ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Nation wants to know ಅರ್ನಬ್ ವಿರುದ್ಧ ನೋಟಿಸ್ ಏಕೆ?

"Nation wants to know:" ಎಂಬ ವಾಕ್ಯ ಹೇಳಿದೊಡನೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಕಣ್ಮುಂದೆ ಬರುತ್ತಾರೆ. ಆದರೆ, ಈ ಜನಪ್ರಿಯ ವಾಕ್ಯ ಈಗ ವಿವಾದಕ್ಕೀಡಾಗಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 18: "Nation wants to know:" ಎಂಬ ವಾಕ್ಯ ಹೇಳಿದೊಡನೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಕಣ್ಮುಂದೆ ಬರುತ್ತಾರೆ. ಆದರೆ, ಈ ಜನಪ್ರಿಯ ವಾಕ್ಯ ಈಗ ವಿವಾದಕ್ಕೀಡಾಗಿದೆ. ಈ ವಾಕ್ಯದ ಹಕ್ಕು ಯಾರಿಗೆ ಸೇರುತ್ತದೆ? ಜನಪ್ರಿಯತೆ ತಂದುಕೊಟ್ಟ ಅರ್ನಬ್ ಅವರಿಗೆ ಸೇರುತ್ತದೆಯೋ ಅಥವಾ ಅವರು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಗೆ ಸೇರುತ್ತದೆಯೋ?

ಒಟ್ಟಾರೆ, ಇನ್ಮುಂದೆ ಟಿವಿ ಶೋಗಳಲ್ಲಿ ಬಳಸದಂತೆ ಅರ್ನಬ್ ಅವರಿಗೆ ಬೆದರಿಕೆ ಒಡ್ಡಲಾಗಿದೆ. ಈ ಜನಪ್ರಿಯ ವಾಕ್ಯದ ಟ್ರೇಡ್ ಮಾರ್ಕ್ ಲೈಸನ್ ಪಡೆಯಲು ಮಾಧ್ಯಮ ಸಂಸ್ಥೆ ಮುಂದಾಗಿದೆ. ಹೀಗಾಗಿ, ಅರ್ನಬ್ ಅವರು ಮಾಧ್ಯಮಗಳ ಮುಂದೆ ಈ ವಾಕ್ಯ ಬಳಸಿದರೆ ಜೈಲಿಗೆ ಕಳಿಸಬೇಕಾಗುತ್ತದೆ ಎಂಬ ಬೆದರಿಕೆ ಬಂದಿದೆ.[ವಿಡಿಯೋ: ಸಂವಿಧಾನ ಹಕ್ಕಿಗಾಗಿ ಹೋರಾಟ, ಅರ್ನಬ್ ರಿಪಬ್ಲಿಕ್ ಟಿವಿ]


ನಿಮ್ಮ ಎಲ್ಲಾ ಹಣದ ಬ್ಯಾಗ್, ವಕೀಲರ ಪಡೆಯೊಂದಿಗೆ ಬಂದು ನನ್ನನ್ನು ಬಂಧಿಸಲು ಯತ್ನಿಸಿ, ಈ ವಾಕ್ಯದ ಹಕ್ಕು ನಮ್ಮೆಲ್ಲರಿಗೂ ಸೇರಿದ್ದು, ಯಾವುದೇ ಒತ್ತಡ, ಬೆದರಿಕೆ ನನ್ನ ನಿಲುವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅರ್ನಬ್ ಅವರು ಸಾಮಾಜಿಕ ಜಾಲ ತಾಣಗಳ ಮೂಲಕ ಹೇಳಿಕೊಂಡಿದ್ದಾರೆ. ಇಲ್ಲಿ ತನಕ ಅರ್ನಬ್ ಅವರಿಗೆ 6 ಲೀಗಲ್ ನೋಟಿಸ್ ಕಳಿಸಲಾಗಿದೆ. ಈ ಬಗ್ಗೆ ಇನ್ನಷ್ಟು ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಅರ್ನಬ್ ಹೇಳಿದ್ದಾರೆ.[ಅರ್ನಬ್ 'ರಿಪಬ್ಲಿಕ್' ಟಿವಿ ಆರಂಭಕ್ಕೆ ಕಾಲ ಕೂಡಿ ಬಂತು!]
English summary
When you say 'Nation Wants to Know,' you immediately think of Arnab Goswami. The question now is can he use the phrase that he had coined during his stint with Times Now? Goswami says that he has been threatened with a legal notice by a top media house
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X