ಹಲ್ಲೆ, ಕಿರುಕುಳದ ಬಗ್ಗೆ ಕೊನೆಗೂ ಮೌನ ಮುರಿದ ನಟಿ
ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮಾನಸಿಕ, ದೈಹಿಕ ಕಿರುಕುಳ ಅನುಭವಿಸಿದ ಎರಡುವಾರಗಳ ಬಳಿಕ ಮಲಯಾಳಂ ನಟಿ ತಮ್ಮ ನೋವು ತೋಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಫ್ರೊಫೈಲ್ ನಲ್ಲಿ ಈ ದುರ್ಘಟನೆ ಬಗ್ಗೆ ಬರೆದುಕೊಂಡಿದ್ದಾರೆ.
ತಿರುವನಂತಪುರಮ್, ಫೆಬ್ರವರಿ 28: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮಾನಸಿಕ, ದೈಹಿಕ ಕಿರುಕುಳ ಅನುಭವಿಸಿದ ಎರಡುವಾರಗಳ ಬಳಿಕ ಮಲಯಾಳಂ ನಟಿ ತಮ್ಮ ನೋವು ತೋಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಫ್ರೊಫೈಲ್ ನಲ್ಲಿ ಈ ದುರ್ಘಟನೆ ಬಗ್ಗೆ ಬರೆದುಕೊಂಡಿದ್ದಾರೆ.
ಘಟನೆ ಬಳಿಕ ಎಲ್ಲೂ ಕಾಣಿಸಿಕೊಳ್ಳದೆ ನೋವು ಅನುಭವಿಸಿದ್ದ ನಟಿ ಈಗ ಸಾಮಾಜಿಕ ಜಾಲ ತಾಣ ಇನ್ಸ್ಟಾ ಗ್ರಾಮ್ ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಶೂಟಿಂಗಿಗೆ ಹಾಜರಾಗಿರುವ ನಟಿ, ನನಗೆ ಎದುರಾಗುವ ಎಲ್ಲಾ ಸವಾಲು, ಸಮಸ್ಯೆಯನ್ನು ಧೈರ್ಯದಿಂದ ಎದುರಿಸುತ್ತೇನೆ ಎಂದಿದ್ದಾರೆ.[ನಟಿ ಮೇಲೆ ಹಲ್ಲೆ ಪ್ರಕರಣ, ಪಲ್ಸರ್ ಸುನಿ ಮೊಬೈಲ್ ಎಲ್ಲಿ?]
'Life has knocked me down a few times, it showed me things I never even imagined. But I could face all those and will overcome in the future as well' ಎಂದು ಬರೆದುಕೊಂಡಿದ್ದಾರೆ.
ಈ ನಡುವೆ ಪೊಲೀಸ್ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿರುವ ನಟಿ, ನಾಲ್ವರನ್ನು ಗುರುತಿಸಿದ್ದಾರೆ. ನಾಲ್ವರು ಕೂಡಾ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳಾಗಿದ್ದು, ತನಿಖೆ ಮುಂದುವರೆದಿದೆ. ಪ್ರಮುಖ ಆರೋಪಿ ಪಲ್ಸರ್ ಸುನಿ ಹಾಗೂ ವಿಜೇಶ್ ನನ್ನು ಕೊಯಮತ್ತೂರಿಗೆ ಕರೆದೊಯ್ದಿರುವ ಕೇರಳ ಪೊಲೀಸರು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಆದರೆ, ದುಷ್ಜೃತ್ಯವನ್ನು ಸೆರೆ ಹಿಡಿದ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ.[ಮಲಯಾಳಿ ನಟಿ ದೌರ್ಜನ್ಯ : ಪಲ್ಸರ್ ಸುನಿಯನ್ನು ಬಂಧಿಸಿದ್ದು ಹೇಗೆ?]
ನಟಿಯ ಧೈರ್ಯವನ್ನು ಮೆಚ್ಚಿರುವ ಕೇರಳ ಚಿತ್ರರಂಗ ಆಕೆಯ ಬೆಂಬಲಕ್ಕೆ ನಿಂತಿದೆ. ನಟ ಪೃಥ್ವಿರಾಜ್, ಅಂಜಲಿ ಮೆನನ್, ಮಂಜು ವಾರಿಯರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ನಟಿಯ ಬೆಂಬಲಿಸಿ, ಸಾಮಾಜಿಕ ಜಾಲ ತಾಣಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.