ವಿಚಾರಣೆಗೆ ಹಾಜರಾಗಲು ವಿಜಯ್ ಮಲ್ಯರಿಗೆ ಕೊನೆ ಚಾನ್ಸ್
ಮುಂಬೈ, ಏಪ್ರಿಲ್, 03: ಸಾಕಷ್ಟು ಸಾಲ ಮಾಡಿಕೊಂಡು ವಿದೇಶಕ್ಕೆ ಹಾರಿರುವ ವಿಜಯ್ ಮಲ್ಯಗೆ ಜಾರಿ ನಿರ್ದೇಶನಾಲಯ(ಇಡಿ) ಮತ್ತೊಂದು ನೋಟಿಸ್ ನೀಡಿದೆ. ಎಲ್ಲಿದ್ದರೂ ಏಪ್ರಿಲ್ 9ಕ್ಕೆ ಖುದ್ದು ಹಾಜರಾಗಬೇಕು ಎಂದು ಇಡಿ ಮಲ್ಯ ಅವರಿಗೆ ತಿಳಿಸಿದೆ.
ಐಡಿಬಿಐ ಬ್ಯಾಂಕಿನಿಂದ 900 ಕೋಟಿ ರೂ. ಸಾಲ ಪಡೆದು ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಮಲ್ಯ ವಿರುದ್ಧ ಹೊರಡಿಸುತ್ತಿರುವ ಮೂರನೇ ಸಮನ್ಸ್ ಇದಾಗಿದೆ. ಇದೇ ಕೊನೆಯ ಸಮನ್ಸ್ ಕೂಡ ಆಗುವ ಸಾಧ್ಯತೆ ಇದೆ. [ಸಾಲ ಮರುಪಾವತಿಗೆ ವಿಜಯ್ ಮಲ್ಯ ಬಗ್ಗಿದ್ದು ಹೇಗೆ?]
ಹಾಜರಾಗದಿದ್ದರೆ
ಏನಾಗುತ್ತದೆ?
ಒಂದು
ವೇಳೆ
ಏಪ್ರಿಲ್
9ರಂದು
ಮಲ್ಯ
ವಿಚಾರಣೆಗೆ
ಬರದಿದ್ದರೆ
ಅವರ
ಪಾಸ್ಪೋರ್ಟ್
ರದ್ದುಗೊಳಿಸುವ
ಪ್ರಕ್ರಿಯೆ
ಆರಂಭವಾಗಲಿದೆ.
ಜತೆಗೆ
ದೇಶಕ್ಕೆ
ಆಗಮಿಸಿದ
ತಕ್ಷಣವೇ
ಅವರನ್ನು
ಬಂಧಿಸಿದರೂ
ಆಶ್ಚರ್ಯವಿಲ್ಲ.
ಮಾರ್ಚ್18ರಂದು ವಿಚಾರಣೆಗೆ ಹಾಜರಾಗುವಂತೆ ಮೊದಲು ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಮಲ್ಯ ಅವರು ಕಾಲಾವಕಾಶ ಕೇಳಿದ್ದರು. ಅದಕ್ಕೆ ಒಪ್ಪಿಗೆ ನೀಡಿದ್ದ ನ್ಯಾಯಾಲಯ ಏಪ್ರಿಲ್ 2ರ ಶನಿವಾರ ವಿಚಾರಣೆಗೆ ಹಾಜರಾಗಲು ಮತ್ತೂಂದು ಸಮನ್ಸ್ ಕೊಟ್ಟಿತ್ತು. ಆದರೆ ಶನಿವಾರವೂ ವಿಚಾರಣೆಗೆ ಗೈರು ಹಾಜರಾದ ಮಲ್ಯ, ಮೇ ವರೆಗೆ ಕಾಲಾವಕಾಶ ಕೇಳಿದ್ದರು.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]
ಇನ್ನೊಂದೆಡೆ ಮಲ್ಯ 4 ಸಾವಿರ ಕೋಟಿ ರೂ. ಸಾಲವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ತೀರಿಸುತ್ತೇನೆ ಎಂದು ಹೇಳಿಕೆ ನೀಡಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಮಲ್ಯ 17 ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ಸಾಲ ಮರುಪಾವತಿ ಮಾಡಬೇಕಿದೆ.