ಚಿತ್ರಗಳಲ್ಲಿ: ಕಾಶ್ಮೀರ ಸಹಜ ಸ್ಥಿತಿಗೆ, ದೀಪಿಕಾ ಝಲಕ್
ನವದೆಹಲಿ, ಜೂಲೈ, 21: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿರುವ ಪ್ರಮುಖ ಆರೋಪಿ ಅಭಿ ಅಲಿಯಾಸ್ ಅಭಿರಾಮ್ ನನ್ನು ಸಿಐಡಿ ಪೊಲೀಸರು ಗುರುವಾರ ಚಿಕ್ಕಮಗಳೂರಿನ ಜಿಲ್ಲಾ ಕೋರ್ಟ್ ಗೆ ಹಾಜರು ಪಡಿಸಿದರು.
ಕೋಲ್ಕತಾದಲ್ಲಿ ನಡೆದ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಜನಸಾಗರ. ಬಿಜೆಪಿ ಮುಖಂಡರ ಹೇಳಿಕೆ ಖಂಡಿಸಿ ಅಲಹಾಬಾದ್ ನಲ್ಲಿ ವಕೀಲರ ಪ್ರತಿಭಟನೆ.
ನವದೆಹಲಿಯಲ್ಲಿ ನಡೆದ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಮಿಂಚಿದ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ, ಹಲ್ಲೆಗೆ ಒಳಗಾದ ರಾಜ್ ಕೋಟ್ ನ ದಲಿತ ಕಟುಂಬಗಳಿಗೆ ಸಾಂತ್ವನ ಹೇಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ... ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ(ಪಿಟಿಐ ಚಿತ್ತಗಳು)
ಕೋರ್ಟಿಗೆ ಆರೋಪಿ
ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿರುವ ಪ್ರಮುಖ ಆರೋಪಿ ಅಭಿ ಅಲಿಯಾಸ್ ಅಭಿರಾಮ್ ನನ್ನು ಸಿಐಡಿ ಪೊಲೀಸರು ಗುರುವಾರ ಚಿಕ್ಕಮಗಳೂರಿನ ಜಿಲ್ಲಾ ಕೋರ್ಟ್ ಗೆ ಹಾಜರು ಪಡಿಸಿದರು.
ದೀಪಿಕಾ ಝಲಕ್
ನವದೆಹಲಿಯಲ್ಲಿ ನಡೆದ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಮಿಂಚಿದ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ.
ರಾಹುಲ್ ಸಾಂತ್ವನ
ಪ್ರತಿಭಟನಾಕಾರರಿಂದ ಹಲ್ಲೆಗೆ ಒಳಗಾದ ರಾಜ್ ಕೋಟ್ ನ ದಲಿತ ಕಟುಂಬಗಳಿಗೆ ಸಾಂತ್ವನ ಹೇಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ...
ಜನಸಾಗರ
ತೃಣಮೂಲ ಕಾಂಗ್ರೆಸ್ ನ ಶಾಹಿದ್ ದಿವಸ್ ಕಾರ್ಯಕ್ರಮದಕ್ಕೆ ಕೋಲ್ಕತಾದಲ್ಲಿ ಸೇರಿದ್ದ ಜನಸಾಗರ.
ವಕೀಲರ ಪ್ರತಿಭಟನೆ
ಬಿಎಸ್ ಪಿ ನಾಯಕಿ ಮಾಯಾವತಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕ ದಯಾಶಂಕರ್ ವಿರುದ್ಧ ಅ;ಹಾಬಾದ್ ನಲ್ಲಿ ಪ್ರತಿಭಟನೆ ನಡೆಸಿದ ವಕೀಲರು.
ಪೇಪರ್ ಬಂತು
ಹಿಂಸಾಚಾರಕ್ಕೆ ತುತ್ತಾಗಿದ್ದ ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದ್ದು ದಿನ ಪತ್ರಿಕೆಗಳ ಮಾರಾಟಕ್ಕೆ ಸಿದ್ಧರಾಗಿರುವ ವ್ಯಾಪಾರಿ ಕಂಡದ್ದು ಹೀಗೆ.
ಇಬ್ಬರು ಖಾನ್ ಗಳು ಒಟ್ಟಿಗೆ
ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಇರ್ಫಾನ್ ಖಾನ್ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡರು.