ದಾಳಿಗೆ ಬಲಿಯಾದ ಅಮರನಾಥ್ ಯಾತ್ರಾರ್ಥಿಗಳ ಕುಟುಂಬಕ್ಕೆ ತಲಾ 10 ಲಕ್ಷ
ಶ್ರೀನಗರ, ಜುಲೈ 11 : ಉಗ್ರರ ದಾಳಿಗೆ ಬಲಿಯಾದ ಗುಜರಾತ್ ಮೂಲದ ಅಮರನಾಥ ಯಾತ್ರಾರ್ಥಿಗಳ ಕುಟುಂಬಕ್ಕೆ ಗುಜರಾತ್ ಸರ್ಕಾರ ತಲಾ 10 ಲಕ್ಷ ಪರಿಹಾರವನ್ನು ಮಂಗಳವಾರ ಘೋಷಿಸಿದೆ.
ಅಮಾಯಕರನ್ನು ಬಲಿತೆಗೆದುಕೊಂಡವರನ್ನು ಅಮರನಾಥನೇ ಶಿಕ್ಷಿಸಲಿ...
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು, ದಾಳಿಯಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ತಲಾ 10 ಲಕ್ಷ ರು. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರು. ನೀಡುವುದಾಗಿ ಹೇಳಿದರು.
ಉಗ್ರರು ದಾಳಿ ನಡೆಸುತ್ತಿದ್ದ ವೇಳೆ ಪ್ರಯಾಣಿಕರನ್ನು ಸುರಕ್ಷಿತಾ ತಾಣಕ್ಕೆ ಕೊಂಡೊಯ್ದ ಚಾಲಕ ಸಲೀಂ ಅವರ ಸಮಯ ಪ್ರಜ್ಞೆ ಕಾರ್ಯವನ್ನು ಸಿಎಂ ರುಪಾನಿ ಶ್ಲಾಘಿಸಿದರು.
People from Gujarat who have lost lives will get Rs 10 lakh each from Gujarat Govt, injured to be given Rs 2 lakh: Vijay Rupani,Gujarat CM pic.twitter.com/fUOWmL4Hwd
— ANI (@ANI_news) July 11, 2017
ಇದೇ ವೇಳೆ ಚಾಲಕ ಕಾರ್ಯ ಮೆಚ್ಚಿರುವ ರುಪಾನಿ ಆತನ ಹೆಸರನ್ನು ಶೌರ್ಯ ಪ್ರಶಸ್ತಿಗೆ ಸೂಚಿಸುವುದಾಗಿಯೂ ಘೋಷಿಸಿದ್ದಾರೆ.
ಸೋಮವಾರ ರಾತ್ರಿ ಅನಂತ್ ನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರು ನಡೆಸಿದ ಮನಸೋ ಇಚ್ಛೆ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದು, ಹಲವು ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ.