ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಂಭಮೇಳ: ಉಜ್ಜಯಿನಿ ಕಾಲ್ತುಳಿತದ ದಾರುಣ ಚಿತ್ರಗಳು
ಉಜ್ಜಯಿನಿ, ಮೇ 06: ಮಧ್ಯಪ್ರದೇಶದ ಉಜ್ಜಿಯಿನಿಯಲ್ಲಿ ನಡೆಯುತ್ತಿರುವ ಸಿಂಹಸ್ಥ ಕುಂಭಮೇಳದ ವೇಳೆ ಗಾಳಿ-ಮಳೆ ಪರಿಣಾಮ ಟೆಂಟ್ ಕುಸಿದು ಕಾಲ್ತುಳಿತ ಸಂಭವಿಸಿ 7 ಮಂದಿ ಸಾವನ್ನಪ್ಪಿ, ಸುಮಾರು 70 ಮಂದಿ ಗಾಯಗೊಂಡಿದ್ದಾರೆ.
ಕುಂಭಮೇಳ ನಡೆಯುತ್ತಿರುವ ಉಜ್ಜಿಯಿನಿಯ ಕ್ಷಿಪ್ರಾ ನದಿ ಪ್ರಾಂತ್ಯದಲ್ಲಿ ಗುರುವಾರ ಏಕಾಏಕಿ ಗುಡುಗು ಸಹಿತ ಭಾರೀ ಮಳೆಯುಂಟಾಯಿತು. ಈ ವೇಳೆ ಸಾಧುಗಳು, ಯಾತ್ರಾರ್ಥಿಗಳ ವಾಸಕ್ಕೆಂದು ಹಾಕಲಾಗಿದ್ದ ಭಾರೀ ಟೆಂಟ್ ಕುಸಿಯಿತು. ಇದರಿಂದ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸೇರಿ 6 ಮಂದಿ ಸಾವಿಗೀಡಾದರು.[ಉಜ್ಜಯಿನಿ ಕುಂಭಮೇಳದಲ್ಲಿ ಕಾಲ್ತುಳಿತ: 7 ಸಾವು]
ಕೇರಳದ ಪಟಾಕಿ ಅವಘಡದ ನಂತರ ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ಮತ್ತೊಂದು ದುರಂತ ಇದಾಗಿದೆ. ಕೇರಳದಲ್ಲಿ ಹೊಸ ವರ್ಷಾಚರಣೆ ವೇಳೆ ಪಟಾಕಿ ಗೋಡೌನ್ ಸ್ಫೋಟಗೊಂಡು ನೂರಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಉಜ್ಜಯಿನಿ ದುರಂತದ ಕೆಲ ಚಿತ್ರಗಳು...[ಕೇರಳ ಪಟಾಕಿ ಅವಘಡದ ಕರಾಳ ಚಿತ್ರಗಳು]
Comments
English summary
At least seven people were killed and nearly 50 injured at the Ardh Kumbh Mela here on Thursday when some temporary structures collapsed after strong winds and heavy rains, officials said. "Six people died after they were buried under the collapsed structures," Ujjain police chief V. Madhukumar told IANS. He said a woman pilgrim was among the dead.