ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭೀಕರ ಬರ, ಮಳೆ ಕೊಯ್ಲು, ನದಿ ಸ್ವಚ್ಛತೆ ಬಗ್ಗೆ ಮೋದಿ
ನವದೆಹಲಿ, ಏಪ್ರಿಲ್ 24: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಿಂಗಳ ಬಾನುಲಿ ಕಾರ್ಯಕ್ರಮ 'ಮನ್ ಕಿ ಬಾತ್' ನ 19ನೇ ಸಂಚಿಕೆಯಲ್ಲಿ ನೀರಿನ ಮಹತ್ವದ ಬಗ್ಗೆ ಭಾನುವಾರ ಮಾತನಾಡಿದರು.
ದೇಶದ ಹಲವೆಡೆ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಜಲ ಕ್ಷಾಮ, ಪಂಚಾಯತ್ ರಾಜ್, ಮಳೆ ಕೊಯ್ಲು, ನದಿ ಸ್ವಚ್ಛತೆ ಬಗ್ಗೆ ಮಾತನಾಡಿದರು. ಮನ್ ಕಿ ಬಾತ್ ಸಂಚಿಕೆಯ ಮುಖ್ಯಾಂಶಗಳು ಹೀಗಿದೆ:
*
ಮಹಾರಾಷ್ಟ್ರದ
ಅಹ್ಮದ್
ನಗರದಲ್ಲಿ
ಬರ
ಪರಿಸ್ಥಿತಿ
ಎದುರಿಸಲು
ಅಲ್ಲಿನ
ಜನರು
ತಮ್ಮ
ಬೆಳೆಪದ್ಧತಿಯನ್ನೇ
ಬದಲಾಯಿಸಿದ್ದಾರೆ.
ತಮ್ಮ
ಜಮೀನಿನಲ್ಲಿ
ನೀರಿಂಗಿಸುವ
ಹೊಂಡಗಳನ್ನು
ನಿರ್ಮಿಸಿದ್ದಾರೆ.
ಗಿಡಗಳನ್ನು
ಬೆಳೆಸಲು
ಅವರಿಗೆ
ಹೆಚ್ಚು
ನೀರು
ಬೇಕಿಲ್ಲ
*
ಈ
ಬಾರಿ
ಉತ್ತಮ
ಮುಂಗಾರುಮಳೆ
ನಿರೀಕ್ಷೆಯಿದೆ.
ಜೊತೆಗೆ
ಬೆಳೆ
ಉತ್ಪಾದನೆ
ಹೆಚ್ಚಳ
ಮಾಡಬೇಕಾದ
ಹೊಣೆಗಾರಿಕೆಯೂ
ಇದೆ.
*
ನೀರಿನ
ಸಮಸ್ಯೆ
ನಿವಾರಿಸಲು
ದೇಶದಲ್ಲಿ
ವ್ಯಾಪಕ
ಪ್ರಮಾಣದಲ್ಲಿ
ಮಳೆನೀರು
ಕೊಯ್ಲು
ಅಳವಡಿಸಿಕೊಳ್ಳಬೇಕಿದೆ.
* ಮಳೆನೀರಿನ ಕೊಯ್ಲಿನಿಂದ ಭೂಮಿಯ ಜಲಮಟ್ಟ ಏರುತ್ತದೆ. ನೀರಿನ ಗುಣಮಟ್ಟ ಸುಧಾರಿಸುತ್ತದೆ. ಸ್ವಚ್ಛ ನೀರಿನಿಂದ ಆರೋಗ್ಯವೂ ಸುಧಾರಿಸುತ್ತದೆ. ಹಳ್ಳಿಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ಪ್ರಚಾರ ಅಭಿಯಾನ ಕೈಗೆತ್ತಿಕೊಳ್ಳಬೇಕು
* ಗಂಗಾನದಿ ನಮ್ಮ ಪ್ರಮುಖ ಜಲ ಸಂಪನ್ಮೂಲ. ಗಂಗಾನದಿ ಸ್ವಚ್ಛತೆಗೆ ಕ್ರಮ ಕೈಗೊಂಡು, ಸ್ವಚ್ಛತೆಯ ಏಜೆಂಟರಾಗಬೇಕು.
* ಪಂಚಾಯ್ತಿ ರಾಜ್ ವ್ಯವಸ್ಥೆಯು ಗ್ರಾಮಗಳಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳು ಜನರಿಗೆ ತಲುಪಲು ನೆರವಾಗಿದೆ
* ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳದ ಬಗ್ಗೆ ಪೋಷಕರಿಗೆ ಅರಿವು ಅಗತ್ಯ. ಮಕ್ಕಳೊಡನೆ ನಿರಂತರ ಮಾತುಕತೆಯಿಂದ ದೈನಂದಿನ ಆಗು ಹೋಗುಗಳು ತಿಳಿಯಲಿದೆ.
* ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ಧಿ ಮುಖ್ಯ, ಶಿಕ್ಷಣದ ಗುಣಮಟ್ಟ ಹೆಚ್ಚಳದಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ. ವಿಡಿಯೋ ಇಲ್ಲಿದೆ:
Comments
narendra modi drought akashvani drinking water ನರೇಂದ್ರ ಮೋದಿ ಮಳೆ ಕೊಯ್ಲು ಆಕಾಶವಾಣಿ ಪಂಚಾಯಿತಿ ಕುಡಿಯುವ ನೀರು mann ki baat
English summary
In the 19th edition of his monthly radio programme, "Mann Ki Baat", Prime Minister Narendra Modi on Sunday, April 24, addressed the people of the nation and talked on a number of issues. He discussed about the ongoing drought situation, water scarcity and stressed on the importance of Panchayati Raj in our country, among other topics.