ಬಜೆಟ್ 2017: ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ ಮುಖ್ಯಾಂಶಗಳು
ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವ ಅರುಣ್ ಜೇಟ್ಲಿ ಸಂಸತ್ ನಲ್ಲಿ ಮಾಡಿದ 2017ರ ಬಜೆಟ್ ನ ಪ್ರಮುಖ ಘೋಷಣೆಗಳು ಇಲ್ಲಿವೆ.
*20 ಲಕ್ಷ ಆಧಾರ್ ಬೇಸ್ಡ್ ಸ್ವೈಪ್ ಮಷೀನ್ 2020ರ ವೇಳೆಗೆ
*1 ಕೋಟಿ ರುಪಾಯಿಗಿಂತ ಹೆಚ್ಚಿನ ಆದಾಯ ಇರುವವರಿಗೆ ಶೇ 15ರಷ್ಟು ಸರ್ ಚಾರ್ಜ್[ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE]
*50 ಲಕ್ಷದಿಂದ 1 ಕೋಟಿ ರುಪಾಯಿ ಮಧ್ಯೆ ಆದಾಯ ಇರುವವರಿಗೆ ಶೇ 10ರಷ್ಟು ಸರ್ ಚಾರ್ಜ್
*2.5 ಲಕ್ಷದಿಂದ 5 ಲಕ್ಷದ ಆದಾಯಕ್ಕೆ ಶೇ 5ರಷ್ಟು ತೆರಿಗೆ[ರಾಜಕೀಯ ಪಕ್ಷಗಳ ದೇಣಿಗೆ 2 ಸಾವಿರ ರು.ಗಳಿಗೆ ಇಳಿಕೆ]
*3 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರ ಮಾಡುವಂತಿಲ್ಲ
*ಐವತ್ತು ಕೋಟಿಗಿಂತ ಕಡಿಮೆ ಆದಾಯ ಇರುವ ಕಂಪನಿಗಳ ಕಾರ್ಪೋರೇಟ್ ತೆರಿಗೆ ಶೇ 25ಕ್ಕೆ ಇಳಿಕೆ
*2017-18 ಸಾಲಿಗೆ 21.74 ಟ್ರಿಲಿಯನ್ ಬಜೆಟ್[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]
*ರಕ್ಷಣಾ ವಲಯಕ್ಕೆ 2.74 ಲಕ್ಷ ಕೋಟಿ ಮೀಸಲು
*ವೆಬ್ ಮೂಲಕ ಸೈನಿಕರ ಪಿಂಚಣಿ ವಿತರಣೆ[ಒಂದಷ್ಟು ಹೊಸ ಘೋಷಣೆ, ಹಳೆ ಯೋಜನೆಗಳ ಮುಂದುವರಿಕೆ; ಓಡದ ಜೇಟ್ಲಿ ರೈಲು]
*ಆರ್ಥಿಕ ತಪ್ಪಿತಸ್ಥರ ಆಸ್ತಿ ಜಪ್ತಿಗೆ ಹೊಸ ಕಾನೂನು ಜಾರಿ
*ಐನೂರು ರೈಲು ನಿಲ್ದಾಣದಲ್ಲಿ ಲಿಫ್ಟ್, ಎಸ್ಕಲೇಟರ್
*ರಾಜಕೀಯ ಪಕ್ಷಗಳು ಚೆಕ್ ಅಥವಾ ಡಿಜಿಟಲ್ ವ್ಯವಹಾರ ಮೂಲಕ ಮಾತ್ರ ದೇಣಿಗೆ ಸಂಗ್ರಹಿಸಬಹುದು
*ಎಲ್ ಎನ್ ಜಿ ಮೇಲೆ ಅಬಕಾರಿ ಸುಂಕ ಶೇ 5ರಿಂದ ಶೇ 2.5ಗೆ ಇಳಿಕೆ[ಅಪನಗದೀಕರಣ ಪರಿಣಾಮ ಜಿಡಿಪಿ ಪಾರದರ್ಶಕ, ದೈತ್ಯ: ಜೇಟ್ಲಿ]
*ರಿಯಲ್ ಎಸ್ಟೇಟ್: ತೆರಿಗೆ ಹಾಕಲು ಕ್ಯಾಪಿಟಲ್ ಗೇನ್ಸ್ ಅವಧಿ 3ರಿಂದ 2 ವರ್ಷಕ್ಕೆ ಇಳಿಕೆ
*ಆಯ್ದ ಟಯರ್ -2 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ.[ಟ್ವಿಟ್ಟರ್: 2018ರೊಳಗೆ ಎಲ್ಲಾ ಗ್ರಾಮಕ್ಕೂ ವಿದ್ಯುತ್ ಪೂರೈಕೆ?]
*1.5 ಲಕ್ಷಕ್ಕೂ ಹೆಚ್ಚು ಗ್ರಾಮಗಳಿಗೆ ವೇಗದ ಬ್ರ್ಯಾಡ್ ಬಾಂಡ್ ಇಂಟರ್ ನೆಟ್.
*ಪರಿಶಿಷ್ಟ ಜಾತಿಯವರಿಗೆ ಮೀಸಲಾದ ಮೊತ್ತ 55,393 ಕೋಟಿ ರುಪಾಯಿಗೆ ಏರಿಕೆ
*ಬ್ಯಾಂಕ್ ಗಳಿಗೆ ಹತ್ತು ಸಾವಿರ ಕೋಟಿ ರುಪಾಯಿ ಪುನರ್ ಬಂಡವಾಳ
*ಷೇರು ಮಾರುಕಟ್ಟೆ ಪ್ರವೇಶಿಸಲಿರುವ ಐಆರ್ ಸಿಟಿಸಿ
*ಹೊಸ ಮೆಟ್ರೋ ರೈಲು ನೀತಿ ರಚನೆ
*ರಾಷ್ಟ್ರೀಯ ಹೆದ್ದಾರಿಗಳಿಗಾಗಿ ಇರುವ ಮೊತ್ತ 64 ಸಾವಿರ ಕೋಟಿಗೆ ಏರಿಕೆ
*ಆರೋಗ್ಯ ಪರಿಶೀಲನೆಗಾಗಿ ಹಿರಿಯ ನಾಗರಿಕರಿಗೆ ಆಧಾರ್ ಮೂಲದ ಸ್ಮಾರ್ಟ್ ಕಾರ್ಡ್ ವಿತರಣೆ
*ಐಆರ್ ಸಿಟಿಸಿ ಮೂಲಕ ರೈಲು ಟಿಕೆಟ್ ಬುಕ್ ಮಾಡುವಾಗ ಇರುವ ಸೇವಾ ತೆರಿಗೆ ವಾಪಸ್
*2025ರ ವೇಳೆಗೆ ಸಂಪೂರ್ಣ ಕ್ಷಯರೋಗ ನಿವಾರಣೆ ಗುರಿ
*ನರೇಗಾ ಯೋಜನೆಗೆ 38ರಿಂದ 48 ಸಾವಿರ ಕೋಟಿ ರುಪಾಯಿಗೆ ಏರಿಕೆ
*ಪ್ರೌಢಶಿಕ್ಷಣಕ್ಕಾಗಿ ಇನೊವೇಟಿವ್ ಫಂಡ್
*ಪ್ರಧಾನಮಂತ್ರಿ ಆವಾಸ್ ಯೋಜನೆಗೆ 23 ಸಾವಿರ ಕೋಟಿ ಮೀಸಲು
*2017-18ನೇ ಸಾಲಿನಲ್ಲಿ ಗ್ರಾಮೀಣ ವಲಯಕ್ಕೆ 1,87,200 ಕೋಟಿ ರುಪಾಯಿ. ಇದು ದಾಖಲೆ ಮೊತ್ತವಾಗಿದ್ದು, ಶೇ 24ರಷ್ಟು ಏರಿಕೆಯಾಗಿದೆ.
*ರಾಷ್ಟ್ರೀಯ ಕೃಷಿ ಮಾರುಕಟ್ಟೆಗಳು : 585 ಮಾರುಕಟ್ಟೆಗೆ ವಿಸ್ತರಣೆ
*ರಸ್ತೆ ನಿರ್ಮಾಣ: ದಿನಕ್ಕೆ 133 ಕಿ.ಮೀ. ಹೆಚ್ಚಳ.
*ನೀರಾವರಿ ನಿಧಿ 40 ಸಾವಿರ ಕೋಟಿ ರುಪಾಯಿಗೆ ಹೆಚ್ಚಳ.
*ಮೇ 1, 2018ರ ವೇಳೆಗೆ ಶೇ 100ರಷ್ಟು ಗ್ರಾಮೀಣ ವಿದ್ಯುದ್ದೀಕರಣ.
*ನಬಾರ್ಡ್ ನಿಂದ ಸೂಕ್ಷ್ಮ ನೀರಾವರಿ ನಿಧಿ ಸ್ಥಾಪನೆ, ಆರಂಭ ಬಂಡವಾಳವಾಗಿ ಐದು ಸಾವಿರ ಕೋಟಿ ರುಪಾಯಿ.
*ಕೃಷಿ ಸಾಲಕ್ಕಾಗಿ ಈ ವರ್ಷ 10 ಸಾವಿರ ಕೋಟಿ ರುಪಾಯಿ ನಿಗದಿ, ಅರವತ್ತು ದಿನ ಬಡ್ಡಿಯಿಂದ ವಿನಾಯಿತಿ
*ಡೇರಿ ಪ್ರೊಸೆಸಿಂಗ್ ಗೆ ಆರಂಭಿಕವಾಗಿ ಎರಡು ಸಾವಿರ ಕೋಟಿ ರುಪಾಯಿ
*ಗ್ರಾಮೀಣ ಭಾಗದಲ್ಲಿ ಮೂರು ಲಕ್ಷ ಕೋಟಿ ಹೂಡಿಕೆ. ಐವತ್ತು ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಐವತ್ತು ಸಾವಿರ ಕುಟುಂಬಗಳನ್ನು ಬಡತನದಿಂದ ಹೊರತರುವ ಗುರಿ