ದೆಹಲಿಗೆ ಹೊರಟ ಯೋಧ ಹನುಮಂತಪ್ಪ ಕುಟುಂಬದವರು
ನವದೆಹಲಿ, ಫೆಬ್ರವರಿ 09 : ಸಿಯಾಚಿನ್ನಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರು ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಯೋಧನ ಕುಟುಂಬ ಸದಸ್ಯರು ಧಾರವಾಡದಿಂದ ಹೊರಟಿದ್ದು, ಸಂಜೆಯ ವೇಳೆಗೆ ದೆಹಲಿ ತಲುಪುವ ನಿರೀಕ್ಷೆ ಇದೆ.
ಆರು
ದಿನಗಳಿಂದ
25
ಅಡಿ
ಆಳದ
ಹಿಮದಲ್ಲಿ
ಸಿಲುಕಿದ್ದ
ಹನುಮಂತಪ್ಪ
ಕೊಪ್ಪದ
ಅವರನ್ನು
ಸೋಮವಾರ
ಪತ್ತೆ
ಹಚ್ಚಲಾಗಿತ್ತು.
ಗಂಭೀರ
ಸ್ಥಿತಿಯಲ್ಲಿದ್ದ
ಅವರರನ್ನು
ಹೆಚ್ಚಿನ
ಚಿಕಿತ್ಸೆಗಾಗಿ
ದೆಹಲಿಯ
ಆರ್.ಆರ್.ಆಸ್ಪತ್ರೆಗೆ
ದಾಖಲು
ಮಾಡಲಾಗಿದೆ.
[ಹನುಮಂತಪ್ಪ
ಆರೋಗ್ಯ
ವಿಚಾರಿಸಿದ
ಮೋದಿ]
ದೆಹಲಿಗೆ ಹೊರಟ ಕುಟುಂಬ ಸದಸ್ಯರು : ಹನುಮಂತಪ್ಪ ಕೊಪ್ಪದ ಅವರ ಪತ್ನಿ, ಪುತ್ರಿ ಸೇರಿದಂತೆ ಐವರು ಕುಟುಂಬ ಸದಸ್ಯರು ದೆಹಲಿಗೆ ಆಗಮಿಸಲಿದ್ದಾರೆ. ಹನುಮಂತಪ್ಪ ಕೊಪ್ಪದ ಅವರ ಸಂಬಂಧಿಕರಾದ ಈಶ್ವರ ಕೊಪ್ಪದ ಅವರು ಈ ಕುರಿತು ಒನ್ ಇಂಡಿಯಾ ಜೊತೆ ಮಾತನಾಡಿದ್ದು, ಧಾರವಾಡದ ಶಾಸಕರು ಕುಟುಂಬ ಸದಸ್ಯರು ದೆಹಲಿಗೆ ತೆರಳಲು ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. [ಸಿಯಾಚಿನ್ ಪವಾಡ: ಹನುಮಂತಪ್ಪ ಬಗ್ಗೆ ಅವರ ಅವ್ವ ಹೇಳಿದ್ದೇನು?]
Wife of Lance Naik Hanumanthappa (found in Siachen after 6 days of avalanche) goes to a temple in Dharwad, Karnataka pic.twitter.com/pCEKP0zPUy
— ANI (@ANI_news) February 9, 2016
'ಹನುಮಂತಪ್ಪ
ಕೊಪ್ಪದ
ಅವರ
ಪತ್ನಿ,
ಪುತ್ರಿ
ನೇತ್ರಾ
ಅವರು
ಧಾಡವಾಡಕ್ಕೆ
ಆಗಮಿಸುತ್ತಿದ್ದು,
ಅಲ್ಲಿಂದ
ಕಾರಿನ
ಮೂಲಕ
ಗೋವಾಕ್ಕೆ
ಪ್ರಯಾಣ
ಬೆಳೆಸಲಿದ್ದಾರೆ.
ಅಲ್ಲಿಂದ
ವಿಮಾನದ
ಮೂಲಕ
ದೆಹಲಿಗೆ
ತೆರಳಿದ್ದಾರೆ.
ಸಂಜೆ
ವೇಳೆಗೆ
ಅವರು
ದೆಹಲಿ
ತಲುಪುವ
ಸಾಧ್ಯತೆ
ಇದೆ'
ಎಂದು
ಈಶ್ವರ
ಕೊಪ್ಪದ
ಹೇಳಿದ್ದಾರೆ.['ಅಮರ'
ಯೋಧ
ಹನುಮಂತಪ್ಪನ
ಅಂತಿಮ
ಯಾತ್ರೆಯ
ಚಿತ್ರಗಳು]
Family members of Lance Naik Hanumanthappa (found in Siachen after 6 days of the avalanche) in Dharwad, Karnataka. pic.twitter.com/WD3x26C449
— ANI (@ANI_news) February 9, 2016
ಟ್ವಿಟ್ ಮಾಡಿ ರಕ್ಷಣಾ ಸಚಿವ : ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಟ್ವಿಟ್ ಮಾಡಿದ್ದು, 'ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ, ನನ್ನ ಹಾರೈಕೆ ಅವರಿಗೆ ಇದೆ' ಎಂದು ತಿಳಿಸಿದ್ದಾರೆ.
My prayers are with Lance Naik Hanumanthappa who miraculously survived the avalanche at Siachen.
— Manohar Parrikar (@manoharparrikar) February 9, 2016
ಹಿಮಪಾತ
ಸಂಭವಿಸಿತ್ತು
:
ಫೆ.3ರಂದು
ಮದ್ರಾಸ್
ರೆಜಿಮೆಂಟ್ಗೆ
ಸೇರಿದ
10
ಯೋಧರು
19
ಸಾವಿರ
ಅಡಿಗಳ
ಎತ್ತರದಲ್ಲಿ
ಕರ್ತವ್ಯ
ನಿರ್ವಹಿಸುತ್ತಿದ್ದಾಗ
ಭಾರೀ
ಹಿಮಪಾತ
ಸಂಭವಿಸಿತ್ತು.
ಆಗ
ಅಲ್ಲಿದ್ದ
ಯೋಧರು
ಹಿಮದಲ್ಲಿ
ಸಿಲುಕಿದ್ದರು.
ಕರ್ನಾಟಕದ
ಹಾಸನದ
ತೇಜೂರಿನ
ಟಿ.ಟಿ
ನಾಗೇಶ್,
ಮೈಸೂರಿನ
ಎಚ್.ಡಿ.ಕೋಟೆ
ತಾಲೂಕಿನ
ಪಿ.ಎನ್.
ಮಹೇಶ್
ಮತ್ತು
ಧಾರವಾಡದ
ಹನುಮಂತಪ್ಪ
ಕೊಪ್ಪದ
ಅವರು
ಈ
ಹಿಮಪಾತದಲ್ಲಿ
ಸಿಲುಕಿದ್ದರು.
ಇವರ
ಪೈಕಿ
ನಾಗೇಶ್
ಮತ್ತು
ಮಹೇಶ್
ಮೃತಪಟ್ಟಿದ್ದಾರೆ.