ಕಾವೇರಿ ವಿವಾದದ ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ
ನವದೆಹಲಿ, ಸೆ. 13: ಕಾವೇರಿ ವಿವಾದ ತಾರಕಕ್ಕೇರಿ, ಬೆಂಗಳೂರಿನಲ್ಲಿ ಓರ್ವ ಬಲಿಯಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿದಿದ್ದಾರೆ. ಕಾವೇರಿ ವಿವಾದದಿಂದ ನಡೆದಿರುವ ಬೆಳವಣಿಗೆಗಳಿಂದ ನನಗೂ ವೈಯಕ್ತಿಕವಾಗಿ ನೋವಾಗಿದೆ ಎಂದಿದ್ದಾರೆ.
ಕಾನೂನು
ಉಲ್ಲಂಘಟನೆ
ಮಾಡುವುದು
ಸರಿಯಾದ
ಕ್ರಮವಲ್ಲ.
ಎಲ್ಲಕ್ಕೂ
ಕಾನೂನಿನಲ್ಲಿ
ಪರಿಹಾರವಿದೆ.
ಚರ್ಚೆಯಿಂದ
ಎಲ್ಲವೂ
ಸಾಧ್ಯ.
ಉಭಯ
ರಾಜ್ಯಗಳಲ್ಲಿ
ಶಾಂತಿ
ಕಾಪಾಡುವಂತೆ
ಈ
ಮೂಲಕ
ಮನವಿ
ಮಾಡುತ್ತೇನೆ
ಎಂದಿದ್ದಾರೆ.[ಸಿದ್ದರಾಮಯ್ಯ
ರಾಜೀನಾಮೆ
ನೀಡುವುದಿಲ್ಲ]
ಹಿಂಸೆ, ಗಲಾಟೆಯಿಂದ ಏನೂ ಸಾಧ್ಯವಿಲ್ಲ. ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿ, ಶಾಂತಿಯಿಂದಿರಿ ಎಂದು ಪ್ರಧಾನಿ ಮೋದಿ ಅವರು ಮನವಿ ಮಾಡಿದ್ದಾರೆ. [ಸುಪ್ರೀಂಕೋರ್ಟ್ ಆದೇಶವನ್ನು ಕರ್ನಾಟಕ ಸರ್ಕಾರ ಮೀರಬಹುದು]
ಕಾವೇರಿ
ವಿಚಾರವಾಗಿ
ಕನ್ನಡಿಗರು
ಹಾಗೂ
ತಮಿಳರು
ಶಾಂತಿ
ಕಾಪಾಡಬೇಕು.
ಎಲ್ಲರೂ
ಒಮ್ಮೆ
ತಮ್ಮ
ಕುಟುಂಬದ
ಬಗ್ಗೆ
ಯೋಚಿಸಬೇಕು
ಎಂದಿದ್ದಾರೆ.
[ರಸ್ತೆಗಿಳಿದರೆ
ನ್ಯಾಯ
ಸಿಗುವುದಿಲ್ಲ
:
ವೆಂಕಯ್ಯ
ನಾಯ್ಡು]
Personally pained at the developments. In a democracy, solutions are found through restraint & mutual dialogue: PM Modi
— ANI (@ANI_news) September 13, 2016
ಇದಕ್ಕೂ ಮುನ್ನ ಕಾವೇರಿ ವಿವಾದದ ಬಗ್ಗೆ ಪ್ರಧಾನಿ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ವಿಷಾದ ವ್ಯಕ್ತಪಡಿಸಿದ್ದರು. ಕಾವೇರಿ ವಿವಾದದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಸಿದ್ದರಾಮಯ್ಯ ಅವರು ಕೋರಿದ್ದರು. ಆದರೆ, ಸಿದ್ದರಾಮಯ್ಯ ಅವರ ಮನವಿ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು.