ಜಯಾ ಖುಲಾಸೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಡಿಎಂಕೆ
ನವದೆಹಲಿ, ಜುಲೈ 06 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜಯಲಲಿತಾ ಅವರನ್ನು ಖುಲಾಸೆಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಡಿಎಂಕೆ ಪಕ್ಷ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಸೋಮವಾರ
ಡಿಎಂಕೆ
ಸುಪ್ರೀಂಕೋರ್ಟ್ಗೆ
ಈ
ಮೇಲ್ಮನವಿಯನ್ನು
ಸಲ್ಲಿಕೆ
ಮಾಡಿದೆ.
ಅಕ್ರಮ
ಆಸ್ತಿಗಳಿಕೆ
ಪ್ರಕರಣದಲ್ಲಿ
ಕರ್ನಾಟಕ
ಸರ್ಕಾರವೂ
ಮೇಲ್ಮನವಿಯನ್ನು
ಸಲ್ಲಿಸಿದ್ದು,
ಎರಡೂ
ಅರ್ಜಿಗಳನ್ನು
ಕೋರ್ಟ್
ಒಟ್ಟಿಗೆ
ವಿಚಾರಣೆ
ನಡೆಸಲಿದೆ.
[ಜಯಾ
ಅಕ್ರಮ
ಆಸ್ತಿ
ಕೇಸ್,
ಮೇಲ್ಮನವಿ
ಸಲ್ಲಿಸಿದ
ಕರ್ನಾಟಕ]
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಮತ್ತು ಇತರ ಮೂವರನ್ನು ಖುಲಾಸೆಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿರುವ ಡಿಎಂಕೆ, ಜಯಲಲಿತಾ ಅವರಿಗೆ ವಿಶೇಷ ಕೋರ್ಟ್ ನೀಡಿದ್ದ 4 ವರ್ಷದ ಜೈಲು ಶಿಕ್ಷೆ ತೀರ್ಪನ್ನು ಜಾರಿಗೊಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದೆ. [ಜಯಲಲಿತಾ ವಿರುದ್ಧ ಮೇಲ್ಮನವಿ ಸಲ್ಲಿಸಲು 7 ಕಾರಣಗಳು!]
ಪ್ರಕರಣದಲ್ಲಿ ತೀರ್ಪು ನೀಡುವಾಗ ವಿಶೇಷ ನ್ಯಾಯಾಲಯ ಹೇಳಿದ್ದ ಹಲವು ಅಂಶಗಳನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪರಿಗಣಿಸಿಲ್ಲ. ತೀರ್ಪು ನೀಡುವಾಗ ಹೈಕೋರ್ಟ್ ಹಲವು ಗಣಿತದ ತಪ್ಪುಗಳನ್ನು ಮಾಡಿದ್ದು, ಇದರಿಂದ ಜಯಲಲಿತಾ ಅವರು ಖುಲಾಸೆಗೊಂಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಿದೆ.
ಒಟ್ಟಿಗೆ ಎರಡೂ ಅರ್ಜಿಗಳ ವಿಚಾರಣೆ : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ಮತ್ತು ಡಿಎಂಕೆ ಮೇಲ್ಮನವಿ ಸಲ್ಲಿಸಿವೆ. ಸುಪ್ರೀಂಕೋರ್ಟ್ ಎರಡೂ ಅರ್ಜಿಗಳನ್ನು ಮುಂದಿನವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಗೂ ದಿನಾಂಕವನ್ನು ನಿಗದಿಪಡಿಸಿಲ್ಲ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ನಡೆಸುವ ಸಾಧ್ಯತೆ ಇದೆ.