್ದು ಸಿಡಿಲಿಗೆ 56 ಜನ ಬಲಿಯಾಗಿದ್ದಾರೆ. ಮಳೆ ಆರ್ಭಟಕ್ಕೆ ಬಾಯಿ ಬಿಟ್ಟ ಭೂಮಿ ಪಾಟ್ನಾದಲ್ಲಿ ಕಂಡಿದ್ದು ಹೀಗೆ.
ಪರ್ವತ ಏರಿದ ಸಂಭ್ರಮ
ಪೂರ್ವ ನೌಕಾದಳದ ಸೈನಿಕರು ಕಮೆಟ್ ಪರ್ವತವನ್ನು ಏರಿ ಸಂಭ್ರಮಿಸಿದ್ದು ಹೀಗೆ.
ದಣಿದು ನಿಂತಿದ್ದೇನೆ
ಕಾರ್ಗಿಲ್ ಯುದ್ಧದಲ್ಲಿ ದೇಶದ ಪರ ಹೋರಾಡಿದ್ದ ಯುದ್ದ ವಿಮಾನ ಇದೀಗ ವಸ್ತು ಸಂಗ್ರಹಾಲಯ ಸೇರಲು ಸಿದ್ಧವಾಗಿದೆ. ಗುಹವಾಟಿಯಲ್ಲಿ ವಿಮಾನವನ್ನು ಜೋಡಿಸುತ್ತಿದ್ದ ದೃಶ್ಯ ಕಂಡಿದ್ದು ಹೀಗೆ.
ಗ್ಲಾಮರ್ ಗೊಂಬೆ
ಗುರ್ ಗಾಂವ್ ನಲ್ಲಿ ತಮ್ಮ ಮುಂಬರುವ ಸಿನಿಮಾದ ಪ್ರಮೋಶನ್ ವೊಂದರ ವೇಳೆ ಕಾಣಿಸಿಕೊಂಡ ನಟಿ ಯಾಮಿ ಗೌತಮ್.
ಯಶಸ್ಸಿನ ಸಂಭ್ರಮ
ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಂತರ ಸಾಧನೆಯ ಹುಮ್ಮಸ್ಸಿನಲ್ಲಿ ಕಾಣಿಸಿಕೊಂಡ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಮತ್ತು ವಿಜ್ಞಾನಿಗಳು.
ಮತದಾನ ಮಾಡಿದೆವು
ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಉಪಚುನಾವಣೆಯಲ್ಲಿ ಮತ ಚಲಾವಣೆ ಮಾಡಿದ ಕಾಶ್ಮೀರಿ ಪಂಡಿತರು.