ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಹೊಡೆದುರುಳಿಸಿದ ಸೇನೆ, ಇಬ್ಬರು ಭಾರತೀಯ ಯೋಧರು ಹುತಾತ್ಮ

ಜಮ್ಮು-ಕಾಶ್ಮೀರದ ನೌಘಾಂ ವಲಯದಲ್ಲಿ ಶನಿವಾರ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರ ಪೈಕಿ ಇಬ್ಬರನ್ನು ಹೊಡೆದುರುಳಿಸಲು ಭಾರತೀಯ ಸೇನೆ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ

By ವಿಕಾಸ್
|
Google Oneindia Kannada News

ಶ್ರೀನಗರ್, ಮೇ 20: ಜಮ್ಮು-ಕಾಶ್ಮೀರದ ನೌಘಾಂ ವಲಯದಲ್ಲಿ ಶನಿವಾರ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರ ಪ್ರಯತ್ನವನ್ನು ತಡೆಯುವಾಗ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಜತೆಗೆ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸೇನೆಯು ಯಶಸ್ವಿಯಾಗಿದೆ.

ಈ ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ತಮ್ಮ ಪ್ರಾಣ ಬಲಿ ಕೊಟ್ಟಿದ್ದು, ಸದ್ಯಕ್ಕೆ ಆಪರೇಷನ್ ಮುಂದುವರಿದಿದೆ ಎಂದು ವರದಿಯಾಗಿದೆ. ಗುರುವಾರವಷ್ಟೇ ಶ್ರೀನಗರದಲ್ಲಿ ಉಗ್ರರು ಮಾಡಿದ ಗ್ರೆನೇಡ್ ದಾಳಿಯಲ್ಲಿ ಓರ್ವ ಪೊಲೀಸ್ ಹಾಗೂ ನಾಗರಿಕನಾಗಿ ಗಾಯಗಳಾಗಿದ್ದವು. ಸಫಾ ಕದಲ್ ನ ಪೊಲೀಸ್ ಠಾಣೆ ಮೇಲೆ ಉಗ್ರರು ದಾಳಿ ನಡೆಸಿದ್ದರು.[ಪಾಕ್ ದುಸ್ಸಾಹಸಕ್ಕೆ ತಿರುಗೇಟು ನೀಡಲು ಸಿದ್ಧವಾಗಿರಿ: ಅರುಣ್ ಜೇಟ್ಲಿ]

Jammu and Kashmir

ಇನ್ನು ಶನಿವಾರದ ದಾಳಿಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ ಸಮೀರ್ ಅಹ್ಮದ್ ಎಂಬುವವರಿಗೆ ಗಾಯಗಳಾಗಿದ್ದು, ಅವರನ್ನು ಪೊಲೀಸ್ ಕಂಟ್ರೋಲ್ ರೂಮ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನು ಪಾಕ್ ಸೇನೆಯಿಂದ ಅಪ್ರಚೋದಿತ ದಾಳಿ ನಡೆದಿದ್ದು, ನಾಗರಿಕರನ್ನು ಸುರಕ್ಷತಾ ಕ್ರಮವಾಗಿ ಈ ವಾರ ಸ್ಥಳಾಂತರಿಸಲಾಗಿದೆ.

English summary
The security forces gunned down two militants attempting to infiltrate in Jammu and Kashmir's Nowgam region on Saturday. The soldiers have lost their lives in the operation which is still underway, said reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X