ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 100ಕ್ಕೆ ಏರಿಕೆ
ಪಾಟ್ನಾ-ಇಂದೋರ್ ಎಕ್ಸ್ ಪ್ರೆಸ್ ಭಾನುವಾರ ಮುಂಜಾನೆ ಹಳಿ ತಪ್ಪಿದ ಪರಿಣಾಮ ಭಾರಿ ಅಪಘಾತ ಸಂಭವಿಸಿದೆ.
ಕಾನ್ಪುರ, ನವೆಂಬರ್ 20: ಪಾಟ್ನಾ-ಇಂದೋರ್ ಎಕ್ಸ್ ಪ್ರೆಸ್ ಭಾನುವಾರ ಮುಂಜಾನೆ ಹಳಿ ತಪ್ಪಿದ ಪರಿಣಾಮ ಭಾರಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 100 ಮಂದಿ ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಉತ್ತರಪ್ರದೇಶದ
ಕಾನ್ಪುರದ
ಪುರ್ಖಾರಾಯಂ
ಬಳಿ
ದುರ್ಘಟನೆ
ನಡೆದಿದ್ದು,
ಘಟನೆಗೆ
ನಿಖರ
ಕಾರಣ
ತಿಳಿದು
ಬಂದಿದೆ.
ತಿರುವಿನಲ್ಲಿ
80
ಕಿ.ಮೀ
ವೇಗದಲ್ಲಿ
ಚಲಿಸುತ್ತಿದ್ದ
ರೈಲಿಗೆ
ಇದ್ದಕ್ಕಿದ್ದಂತೆ
ಬ್ರೇಕ್
ಹಾಕಿದ್ದು
ಕಾರಣ
ಎನ್ನಲಾಗಿದೆ.ಸ್ಥಳದಲ್ಲಿ
ರೈಲ್ವೆ
ಪೊಲೀಸರು
ಹಾಗೂ
ವೈದ್ಯರ
ತಂಡ
ಅಗತ್ಯ
ನೆರವು
ನೀಡುತ್ತಿದ್ದಾರೆ.
[ಕಾನ್ಪುರ
ಬಳಿ
ರೈಲು
ಅಪಘಾತ,
ಯಾವ
ಯಾವ
ರೈಲು
ಮಾರ್ಗ
ಬದಲು?]
ಘಟನಾ ಸ್ಥಳದಿಂದ ಸುಮಾರು 91 ಶವಗಳನ್ನು ಹೊರ ತೆಗೆಯಲಾಗಿದೆ ಎಂದು ಕಾನ್ಪುರದ ಐಜಿಪಿ ಝಾಕೀರ್ ಅಹ್ಮದ್ ಅವರು ಎಎನ್ ಐಗೆ ತಿಳಿಸಿದ್ದಾರೆ. ಉತ್ತರಪ್ರದೇಶ, ಮಧ್ಯಪ್ರದೇಶ ಸರ್ಕಾರಗಳು ಹಾಗೂ ಭಾರತೀಯ ರೈಲ್ವೆಯಿಂದ ಮೃತರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಪರಿಹಾರ ಧನ ಘೋಷಿಸಲಾಗಿದೆ.
ಸಹಾಯವಾಣಿಗಳು
ಝಾನ್ಸಿ:
05101072,
ಓರಾಯಿ:
051621072
ಕಾನ್ಪುರ:
05121072
ಪೊರ್ಖಾನ್
:
05113-270239
Patna-Indore exp train derailed: Jhansi-Lucknow Intercity,Jhansi-Kanpur passenger train cancelled;train no 12542,12522,12541,12534 diverted.
— ANI UP (@ANINewsUP) November 20, 2016
ಪಾಟ್ನಾ
-ಇಂದೋರ್
ಎಕ್ಸ್
ಪ್ರೆಸ್
ರೈಲು
ಹಳಿ
ತಪ್ಪಿದ
ದುರ್ಘಟನೆ
ಬಗ್ಗೆ
ತೀವ್ರ
ಖೇದ
ವ್ಯಕ್ತಪಡಿಸಿರುವ
ಕೇಂದ್ರ
ಸಚಿವ
ರಾಜನಾಥ್
ಸಿಂಗ್
ಅವರು,
ರೈಲ್ವೆ
ಸಚಿವ
ಸುರೇಶ್
ಪ್ರಭು
ಅವರೊಟ್ಟಿಗೆ
ರಕ್ಷಣಾ
ಕಾರ್ಯದ
ಬಗ್ಗೆ
ಮಾತುಕತೆ
ನಡೆಸಿದ್ದಾರೆ.
Patna-Indore exp train derailed: HM speaks to Railway Minister Suresh Prabhu about derailment of 14 bogies, directs DG, NDRF to rush to spot
— ANI UP (@ANINewsUP) November 20, 2016
ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್ ಡಿ ಆರ್ ಎಫ್) ರವಾನಿಸಲಾಗಿದೆ.
14 coaches of Patna-Indore express derailed near Pukharayan (Kanpur, UP); 20 dead. Relief and rescue operations underway pic.twitter.com/uMyAcJXYtq
— ANI UP (@ANINewsUP) November 20, 2016
ಎಸ್ 1, ಎಸ್ 2 ಹೆಚ್ಚಿನ ಹಾನಿಯಾಗಿದೆ. 14 ಬೋಗಿಗಳು ಹಳಿ ತಪ್ಪಿರುವ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುರೇಶ್ ಪ್ರಭು, ಈ ಬಗ್ಗೆ ತೀವ್ರ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
(ಒನ್ ಇಂಡಿಯಾ ಸುದ್ದಿ)