ಕಲಾಂ ಬದಲು ಮೋದಿಗೆ ಶ್ರದ್ಧಾಂಜಲಿ ಸೂಚಿಸಿದ್ದು ಯಾರು?
ನವದೆಹಲಿ, ಜು. 30: ಈ ರಾಜಕಾರಣಿಗಳು ಮಾತನಾಡುವಾಗ ತಮ್ಮ ಬುದ್ಧಿಯನ್ನು ಎಲ್ಲಿ ಇಟ್ಟುಕೊಂಡಿರುತ್ತಾರೋ? ಅಗಲಿದ ಚೇತನ ಅಬ್ದುಲ್ ಕಲಾಂ ಅವರಿಗೆ ಸಂತಾಪ ಹೇಳಿವ ಬದಲಾಗಿ ಪ್ರಧಾನಿ ನರೇಂದ್ರ ಮೋದಿಗೆ ಸಂತಾಪ ಹೇಳಿ ಛತ್ತೀಸ್ ಘಡದ ಮುಖ್ಯಮಂತ್ರಿ ರಮಣ್ ಸಿಂಗ್ ಎಡವಟ್ಟು ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತ ರಮಣ್ ಸಿಂಗ್ ಬಾಯಿತಪ್ಪಿ ಮೋದಿಗೆ ಸಂತಾಪ ಹೇಳಿದ್ದಾರೆ. ರಮಣ್ ಸಿಂಗ್ ಬಿಜೆಪಿಯ ನಾಯಕ ಎಂಬುದನ್ನು ಈ ಸಂದರ್ಭದಲ್ಲಿ ಪಕ್ಷದವರು ಅರಗಿಸಿಕೊಳ್ಳಬೇಕಾಗಿದೆ.["ನೀರಾ ಮತ್ತೆ ಯಾರ ಫೋಟೋಕ್ಕೂ ಹಾರ ಹಾಕ್ಬೇಡಮ್ಮ"]
ಅಬ್ದುಲ್ ಕಲಾಂ ನಮ್ಮ ನಡುವೆ ಇದ್ದಾಗಲೇ ಜಾರ್ಖಂಡ್ ರಾಜ್ಯದ ಶಿಕ್ಷಣ ಸಚಿವೆ ನೀರಾ ಯಾದವ್ ಫೋಟೋಕ್ಕೆ ಹಾರ ಹಾಕಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಕೆಲ ಮಾಧ್ಯಮಗಳು ಕಲಾಂ ಸಾವಿನ ಸಂದರ್ಭ ನರೇಂದ್ರ ಮೋದಿ, ಅಣ್ಣಾ ಹಜಾರೆ ಫೋಟೋ ಹಾಕಿ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದರು.[ಅಗಲಿದ ಅಬ್ದುಲ್ ಕಲಾಂಗೆ ಟ್ವಿಟ್ಟರ್ ನಲ್ಲಿ ಅಶ್ರುತರ್ಪಣ]
ನಟಿ ಅನುಷ್ಕಾ ಶರ್ಮಾ ಸಹ ಅಬ್ದುಲ್ ಕಲಾಂ ಅವರಿಗೆ ಟ್ವಿಟ್ಟರ್ ನಲ್ಲಿ ಸಂತಾಪ ಹೇಳುವ ವೇಳೆ ಸ್ಪೆಲ್ಲಿಂಗ್ ತಪ್ಪು ಮಾಡಿ ಎಡವಟ್ಟು ಮಾಡಿಕೊಂಡಿದ್ದರು. ಅಬ್ದುಲ್ ಕಲಾಂ ಅವರ ದೇಹವು ರಾಮೇಶ್ವರಂನಲ್ಲಿ ಭೂಮಿಗೆ ಸೇರಿದ್ದು, ದೇಶದ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ.