ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲು ಪ್ರಸಾದ್ ಯಾದವ್ ಅವರ VIP ಸವಲತ್ತಿಗೆ ಕತ್ತರಿ!

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಗೆ ನೀಡಿದ್ದ ಸವಲತ್ತಿಗೆ ಕೇಂದ್ರ ಸರ್ಕಾರ ತಡೆ. ಪಾಟ್ನಾ ವಿಮಾನ ನಿಲ್ದಾಣದಲ್ಲಿ ರನ್ ವೇ ವರೆಗೆ ನೇರವಾಗಿ ತಮ್ಮ ವಾಹನದಲ್ಲಿ ಸಾಗಬಹುದಾಗಿದ್ದ ಲಾಲು ಹಾಗೂ ಅವರ ಪತ್ನಿ ರಾಬ್ಡಿ.

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ನವದೆಹಲಿ, ಜುಲೈ 22: ರಾಷ್ಟ್ರೀಯ ಜನತಾ ದಳದ (ಆರ್ ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ನೀಡಲಾಗಿದ್ದ ವಿಶೇಷ ವಿಐಪಿ ಸವಲತ್ತೊಂದನ್ನು ಕೇಂದ್ರ ಸರ್ಕಾರ ಮೊಟಕುಗೊಳಿಸಿದೆ.

ಮಾಯಾವತಿ ಪ್ರಕರಣ: ಬಿಜೆಪಿ ದಲಿತ ವಿರೋಧಿ ಎಂದು ಕಿಡಿಕಾರಿದ ಲಾಲುಮಾಯಾವತಿ ಪ್ರಕರಣ: ಬಿಜೆಪಿ ದಲಿತ ವಿರೋಧಿ ಎಂದು ಕಿಡಿಕಾರಿದ ಲಾಲು

ಪಾಟ್ನಾದಿಂದ ದೆಹಲಿ ಮತ್ತಿತರ ಕಡೆಗೆ ವಿಮಾನ ಪ್ರಯಾಣ ಬೆಳೆಸುವಾಗ ಪಾಟ್ನಾದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣೆಯಿಲ್ಲದೆ ಲಾಲು ಹಾಗೂ ಅವರ ಪತ್ನಿ ರಾಬ್ಡಿ ದೇವಿ ಪ್ರವೇಶಿಸಬಹುದಾಗಿತ್ತು. ಈ ಸೌಲಭ್ಯದಿಂದಾಗಿ, ಈ ಇಬ್ಬರೂ ತಮ್ಮ ವಾಹನಗಳಲ್ಲಿ ನೇರವಾಗಿ ರನ್ ವೇವರೆಗೆ ಸಾಗಿ ಅಲ್ಲಿಂದಲೇ ವಿಮಾನ ಹತ್ತಿಕೊಂಡು ಹೋಗಬಹುದಾಗಿತ್ತು.

Narendra Modi government scraps special privilege for Lalu and family in Patna airport

ಈ ಇಬ್ಬರೂ ವಿವಿಧ ಕಾಲಘಟ್ಟಗಳಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಈ ಸವಲತ್ತನ್ನು ಪಡೆದಿದ್ದರು. ಈವರೆಗೂ ಅದು ಹಾಗೆಯೇ ಮುಂದುವರಿದಿತ್ತು. ಇದೀಗ, ಆ ಇಬ್ಬರಿಗೂ ಯಾವುದೇ ಸಾಂವಿಧಾನಿಕ ಹುದ್ದೆ ಇಲ್ಲವಾದ್ದರಿಂದ ಅವರಿಗೆ ನೀಡಲಾಗಿರುವ ಸವಲತ್ತನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಅಶೋಕ್ ಗಜಪತಿ ರಾಜು ಅವರು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.

ನನ್ನ ಪುತ್ರ ರಾಜಿನಾಮೆ ನೀಡುವುದಿಲ್ಲ: ಲಾಲೂ ಸ್ಪಷ್ಟನೆನನ್ನ ಪುತ್ರ ರಾಜಿನಾಮೆ ನೀಡುವುದಿಲ್ಲ: ಲಾಲೂ ಸ್ಪಷ್ಟನೆ

ಲಾಲು ಹಾಗೂ ಅವರ ಕುಟುಂಬದ ಮೇಲೆ ಹಲವಾರು ಭ್ರಷ್ಟಾಚಾರಗಳ ಆರೋಪ ಕೇಳಿಬಂದಿದ್ದು, ಲಾಲು, ಅವರ ಪತ್ನಿ ರಾಬ್ಡಿ ದೇವಿ, ಪುತ್ರಿ ಮಿಸಾ ಭಾರತಿ ಅವರು ತನಿಖೆಗೆ ಒಳಪಟ್ಟಿರುವ ಬೆನ್ನಲ್ಲೇ ಈ ಸೌಲಭ್ಯಗಳನ್ನು ಹಿಂಪಡೆದಿರುವುದು ಲಾಲು ಅವರಿಗೆ ಮುಜುಗರ ತಂದಿದೆ ಎಂದು ಹೇಳಲಾಗಿದೆ.

English summary
Ashok Gajapati Raju led Civil Aviation Ministry on Sunday stopped Rashtriya Janata Dal (RJD) supremo Lalu Yadav, and wife Rabri Devi’s ‘privilege’ of direct access to Patna airport tarmac.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X