ಕೇರಳ ಚುನಾವಣೆ : 3 ಕ್ಷೇತ್ರದಲ್ಲಿ ಜೆಡಿಎಸ್ಗೆ ಗೆಲುವು
ಬೆಂಗಳೂರು, ಮೇ 19 : ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಮೂರು ಸ್ಥಾನಗಳಲ್ಲಿ ಜಯಗಳಿಸಿದೆ. ಈ ಮೂಲಕ ದೇವೇಗೌಡರಿಗೆ ಹುಟ್ಟುಹಬ್ಬದ ಉಡುಗೊರೆ ಸಿಕ್ಕಿದೆ.[ವಿಜಯೋತ್ಸಾಹದ ಚಿತ್ರಗಳು]
ಗುರುವಾರ
ಕೇರಳ
ವಿಧಾನಸಭೆ
ಚುನಾವಣೆ
ಫಲಿತಾಂಶ
ಪ್ರಕಟಗೊಂಡಿದ್ದು,
ಎಸ್.ಅಚ್ಯುತಾನಂದನ್
ನೇತೃತ್ವದ
ಎಲ್ಡಿಎಫ್
(ಲೆಫ್ಟ್
ಡೆಮಾಕ್ರಟಿಕ್
ಫ್ರಂಟ್)ಸ್ಪಷ್ಟ
ಬಹುಮತದೊಂದಿಗೆ
ಅಧಿಕಾರ
ಪಡೆಯಲಿದೆ.
ದೇವರನಾಡಲ್ಲಿ
ಖಾತೆ
ತೆರೆಯುವ
ಮೂಲಕ
ಬಿಜೆಪಿ
ಐತಿಹಾಸಿಕ
ಸಾಧನೆ
ಮಾಡಿದೆ.
[ಕೇರಳದಲ್ಲಿ
ಬಿಜೆಪಿ
ಮೈತ್ರಿಕೂಟಕ್ಕೆ
1
ಸ್ಥಾನ]
ಜೆಡಿಎಸ್ ಅಭ್ಯರ್ಥಿಗಳು ವದಕಾರ (ಸಿ.ಕೆ.ನಾನು), ತಿರುವಲ್ಲಾ (ಮ್ಯಾಥ್ಯೂ ಟಿ.ಥಾಮಸ್) ಮತ್ತು ಚಿತ್ತೂರು (ಕೆ.ಕೃಷ್ಣನ್ ಕುಟ್ಟಿ) ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಪಕ್ಷ ಮೂರು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಕೋಲಾವಂ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ. [ಚಿತ್ರಗಳು : ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ದೇವೇಗೌಡರು]
ಶುಭಾಶಯ ಕೋರಿದ ಗೌಡರು : ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಎಸ್.ಅಚ್ಯುತಾನಂದನ್ ಅವರಿಗೆ ಪತ್ರ ಬರೆದು, ಶುಭಾಶಯ ಕೋರಿದ್ದಾರೆ.
ಗೆಲುವು
ಸಾಧಿಸಿದ
ಅಭ್ಯರ್ಥಿಗಳ
ವಿವರ
*
ವದಕಾರ
(ಸಿ.ಕೆ.ನಾನು)
9511
ಮತಗಳಿಂದ
ಗೆಲುವು
*
ತಿರುವಲ್ಲಾ
(ಮ್ಯಾಥ್ಯೂ
ಟಿ.ಥಾಮಸ್)
8242
ಮತಗಳಿಂದ
ಗೆಲುವು
*
ಚಿತ್ತೂರು
(ಕೆ.ಕೃಷ್ಣನ್
ಕುಟ್ಟಿ)
2914
ಮತಗಳಿಂದ
ಗೆಲುವು