ಮಾಲೆಗಾಂವ್ ಸ್ಫೋಟ : ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ರಿಲೀಫ್
ಮುಂಬೈ, ಮೇ 13: ಮಾಲೆಗಾಂವ್ ಸ್ಫೋಟದ ಆರೋಪಿಯಾಗಿದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಅವಧಿಗೆ ಮುನ್ನ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯೂ ಕಂಡು ಬಂದಿದೆ. ಸಾಧ್ವಿ ಪ್ರಜ್ಞ ವಿರುದ್ಧ ಯಾವುದೇ ಸಾಕ್ಷಿ, ಅಧಾರ ಸಿಕ್ಕಿಲ್ಲ ಎಂದು 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ದಳವು ಕೋರ್ಟಿಗೆ ವರದಿ ನೀಡಲು ಸಿದ್ಧವಾಗಿದೆ.
ಸಾಧ್ವಿ
ಅವರ
ವಿರುದ್ಧ
ಹಾಕಿರುವ
ಚಾರ್ಚ್
ಶೀಟ್
ಪೇಲವವಾಗಿದ್ದು,
ಯಾವುದೇ
ರೀತಿಯಲ್ಲೂ
ಆಕೆ
ವಿರುದ್ಧ
ಸಾಕ್ಷಿ
ಸಿಕ್ಕಿಲ್ಲ.
2008ರ
ಮಾಲೆಗಾಂವ್
ಸ್ಫೋಟಕ್ಕೆ
ಕಾರಣವಾದ
ಮೋಟರ್
ಸೈಕಲ್
ಸಾಧ್ವಿಗೆ
ಸೇರಿದ್ದು
ಎಂಬ
ಕಾರಣಕ್ಕೆ
ಮಹಾರಾಷ್ಟ್ರ
ಉಗ್ರ
ನಿಗ್ರಹ
ದಳ
(ಎಟಿಎಸ್)
ದವರು
ಸಾಧ್ವಿಯನ್ನು
ಬಂಧಿಸಿದ್ದರು.
ಆದರೆ, ಆ ಮೋಟರ್ ಸೈಕಲನ್ನು ಆಕೆ ಬಳಸಿಲ್ಲ ಎಂಬ ಸತ್ಯ ನಂತರ ಅರಿವಾಗಿದೆ. ಅಲ್ಲದೆ, ಸ್ಫೋಟದ ಸಂಚಿನಲ್ಲಿ ಆಕೆ ಭಾಗಿಯಾಗಿರುವ ಬಗ್ಗೆ ಕೂಡಾ ಯಾವುದೇ ಪುರಾವೆ ಎನ್ ಐಎ ತಂಡಕ್ಕೆ ಸಿಕ್ಕಿಲ್ಲ.
ಬಿಡುಗಡೆ ನಿರೀಕ್ಷೆ: ಈ ಪ್ರಕರಣದ ಆರೋಪಿಗಳಾಗಿ ಸಾಧ್ವಿ ಪ್ರಗ್ಯಾ ಸಿಂಗ್, ಪುಣೆಯ ಅಭಿನವ್ ಭರತ್, ಸೇನಾಧಿಕಾರಿ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನು ಮೋಕಾ ಕಾಯ್ದೆಯಡಿ ಪೊಲೀಸರು ಬಂಧಿಸಿ, ಜೈಲಿಗೆ ಕಳಿಸಿದ್ದರು.
ಆದರೆ, Maharashtra Control of Organised Crimes Act (ಮೋಕಾ) ಕಾಯ್ದೆ ಅಡಿಯಲ್ಲಿ ಸಾಧ್ವಿ ವಿರುದ್ಧ ಹಾಕಲಾದ ಆರೊಪಗಳೆಲ್ಲವೂ ತಿರಸ್ಕರಿಸಲ್ಪಟ್ಟಿದೆ. ತನಿಖೆ ಕೈಗೆತ್ತಿಕೊಂಡ ಎಟಿಎಸ್ ಆರಂಭದಲ್ಲೇ ಸಾಧ್ವಿಯೇ ಈ ಸ್ಫೋಟ ಹಿಂದಿನ ರೂವಾರಿ ಎಂದು ಹೇಳಿಕೆ ನೀಡಿತ್ತು. ನಂತರ ಎನ್ ಐಎ ತನಿಖೆ ನಡೆಸಿ, ಈ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದಿದೆ.
ಸ್ಫೋಟಕ್ಕೆ ಕಾರಣವಾದ ಮೋಟರ್ ಸೈಕಲ್ ಸಾಧ್ವಿ ಹೆಸರಿನಲ್ಲಿ ನೋಂದಣಿಯಾಗಿತ್ತು, ರಾಮಚಂದ್ರ ಕಲಸಂಘ್ರ ಅವರು ಘಟನೆಗೂ ಮುನ್ನ ಎರಡು ವರ್ಷಗಳಿಂದ ಈ ಬೈಕನ್ನು ಬಳಸುತ್ತಿದ್ದರು. ಹೀಗಾಗಿ ಸಾಧ್ವಿ ಅವರ ವಿರುದ್ಧ ಸಾಕ್ಷಿಗಳಿಲ್ಲ ಎಂದು ಕೋರ್ಟಿಗೆ ಎನ್ ಐಎ ತಿಳಿಸಲಿದೆ. ಇದರಿಂದಾಗಿ 8 ವರ್ಷಗಳ ನಂತರ ಜೈಲಿನಿಂದ ಸಾಧ್ವಿ ಹೊರಬರುವ ಸಾಧ್ಯತೆ ಹೆಚ್ಚಿದೆ (ಒನ್ಇಂಡಿಯಾ ಸುದ್ದಿ)