ಮಣಿಪುರ ಚುನಾವಣಾ ಕಣದಲ್ಲಿ ಕಳಂಕಿತರೇ ಇಲ್ಲ.. ಆಶ್ಚರ್ಯ!
ಬೆಂಗಳೂರು, ಮಾರ್ಚ್ 3: ಬಹುಶಃ ಇದೊಂದು ಅಪರೂಪದ ದಾಖಲೆಯೇ ಸರಿ. ಮಣಿಪುರ ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 98 ಅಭ್ಯರ್ಥಿಗಳಲ್ಲಿ ಕೇವಲ ಒಬ್ಬರ ಮೇಲೆ ಮಾತ್ರ ಕ್ರಿಮಿನಲ್ ಕೇಸ್ ಇದೆ.
ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಅಭ್ಯರ್ಥಿಗಳು ಸಲ್ಲಿಸಿದ ಅಫಿದವಿತ್ ಜಾಲಾಡಿದ್ದುಈ ಮಾಹಿತಿಗಳು ಸಿಕ್ಕಿವೆ.[20 ಕಿ.ಮೀ ಸೈಕಲ್ ಏರಿ ಬಂದ ಶರ್ಮಿಳಾಗೆ ಕೇಜ್ರಿವಾಲ್ ಕೊಟ್ರು 50,000]
ಕಣದಲ್ಲಿರುವ ಮಂಗಳಂ ರಾಮೇಶ್ವರ್ ಸಿಂಗ್ ಮೇಲೆ ಮಾತ್ರ ಕ್ರಿಮಿನಲ್ ಮೊಕದ್ದಮೆ ಇದೆ. ಅದೂ ಕೇವಲ ಚೀಟಿಂಗ್ (ವಂಚನೆ) ಕೇಸ್ ಮಾತ್ರ ಇದೆ. ಇವರು ಬಿಜೆಪಿ ಟಿಕೆಟ್ ನಿಂದ ಕಾಕ್ಚಿಂಗ್ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.[ಮಣಿಪುರ: ಕಾಂಗ್ರೆಸ್ ಸರಕಾರ ಕಿತ್ತೊಗೆಯಲು ಬಿಜೆಪಿ ಮಾಸ್ಟರ್ ಪ್ಲಾನ್]
ಇನ್ನು ಕಣದಲ್ಲಿ 29 ಕೋಟ್ಯಾಧಿಪತಿಗಳಿದ್ದಾರೆ. ಕಾಂಗ್ರೆಸ್ ನಿಂದ 8, ಬಿಜೆಪಿಯಿಂದ 1, ಎನ್.ಪಿ.ಪಿಯಿಂದ 5, ಎನ್.ಪಿ.ಎಫ್ ನಿಂದ 1 ಹಾಗೂ ಎಂ.ಎನ್.ಡಿ ಯಿಂದ 1 ಕೋಟ್ಯಾಧಿಪತಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಕಾಂಗ್ರೆಸ್ ನ ಆಲ್ಫ್ರೆಡ್ ಎಸ್ ಅರ್ಥುರ್ 36 ಕೋಟಿ ಆಸ್ತಿ ಘೋಷಿಸಿದ್ದು ಕಣದಲ್ಲಿರುವ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಎಐಟಿಸಿಯ ಕಮೆವಿಲೈಮ್ ಕಬುಯ್ 13,000 ರೂಪಾಯಿ ಆಸ್ತಿ ಘೋಷಿಸಿದ್ದು ಕಣದಲ್ಲಿರುವ ಅತ್ಯಂತ ಬಡ ಅಭ್ಯರ್ಥಿಯಾಗಿದ್ದಾರೆ.