ಸುಕ್ಮಾ ಹುತಾತ್ಮರ ಮಕ್ಕಳ ಶಿಕ್ಷಣ ಜವಾಬ್ದಾರಿ ಹೊತ್ತುಕೊಂಡ ಗೌತಮ್
ಹಿರಿಯ ಕ್ರಿಕೆಟರ್, ಕೆಕೆಆರ್ ತಂಡದ ನಾಯಕ ಗೌತಮ್ ಗಂಭೀರ್ ಅವರು ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಛತ್ತೀಸ್ ಗಢದ ಸುಕ್ಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ
ನವದೆಹಲಿ, ಏಪ್ರಿಲ್ 28: ಹಿರಿಯ ಕ್ರಿಕೆಟರ್, ಕೆಕೆಆರ್ ತಂಡದ ನಾಯಕ ಗೌತಮ್ ಗಂಭೀರ್ ಅವರು ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಛತ್ತೀಸ್ ಗಢದ ಸುಕ್ಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಗಂಭೀರ್ ಅವರ ಫೌಂಡೇಶನ್ ಮೂಲಕ ಯೋಧರ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಹುತಾತ್ಮರಾಗಿರುವ
ಎಲ್ಲ
ಯೋಧರ
ಮಕ್ಕಳ
ಶಿಕ್ಷಣದ
ಸಂಪೂರ್ಣ
ವೆಚ್ಚ
ಗೌತಮ್
ಗಂಭೀರ್
ಅವರ
ಫೌಂಡೇಶನ್
ನೋಡಿಕೊಳ್ಳಲಿದೆ
ಎಂದು
ಗಂಭೀರ್
ಅವರ
ಮ್ಯಾನೇಜರ್
ಹೇಳಿದ್ದಾರೆ.
ಈ
ಕುರಿತಂತೆ
ಪ್ರಾಥಮಿಕ
ಕೆಲಸ
ಕಾರ್ಯಗಳು
ಆರಂಭವಾಗಿದೆ
ಎಂದಿದ್ದಾರೆ.
Compliments to @GautamGambhir for setting an example, pledging to bear educational expenses for kids of #SukmaMartyrs. Inspirational!
— M Venkaiah Naidu (@MVenkaiahNaidu) April 28, 2017
ಸುಕ್ಮಾದಲ್ಲಿದ್ದ ಸಿಆರ್ ಪಿಎಫ್ ಯೋಧರ 74ನೇ ಬಟಾಲಿಯನ್ ಶಿಬಿರದ ಮೇಲೆ ಮಾವೋವಾದಿಗಳು ಇತ್ತೆಚೆಗೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ 25 ಜನ ಯೋಧರು ಹುತಾತ್ಮರಾಗಿದ್ದರು. ಜೊತೆಗೆ 6 ಜನ ಯೋಧರು ಗಾಯಗೊಂಡಿದ್ದರು.