ಭ್ರಷ್ಟಚಾರ ಪ್ರಕರಣದ ವಿಚಾರಣೆಗೆ ಸುಪ್ರೀಂನಲ್ಲಿ ವಿಶೇಷ ಪೀಠ
ಬೆಂಗಳೂರು, ಡಿಸೆಂಬರ್ 01 : ಭ್ರಷ್ಟಾಚಾರ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಸುಪ್ರೀಂಕೋರ್ಟ್ನಲ್ಲಿ ವಿಶೇಷ ಪೀಠ ರಚನೆಯಾಗಲಿದೆ. ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರು ವಿಶೇಷ ಪೀಠ ರಚನೆ ಮಾಡಲು ಮುಂದಾಗಿದ್ದಾರೆ.
ಭ್ರಷ್ಟಾಚಾರ
ಪ್ರಕರಣಗಳ
ವಿಚಾರಣೆ
ಪಾರದರ್ಶಕವಾಗಿ,
ತ್ವರಿತವಾಗಿ
ನಡೆಯಬೇಕು
ಎಂಬುದು
ನ್ಯಾ.ಟಿ.ಎಸ್.ಠಾಕೂರ್
ಅವರ
ಅಭಿಪ್ರಾಯವಾಗಿದೆ.
ಆದ್ದರಿಂದ,
ಅವರು
ಪ್ರಕರಣಗಳ
ತ್ವರಿತ
ವಿಚಾರಣೆಗಾಗಿ
ವಿಶೇಷ
ಪೀಠವನ್ನು
ರಚನೆ
ಮಾಡಲು
ನಿರ್ಧರಿಸಿದ್ದಾರೆ.
[ಠಾಕೂರ್
ಮುಂದಿನ
ಸಿಜೆಐ]
ಜಯಲಲಿತಾ ಅರ್ಜಿ ವಿಚಾರಣೆಗೆ ಪೀಠ : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಖುಲಾಸೆಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ 2016ರ ಫೆಬ್ರವರಿ 2ರಿಂದ ನಡೆಯಲಿದೆ. [ಫೆಬ್ರವರಿ ತನಕ ಜಯಲಲಿತಾ ನಿರಾಳ]
ಯಾವ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ ಎಂಬುದು ಜನವರಿಯಲ್ಲಿ ತಿಳಿಯಲಿದೆ. ಇಬ್ಬರು ಅಥವ ಮೂವರು ನ್ಯಾಯಮೂರ್ತಿಗಳ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ. ಫೆಬ್ರವರಿ 2ರಿಂದ ದಿನ ಬಿಟ್ಟು ದಿನ ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ. [ಜಯಾ ಪ್ರಕರಣದ timeline]
2 ತಿಂಗಳ ಸಮಯಬೇಕು : ಜಯಲಲಿತಾ ಅವರ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಲು ಕನಿಷ್ಠ ಎರಡು ತಿಂಗಳ ಕಾಲಾವಕಾಶ ಬೇಕು ಎಂದು ಅಂದಾಜಿಸಲಾಗಿದೆ. ಡಿಎಂಕೆ ನಾಯಕ ಅನ್ಬಳಗನ್ ಅವರು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯನ್ನು ಕರ್ನಾಟಕ ಸರ್ಕಾರದ ಅರ್ಜಿಯ ಜೊತೆ ನಡೆಸಲಾಗುತ್ತದೆ.