ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಪ್ರವೇಶ ಇನ್ನು ಎರಡು ದಿನ ತಡ

By Madhusoodhan
|
Google Oneindia Kannada News

ನವದೆಹಲಿ, ಜೂನ್, 07: ಮಾನ್ಸೂನ್ ಮಾರುತಗಳು ಎರಡು ದಿನ ತಡವಾಗಿ ಕೇರಳ ಸಮುದ್ರ ತೀರ ಅಪ್ಪಳಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.

ಜೂನ್ 7ಕ್ಕೆ ಆಗಿಸಬೇಕಿದ್ದ ಮಾನ್ಸೂನ್ ಮಾರುತಗಳು ಜೂನ್ 9ಕ್ಕೆ ಆಗಮನ ಮಾಡಲಿವೆ. ಅಂದರೆ ಎರಡು ದಿನ ತಡವಾಗಿ ಮಾನ್ಸೂನ್ ಮಾರುತಗಳು ಆಗಮನ ಮಾಡಿದಂತೆ ಆಗುತ್ತದೆ.[ಜೂನ್ 8 ಅಥವಾ 9 ಕ್ಕೆ ರಾಜ್ಯದಲ್ಲಿ ಮುಂಗಾರು ಮಳೆ ಸಿಂಚನ]

monsoon

ಜೂನ್ 15 ರ ನಂತರ ಮಾರುತಗಳು ಭಾರೀ ಮಳೆ ಸುರಿಸಲಿವೆ. ಎಲ್ ನಿನೋ ಪ್ರಭಾವ ಇರದಿದ್ದರೆ ಸೆಪ್ಟೆಂಬರ್ ತಿಂಗಳಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಾರದ ಮೇಲೆ ಎಡು ದಿನ ಮುಂಗಾರು ವಿಳಂಬ ಆದಂತೆ ಆಗಿದೆ. ಜೂ.5ರ ವೇಳೆಗೆ ಮುಂಗಾರು ಕರ್ನಾಟಕಕ್ಕೆ ಕಾಲಿಡಬೇಕಿತ್ತು. ಆದರೆ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಹುಬ್ಬಳ್ಳಿಯಲ್ಲಿಯೂ ಧಾರಾಕಾರ ಮಳೆ ಸುರಿದಿದ್ದು ಸೋಮವಾರ ಜನಜೀವನಕ್ಕೆ ತೊಂದರೆ ಉಂಟುಮಾಡಿತ್ತು.[ದೇಶಕ್ಕಿಲ್ಲ ಮಳೆ ಕೊರತೆ ಚಿಂತೆ, ರೈತರಿಗೂ ನಿಶ್ಚಿಂತೆ]

ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 10 ಸೆಂಮೀ, ಹಳಿಯಾಳದಲ್ಲಿ 8 ಸೆಂಮೀ ಮಳೆ ದಾಖಲಾಗಿದೆ. ಸೋಮವಾರ ಬೆಂಗಳೂರು ನಗರ, ದಾವಣಗೆರೆ, ಅಂಕೋಲಾ, ಹುಬ್ಬಳ್ಳಿ ಧಾರವಾಡ, ಶಿವಮೊಗ್ಗ, ಉಡುಪಿ, ಸಂತೆಬೆನ್ನೂರು, ತಿಪಟೂರು , ಕೊರಟಗೆರೆಯಲ್ಲಿ ಮಳೆ ಬಿದ್ದಿದೆ.

English summary
India's official weather forecaster on Tuesday said the June-September monsoon, which has advanced further into the south Arabian sea and south-west Bay of Bengal, is expected to hit the southern state of Kerala by 9 June. The India Meteorological Department (IMD) had earlier forecast that the south-west monsoon will have a delayed onset in Kerala on 7 June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X