ಮೋದಿ ಸಂಪುಟ ಸೇರಿದ 19 ಸಚಿವರ ಸಂಕ್ಷಿಪ್ತ ಪರಿಚಯ
ನವದೆಹಲಿ, ಜುಲೈ 05: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸಚಿವ ಸಂಪುಟ ಪುನಾರಚನೆಯಾಗಿದೆ. ಹೊಸ ಸಂಪುಟಕ್ಕೆ 19 ಹೊಸ ಮುಖಗಳನ್ನು ಸೇರಿಸಿಕೊಳ್ಳಲಾಗಿದೆ ಹಾಗೂ 6 ಮಂದಿಗೆ ಕೊಕ್ ನೀಡಲಾಗಿದೆ. ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರು ಸಂಪುಟ ದರ್ಜೆರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೂತನ ಸಚಿವರುಗಳುಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಜಾತಿ, ಮತ, ಪ್ರಾದೇಶಿಕತೆ, ಕೌಶಲ್ಯ, ಅನುಭವ, ವಿದ್ಯೆ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮೋದಿ ಅವರು ಸಂಪುಟ ಪುನರ್ ರಚನೆ ಮಾಡಿದ್ದಾರೆ. [ಎನ್ ಡಿಎ ಸಂಪುಟ ವಿಸ್ತರಣೆ, ಡಿವಿಎಸ್ ಸೇಫ್, ದೇಕಾಗೆ ಚಾನ್ಸ್]
ಜೊತೆಗೆ ಉತ್ತರಪ್ರದೇಶ ಸೇರಿದಂತೆ ಮುಂಬರುವ ವಿಧಾನಸಭಾ ಚುನಾವಣೆಗೆ ತಕ್ಕಂತೆ ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಅಪ್ಡೇಟ್ ಗಳು ಇಲ್ಲಿವೆ...[ಮೋದಿ ಸಂಪುಟ: 19 ಹೊಸ ಮುಖಗಳು ಇನ್, 6 ಮಂದಿ ಔಟ್]
* ಸುಭಾಶ್ ಧಾಮ್ರೆ [ಮಹಾರಾಷ್ಟ್ರದ ಸಂಸದ] ರಾಜ್ಯಸಚಿವರಾಗಿ ಪ್ರಮಾಣ ವಚನ.[ಗ್ಯಾಲರಿ : ಮೋದಿ ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆ]
* ಪಿ.ಪಿ ಚೌಧರಿ [ರಾಜಸ್ಥಾನದ ಸಂಸದ]
* ಸಿ.ಆರ್ ಚೌಧರಿ [ರಾಜಸ್ಥಾನದ ರಾಜ್ಯಸಭಾ ಸದಸ್ಯ] ರಾಜ್ಯಸಚಿವರಾಗಿ ಪ್ರಮಾಣ ವಚನ.
* ಅನುಪ್ರಿಯಾ ಪಟೇಲ್ [ಉತ್ತರಪ್ರದೇಶದ ಅಪ್ನಾದಳದ ಸಂಸದೆ] ರಾಜ್ಯಸಚಿವೆಯಾಗಿ ಪ್ರಮಾಣ ವಚನ.
* ಮನ್ಸುಖ್ ಎಲ್ ಮಂದವಿಯಾ [ಗುಜರಾತಿನ ರಾಜ್ಯಸಭಾ ಸದಸ್ಯ] ರಾಜ್ಯಸಚಿವರಾಗಿ ಪ್ರಮಾಣ ವಚನ.
* ಕೃಷ್ಣಾರಾಜ್ [ಉತ್ತರಪ್ರದೇಶದ ಸಂಸದೆ] ರಾಜ್ಯಸಚಿವೆಯಾಗಿ ಪ್ರಮಾಣ ವಚನ.
* ಅಜಯ್ ತಮ್ಟಾ [ಉತ್ತರಾಖಂಡ್ ನ ಸಂಸದ] ರಾಜ್ಯಸಚಿವರಾಗಿ ಪ್ರಮಾಣ ವಚನ.
* ಮಹೇಂದ್ರ ನಾಥ್ ಪಾಂಡೆ [ಗುಜರಾತಿನ ಸಂಸದ]
*
ಜಸ್ವಂತ್
ಸಿಂಗ್
ಭಾಬೊರೆ[ಗುಜರಾತಿನ
ಸಂಸದ]
ರಾಜ್ಯಸಚಿವರಾಗಿ
ಪ್ರಮಾಣ
ವಚನ.
* ಅರ್ಜುನ್ ರಾಮ್ ಮೆಘ್ವಾಲ್ [ರಾಜಸ್ಥಾನದ ಸಂಸದ], ರಾಜ್ಯಸಚಿವರಾಗಿ ಪ್ರಮಾಣ ವಚನ.
* ಎಂಜೆ ಅಕ್ಬಲ್ [ಮಧ್ಯಪ್ರದೇಶದ ರಾಜ್ಯಸಭಾ ಸದಸ್ಯ] ರಾಜ್ಯಸಚಿವರಾಗಿ ಪ್ರಮಾಣ ವಚನ.
* ಪುರುಷೋತ್ತಮ್ ರುಪಾಲ [ಗುಜರಾತಿನ ರಾಜ್ಯ ಸಭಾ ಸದಸ್ಯ] ಅವರಿಂದ ಪ್ರಮಾಣ ವಚನ
* ಅನಿಲ್ ಮಾಧವ್ ದಾವೆ [ಮಧ್ಯಪ್ರದೇಶದ ರಾಜ್ಯ ಸಭಾ ಸದಸ್ಯ] ರಾಜ್ಯಸಚಿವರಾಗಿ ಪ್ರಮಾಣ ವಚನ.
* ರಮೇಶ್ ಚಂದ್ರಪ್ಪ ಜಿಗಜಿಣಗಿ [ಕರ್ನಾಟಕದ ವಿಜಯಪುರ ಸಂಸದ] ರಾಜ್ಯಸಚಿವರಾಗಿ ಪ್ರಮಾಣ ವಚನ.
*
ರಾಜೇನ್
ಗೋಹೈನ್
[ಅಸ್ಸಾಂನ
ಸಂಸದ]
* ರಾಮದಾಸ್ ಅಥಾವುಲೆ [ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ]
*
ವಿಜಯ್
ಗೋಯಲ್
[ರಾಜಸ್ಥಾನದ
ರಾಜ್ಯ
ಸಭಾ
ಸದಸ್ಯ]
Shri @PrakashJavdekar is sworn in as Cabinet Minister #ModiCabinet #ModiCabinetRejig pic.twitter.com/xPFpafQhcC
— PIB India (@PIB_India) July 5, 2016
* ಎಸ್ಎಸ್ ಅಹ್ಲುವಾಲಿಯಾ [ಪಶ್ಚಿಮ ಬಂಗಾಲದ ರಾಜ್ಯಸಭಾ ಸದಸ್ಯ]ರಾಜ್ಯಸಚಿವರಾಗಿ ಪ್ರಮಾಣ ವಚನ.
* ಫಗುನ್ ಸಿಂಗ್ ಕುಲಸ್ತೆ ರಾಜ್ಯಸಚಿವರಾಗಿ ಪ್ರಮಾಣ ವಚನ.
ಕ್ಯಾಬಿನೆಟ್
ದರ್ಜೆ
ಸಚಿವರಾಗಿ
ಪ್ರಕಾಶ್
ಜಾವ್ಡೇಕರ್
ಅವರಿಗೆ
ಬಡ್ತಿ
ನೀಡಿಕೆ.
ಪರಿಸರ
ಖಾತೆ
(ಸ್ವತಂತ್ರ)
ಹೊಂದಿದ್ದರು.
ಮಿಕ್ಕ
ಎಲ್ಲಾ
ಸದಸ್ಯರಿಗೆ
ರಾಜ್ಯ
ಸಚಿವ
ಖಾತೆ
ಲಭ್ಯ.
ಯಾರಿಗೆ
ಯಾವ
ಖಾತೆ
ಸಂಜೆ
ವೇಳೆಗೆ
ತಿಳಿಯಲಿದೆ.
ಮೋದಿ ಸಂಪುಟ ಸೇರಿದ ನೂತನ ಸಚಿವರ ಪಟ್ಟಿ, ಪ್ರಕಾಶ್ ಗೆ ಬಡ್ತಿ