ತವರಿಗೆ ಮರಳಿದ ಒಲಿಂಪಿಕ್ಸ್ ಸಾಧಕರಿಗೆ ಸನ್ಮಾನ
ನವದೆಹಲಿ, ಆಗಸ್ಟ್, 23: ಮಂಗಳವಾರ ರಾಷ್ಟ್ರೀಯ ಸುದ್ದಿಗಳಿಗೇನು ಬರವಿಲ್ಲ. ಒಲಿಂಪಿಕ್ಸ್ ನಲ್ಲಿ ಭಾರತದ ಪತಾಕೆ ಹಾರಿಸಿ ತವರಿಗೆ ಮರಳಿದ ಸಾಕ್ಷಿ ಮಲ್ಲಿಕ್, ದೀಪಾ ಕರ್ಮಾಕರ್ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿತು.
ತ್ರಿಪುರಾದ ಯುನಿವರ್ಸಿಟಿ ದೀಪಾ ಅವರನ್ನು ಸನ್ಮಾನಿಸಿದರೆ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಾಕ್ಷಿ ಮಲ್ಲಿಕ್ ಅವರ ತಂದೆ-ತಾಯಿಯನ್ನು ಸನ್ಮಾನಿಸಿದದರು. [ರಿಯೋದಿಂದ ಮರಳಿದ ಅಥ್ಲೀಟ್ ಸುಧಾ ಸಿಂಗ್ ಗೆ ಝೀಕಾ ಭೀತಿ]
ಬಿಹಾರದ ಆಹಾರ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಚರ್ಚೆ ಮಾಡಿದರು. ಇಡೀ ದಿನದ ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ... (ಪಿಟಿಐ ಚಿತ್ರಗಳು)
ದೀಪಾಗೆ ಸನ್ಮಾನ
ಒಲಿಂಪಿಕ್ಸ್ ನಲ್ಲಿ ಭಾರತದ ಪತಾಕೆ ಹಾರಿಸಿ ತವರಿಗೆ ಮರಳಿದ ಹೆಮ್ಮೆ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿತು.
ಮಲ್ಲಿಕ್ ತಂದೆ ತಾಯಿ
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಒಲಿಂಪಿಕ್ಸ್ ಕಂಚಿನ ಪದಕ ಸಾಧಕಿ ಸಾಕ್ಷಿ ಮಲ್ಲಿಕ್ ಅವರ ತಂದೆ-ತಾಯಿಯನ್ನು ಸನ್ಮಾನಿಸಿದದರು
ರಾಜ್ ನಾಥ್ ಸಿಂಗ್
ನವದೆಹಲಿ ಸಮೀಪದ ಸಮಲ್ಖಾ ಬಳಿ ಸೇನೆಯ ಆಡಳಿತ ಭವನವನ್ನು ಉದ್ಘಾಟನೆ ಮಾಡಿದ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಕಂಡು ಬಂದಿದ್ದು ಹೀಗೆ.
ಮೋದಿ-ನಿತೀಶ್
ಬಿಹಾರದ ಆಹಾರ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ.
ಕರಿಷ್ಮಾ ಚರಿಷ್ಮಾ
ಮುಂಬೈನಲ್ಲಿ ನಡೆದ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಬಾಲಿವುಡ್ ತಾರೆ ಕರಿಷ್ಮಾ ಕಪೂರ್.
ಪದವಿ ಸಂಭ್ರಮ
ಐಐಐಟಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪದವಿ ಪ್ರದಾನ ಮಾಡಿದರು.