ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳ ಮದುವೆಗೆ 500 ಕೋಟಿ ರು. ಸುರಿದ ರೆಡ್ಡಿ ವಿರುದ್ಧ ತನಿಖೆ ಇಲ್ಲವೇ?

ಡಿಕೆಶಿ ವಿರುದ್ಧ ಐಟಿ ದಾಳಿಗೆ ಪ್ರಿಯಾಂಕಾ ಗಾಂಧಿ ಗರಂ. ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ನಾಯಕಿ. ಅಪನಗದೀಕರಣ ವೇಳೆಯಲ್ಲಿ ಮಗಳ ಮದುವೆಗೆ 500 ಕೋಟಿ ರು. ಖರ್ಚು ಮಾಡಿದ ರೆಡ್ಡಿಯನ್ನು ಏಕೆ ಪ್ರಶ್ನಿಸಲಿಲ್ಲ ಎಂದು ಪ್ರಶ್ನೆ.

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|
Google Oneindia Kannada News

ನವದೆಹಲಿ, ಆಗಸ್ಟ್ 3: ಇಡೀ ದೇಶವೇ ಅಪನಗದೀಕರಣದ ಬೇಗೆಯಲ್ಲಿ ಬೇಯುತ್ತಿರುವಾಗ, ಎಲ್ಲೆಲ್ಲೂ ಹಣದ ಅಭಾವ ಕಾಡುತ್ತಿದ್ದಾಗ, ಮಗಳ ಮದುವೆಗಾಗಿ 500 ಕೋಟಿ ರು. ಸುರಿದ ಬಿಜೆಪಿ ನಾಯಕ ಜನಾರ್ದನ ರೆಡ್ಡಿ ವಿರುದ್ಧ ತನಿಖೆ ಮಾಡಲು ಕೇಂದ್ರ ಸರ್ಕಾರ ಮುಂದಾಗಲಿಲ್ಲವೇಕೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಕರ್ನಾಟಕದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸಗಳು ಹಾಗೂ ಆಪ್ತರ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಯ ವಿರುದ್ಧ ಟ್ವಿಟ್ಟರ್ ನಲ್ಲಿ ಖಂಡಿಸಿರುವ ಅವರು, ಈ ಬಗ್ಗೆ ಸರಣಿ ಟ್ವೀಟ್ ಮಾಡಿ, ಬಿಜೆಪಿಯ ನಡೆಯನ್ನು ಖಂಡಿಸಿದ್ದಾರೆ.

ಡಿಕೆಶಿ ವಿರುದ್ಧ ಐಟಿ ಅಸ್ತ್ರ: ಮಧ್ಯರಾತ್ರಿಯಾದರೂ ಸಾಗಿದೆ ತನಿಖೆಡಿಕೆಶಿ ವಿರುದ್ಧ ಐಟಿ ಅಸ್ತ್ರ: ಮಧ್ಯರಾತ್ರಿಯಾದರೂ ಸಾಗಿದೆ ತನಿಖೆ

IT raid on DK Shivakumar: Priyanka Gandhi lashes out against BJP on Twitter

ಈ ವೇಳೆ, ರೆಡ್ಡಿ ವಿಚಾರ ಪ್ರಸ್ತಾಪಿಸಿರುವ ಅವರು, ದೇಶದಲ್ಲಿ ಸಾಮಾನ್ಯ ಜನರು ಹಣವಿಲ್ಲದೆ ಪರದಾಡುತ್ತಿದ್ದಾಗ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾರೀ ಜೋರಾಗಿ ಮದುವೆ ಮಾಡಿದ ರೆಡ್ಡಿಯವರಿಗೆ ಹಣ ಎಲ್ಲಿಂದ ಬಂತು ಎಂದು ಬಿಜೆಪಿ ಪ್ರಶ್ನೆ ಮಾಡಲಿಲ್ಲ. ಯಾವುದೇ ತನಿಖೆ ನಡೆಸಲಿಲ್ಲ. ತಮ್ಮ ವಿರುದ್ಧ ತನಿಖೆ ನಡೆಸದಂತೆ ಬಿಜೆಪಿಗೆ ರೆಡ್ಡಿ ಎಷ್ಟು ಹಣ ನೀಡಿದರು ಎಂದು ಅವರು ಪ್ರಶ್ನಿಸಿದ್ದಾರೆ.

ಮೈಸೂರು: ಡಿಕೆಶಿ ಮಾವನ ಮನೆಯಲ್ಲಿ ಮುಂದುವರಿದ ತನಿಖೆಮೈಸೂರು: ಡಿಕೆಶಿ ಮಾವನ ಮನೆಯಲ್ಲಿ ಮುಂದುವರಿದ ತನಿಖೆ

ಇನ್ನು, ಬಿಜೆಪಿ ಪರ ತಮ್ಮ ವಾಗ್ದಾಳಿ ಮುಂದುವರಿಸಿರುವ ಅವರು, ಗುಜರಾತ್ ನಲ್ಲಿ ಬಿಜೆಪಿಯು 'ಆಪರೇಷನ್ ಕಮಲ' ಹೆಸರಿನಲ್ಲಿ ಕುದುರೆ ವ್ಯಾಪಾರದಲ್ಲಿ ತೊಡಗಿತ್ತು. ಇದನ್ನು ತಪ್ಪಿಸಲು ಗುಜರಾತ್ ನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಆ ಎಲ್ಲಾ ಶಾಸಕರ ಆತಿಥ್ಯವನ್ನು ವಹಿಸಿಕೊಂಡಿದ್ದರಿಂದಲೇ ಡಿಕೆ ಶಿವಕುಮಾರ್ ಮೇಲೆ ಇಂಥ ಬ್ರಹ್ಮಾಸ್ತ್ರ ಪ್ರಯೋಗಿಸಲಾಗಿದೆ ಎಂದು ಪ್ರಿಯಾಂಕ ಕಿಡಿ ಕಾರಿದ್ದಾರೆ.

ಪವರ್ ಸಚಿವ ಡಿಕೆ ಶಿವಕುಮಾರ್ ಅಂದಾಜು ಆಸ್ತಿ ಎಷ್ಟಿದೆ?ಪವರ್ ಸಚಿವ ಡಿಕೆ ಶಿವಕುಮಾರ್ ಅಂದಾಜು ಆಸ್ತಿ ಎಷ್ಟಿದೆ?

ಅಲ್ಲದೆ, ಈ ಹಿಂದೆಯೇ ಡಿಕೆಶಿ ಅವರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಅದರಂತೆ, ಅವರ ಆಸ್ತಿ ಮೌಲ್ಯ 251 ಕೋಟಿ ರು.ಗಳಷ್ಟಿತ್ತು. ಹಾಗಿರುವಾಗ, ಅವರ ಮನೆಯಲ್ಲಿ 10 ಕೋಟಿ ರು. ಸಿಕ್ಕಿದ್ದು ದೊಡ್ಡ ವಿಷಯವೇ? ಇದು ತಮಾಷೆಯಲ್ಲವೇ? ಎಂದು ಅವರು ಗೇಲಿ ಮಾಡಿದ್ದಾರೆ.

English summary
Congress leader Priyanka Gandhi lashed out against the IT raid on Karnataka's power minister DK Shivakumar on August 2nd, 2017 in Twitter. She said that, BJP is playing politics behind this raid and also questioned why no raid or enquiry against Reddy who spent Rs. 500 crore for his daughter's marriage, while entire nation was suffering from Demonetisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X