ಐಎಎಸ್ ತಿವಾರಿ ಸಾವಿನ ಪ್ರಕರಣ ಸಿಬಿಐಗೆ ವಹಿಸಿದ ಯೋಗಿ ಸರ್ಕಾರ
ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ಠಾಕೂರ್ ಅವರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಸೋಮವಾರ(ಮೇ 22) ಸಂಜೆ ಅಧಿಕೃತ ಆದೇಶ ಹೊರಡಿಸಿದೆ.
ಲಕ್ನೋ, ಮೇ 22: ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ಠಾಕೂರ್ ಅವರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಸೋಮವಾರ(ಮೇ 22) ಸಂಜೆ ಅಧಿಕೃತ ಆದೇಶ ಹೊರಡಿಸಿದೆ.
ಇದಕ್ಕೂ ಮುನ್ನ ಉತ್ತರಪ್ರದೇಶ ಪೊಲೀಸರು, ತಿವಾರಿ ಸಾವನ್ನು ಕೊಲೆ ಪ್ರಕರಣ ಎಂದು ಪರಿಗಣಿಸಿ ಎಫ್ಐಆರ್ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು. ಉತ್ತರಪ್ರದೇಶ ಮೂಲದ ಅನುರಾಗ್ ತಿವಾರಿ ಅವರು ಐದು ದಿನಗಳ ಹಿಂದೆ ಹಜರತ್ ಗಂಜ್ ಪ್ರದೇಶದ ಮೀರಾಭಾಯಿ ಗೆಸ್ಟ್ ಹೌಸ್ ಬಳಿ ಶವವಾಗಿ ಪತ್ತೆಯಾಗಿದ್ದರು. ಪ್ರಾಥಮಿಕ ವರದಿ ಪ್ರಕಾರ ತಿವಾರಿ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.
ಆದರೆ, ತಿವಾರಿ ಅವರು ಕರ್ನಾಟಕದಲ್ಲಿ 2,000 ಕೋಟಿ ರು ಮೌಲ್ಯದ ಹಗರಣವನ್ನು ಪತ್ತೆ ಹಚ್ಚಿದ್ದರು. ಇದನ್ನು ಬಹಿರಂಗ ಪಡಿಸದಂತೆ ಅವರ ಮೇಲೆ ಹಿರಿಯ ಅಧಿಕಾರಿಗಳ ಒತ್ತಡವಿತ್ತು. ತಿವಾರಿ ಅವರಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿತ್ತು. ಹೀಗಾಗಿ ಮಾನಸಿಕ ಒತ್ತಡ ಅನುಭವಿಸಿದ್ದರು. ಸರಿಯಾಗಿ ರಜೆ ಕೂಡಾ ನೀಡುತ್ತಿರಲಿಲ್ಲ ಎಂದು ತಿವಾರಿ ಅವರು ಕುಟುಂಬಸ್ಥರು ದೂರಿದ್ದಾರೆ.
ಸೋಮವಾರದಂದು ತಿವಾರಿ ಕುಟುಂಬಸ್ಥರು, ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ, ಸಿಬಿಐ ತನಿಖೆಗೆ ವಹಿಸುವಂತೆ ಕೋರಿದರು.