ರಾಜಕಾರಣಿಗಳ ಹೋಳಿ ಸಂಭ್ರಮ ಹೇಗಿತ್ತು?
ನವದೆಹಲಿ, ಮಾರ್ಚ್, 24: ದೇಶದಾದ್ಯಂತ ಹೋಳಿ ಸಂಭ್ರಮ. ಕಾಂಗ್ರೆಸ್ ಉಪಪಾಧ್ಯಕ್ಷ ರಾಹುಲ್ ಗಾಂಧಿ ಬಣ್ಣದಲ್ಲಿ ಮಿಂದೆದ್ದರು. ಲಾಲೂ ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೋಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಬಾಂಗ್ಲಾದೇಶದ ವಿರುದ್ಧ ವಿಶ್ವ ಕಪ್ ಟಿ-20 ಪಂದ್ಯದಲ್ಲಿ ಜಯ ಸಾಧಿಸಿದ ಭಾರತ ಹಬ್ಬಕ್ಕೂ ಮುಂಚೆಯೇ ಜನರಿಗೆ ಹೋಳಿ ಸಂಭ್ರಮವನ್ನು ನೀಡಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಹೋಳಿ ಸಡಗರದಲ್ಲಿ ಭಾಗವಹಿಸಿದ್ದರು.
ಕಂಚಿ ಸ್ವಾಮೀಜಿಯ ಆಶೀರ್ವಾದ ಪಡೆದುಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹರಿಯಾಣದ ಮುಖ್ಯಮಂತ್ರಿ ಮಹೋಹರ್ ಲಾಲ್ ಕಟ್ಟರ್ ಅವರಿಂದ ಭಾರತ ಕೇಸರಿ ಪ್ರಶಸ್ತಿ ಪಡೆದ ದಂಗ್ಲ್ ಮೌಸುಮ್ ಖಟ್ರಿ ಅವರಿಗೆ ಸನ್ಮಾನ... ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ (ಪಿಟಿಐ ಚಿತ್ರಗಳು)
ಹೋಳಿ ಸಂಭ್ರಮ
ಲಾಲೂ ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೋಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಬಣ್ಣದಲ್ಲಿ ಮಿಂದೆದ್ದ ರಾಹುಲ್
ಹೋಳಿ ಹಬ್ಬದ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಉಪಪಾಧ್ಯಕ್ಷ ರಾಹುಲ್ ಗಾಂಧಿ ಬಣ್ಣದಲ್ಲಿ ಮಿಂದೆದ್ದ ಬಗೆ.
ಬಾಂಗ್ಲಾ ವಿರುದ್ಧ ಗೆದ್ದಾಗಲಲೇ ಹೋಳಿ
ಬಾಂಗ್ಲಾ ವಿರುದ್ಧ ಮ್ಯಾಜಿಕ್ ಓವರ್ ಎಸೆದ ಹಾರ್ದಿಕ್ ಪಾಂಡ್ಯಾ ಭಾರತಕ್ಕೆ ಹೋಳಿ ಸಂಭ್ರಮವನ್ನು ತಮದುಕೊಟ್ಟಿದ್ದರು.
ಆರ್ಶೀರ್ವಾದ ಪಡೆದ ಅಮಿತ್ ಶಾ
ಚೆನ್ನೈ ಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಂಚಿ ಸ್ವಾಮೀಜಿಯವರ ಆರ್ಶಿರ್ವಾದ ಪಡೆದುಕೊಂಡರು.
ಕನ್ಹಯ್ಯಾ ಕುಮಾರ್ ಮಾತು
ಹೈದರಾಬಾದ್ ಗೆ ಭೇಟಿ ನೀಡಿದ್ದ ಜವಾಹರಲಾಲ್ ನೆಹರು ವಿವಿ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು.
ಮಡಿದವರಿಗೆ ಸಂತಾಪ
ಬೆಲ್ಜಿಯಂ ರಾಜಧಾನಿಯಲ್ಲಿ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಉಗ್ರ ಸಂಘಟನೆ ಐಎಸ್ಐಎಸ್ ಹೊತ್ತುಕೊಂಡಿತ್ತು. ದುರಂತದಲ್ಲಿ ಮಡಿದವರಿಗೆ ನಾಗರಿಕರು ಸಂತಾಪ ಸೂಚಿಸಿದರು.
ಸೂಪರ್ ಮೂನ್
ಚೆನ್ನೈನಲ್ಲಿ ಕಂಡು ಬಂದ ಸೂಪರ್ ಮೂನ್ ಚಿತ್ರ. ಈ ಪೋಟೋಕ್ಕೆ ಶೀರ್ಷಿಕೆ ಬೇಡ. ಚಿತ್ರವೇ ಎಲ್ಲವನ್ನು ಹೇಳುತ್ತಿದೆ.
ಸೋನಿಯಾ ಹೋಳಿ ಸಂಭ್ರಮ
ಹೋಳಿ ಹಬ್ಬದ ಸಂಭ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪಾಲ್ಗೊಂಡಿದ್ದರು.
ಬೀದಿಗೆ ಬಂದ ಭಗವಂತ
ಹೋಳಿ ಹಬ್ಬದ ಸಂಭ್ರಮದ ವೇಳೆ ನವದೆಹಲಿಯ ರಸ್ತೆಯಲ್ಲಿ ಕಂಡು ಬಂದ ಶಿವ -ಪಾರ್ವತಿ.
ಸನ್ಮಾನ
ಹರಿಯಾಣದ ಮುಖ್ಯಮಂತ್ರಿ ಮಹೋಹರ್ ಲಾಲ್ ಕಟ್ಟರ್ ಅವರಿಂದ ಭಾರತ ಕೇಸರಿ ಪ್ರಶಸ್ತಿ ಪಡೆದ ದಂಗ್ಲ್ ಮೌಸುಮ್ ಖಟ್ರಿ ಅವರಿಗೆ ಸನ್ಮಾನ...