ಭಾರತದ ಪ್ರದೇಶದೊಳಕ್ಕೆ ಪ್ರವೇಶಿಸುವ ಚೀನಾ ಯತ್ನಕ್ಕೆ ತಡೆ
ಚೀನಾ ಸೈನಿಕರು ಭಾರತದ ಭೂ ಪ್ರದೇಶದೊಳಕ್ಕೆ ಪ್ರವೇಶಿಸಲು ಮಾಡಿದ ಯತ್ನವನ್ನು ಮಂಗಳವಾರ ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ. ಲಡಾಕ್ ನ ಪನ್ ಗಾಂಗ್ ಸರೋವರದ ಭಾರತದ ಗಡಿಯೊಳಕ್ಕೆ ಪ್ರವೇಶಿಸಲು ಚೀನಿ ಸೈನಿಕರು ಯತ್ನಿಸಿದಾಗ ಕಲ್ಲು ತೂರಾಟ ನಡೆದಿದೆ. ಈ ವೇಳೆ ಎರಡೂ ಕಡೆಯ ಜನರಿಗೆ ಸಣ್ಣ- ಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ ಏರ್ ಲೈನ್ಸ್ ನಿಂದ ಭಾರತೀಯ ಪ್ರಯಾಣಿಕರಿಗೆ ಅವಮಾನ
ಪೀಪಲ್ಸ್ ಲಿಬರೇಷನ್ ಆರ್ಮಿಯು (ಚೀನಾ ಸೇನೆ) ಎರಡು ಬಾರಿ ಭಾರತದ ಪ್ರದೇಶದೊಳಕ್ಕೆ ಪ್ರವೇಶಿಸಲು ಯತ್ನಿಸಿದೆ. ಎರಡೂ ಸಂದರ್ಭದಲ್ಲೂ ಜಾಗೃತವಾಗಿದ್ದ ಭಾರತೀಯ ಸೇನೆಯು ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾನವ ಸರಪಳಿ ರಚಿಸುವ ಮೂಲಕ ಪ್ರಯತ್ನಕ್ಕೆ ಭಾರತದ ಯೋಧರು ತಡೆಯೊಡ್ಡಿದ ವೇಳೆ ಚೀನಾ ಕಡೆಯಿಂದ ಕಲ್ಲು ತೂರಾಟ ನಡೆದಿದೆ. ಈ ಸಂದರ್ಭದಲ್ಲಿ ಭಾರತದ ಗಡಿ ಭದ್ರತಾ ಪಡೆಯಿಂದಲೂ ತಕ್ಕ ಪ್ರತ್ಯುತ್ತರ ನೀಡಲಾಗಿದೆ.
ಸಿಕ್ಕಿಂ, ಅರುಣಾಚಲದ ಚೀನಾ ಗಡಿಯಲ್ಲಿ ಭಾರತದ ಹೆಚ್ಚು ಸೈನಿಕರು
ಎರಡೂ ಕಡೆಯ ಅಧಿಕಾರಿಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ನವದೆಹಲಿಯಲ್ಲಿರುವ ಸೇನಾ ವಕ್ತಾರರು ನಿರಾಕರಿಸಿದ್ದಾರೆ. ಅಮೆರಿಕದಿಂದ ಖರೀದಿಸಿದ ದೋಣಿ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸಹಾಯದಿಂದ ಭಾರತೀಯ ಯೋಧರು ಈ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.