ಶೌಚಾಲಯ ನಿರ್ಮಿಸಿ, ಹೆಣ್ಣು ಮಕ್ಕಳನ್ನು ಉಳಿಸಿ!
ಝಾರ್ಖಾಂಡ, jಜು, ೦4 : ಪೋಷಕರು ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿಲ್ಲ ಎಂಬ ಕಾರಣಕ್ಕೆ ಹೆಣ್ಣುಮಗಳು ನೇಣಿಗೆ ಶರಣಾದ ಭೀಕರ ಘಟನೆ ಝಾರ್ಖಾಂಡ್ ನಲ್ಲಿ ನಡೆದಿದೆ.
ದುಮ್ಕಾ
ಜಿಲ್ಲೆಯ
ಖುಶ್ಬು
ಎಂಬಾಕೆ
ಎಎನ್
ಕಾಲೇಜಿನಲ್ಲಿ
ಬಿಎ
ಓದುತ್ತಿದ್ದು,
ಮನೆಯಲ್ಲಿ
ಶೌಚಾಲಯ
ನಿರ್ಮಿಸಲಿಲ್ಲ
ಎಂಬ
ಕಾರಣಕ್ಕೆ
ಆತ್ಮಹತ್ಯೆಗೆ
ಶರಣಾಗಿದ್ದಾಳೆ.
ಸರ್ಕಾರ
ನೀಡುತ್ತಿರುವ
ಹಲವಾರು
ಸೌಲಭ್ಯಗಳ
ಬಗ್ಗೆ
ಎಚ್ಚೆತ್ತುಕೊಳ್ಳದ
ಖುಶ್ಬು
ಪೋಚಕರು
ಮನೆಯಲ್ಲಿ
ಶೌಚಾಲಯ
ನಿರ್ಮಿಸಲು
ಮೀನಾಮೇಷ
ಎಣಿಸುತ್ತಿದ್ದರು.
ಖುಶ್ಬು ತನ್ನ ತಂದೆ ತಾಯಿಗೆ ಮನೆಯಲ್ಲಿ ಒಂದು ಶೌಚಾಲಯ ನಿರ್ಮಿಸಿ, ನನಗೆ ಬಯಲು ಶೌಚಾಲಯಕ್ಕೆ ಹೋಗಲು ಮುಜುಗರ ಆಗುತ್ತದೆ ಎಂದು ಗೋಗರೆದಿದ್ದಾಳೆ. ಯಾವಾಗಲೂ ಅಜ್ಜಿ ಮನೆಯ ಶೌಚಾಲಯಕ್ಕೆ ತೆರಳುತ್ತಿದ್ದ ಈಕೆ ಕೆಲವೊಮ್ಮೆ ತಂದೆ ತಾಯಿಯೊಂದಿಗೆ ವಾಗ್ವಾದ ನಡೆಸಿ, ಕಾದಾಟಕ್ಕೂ ನಿಂತಿದ್ದಾಳೆ.
ಖುಷ್ಬೂವಿನ ಮನವಿ, ಗೋಗರೆತಕ್ಕೆ ಒಪ್ಪದ ಪೋಷಕರು ಆಕೆಯ ಮಾತನ್ನು ನಿರಾಕರಿಸಿದ್ದರು. ಇದರಿಂದ ಬೇಸತ್ತ ಖುಷ್ಬೂ ನೇಣಿಗೆ ಶರಣಾಗಿದ್ದಾಳೆ. ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪೋಷಕರು ಆಕೆಯ ಮದುವೆಗಾಗಿ ಹಣ ಸಂಗ್ರಹದಲ್ಲಿ ತೊಡಗಿದ್ದೆವು. ಮದುವೆ ಹಣವನ್ನು ಶೌಚಾಲಯ ನಿರ್ಮಿಸಲು ತೊಡಗಿಸಲು ಇಚ್ಚಿಸಿರಲಿಲ್ಲ. ಈ ವಿಚಾರ ತಿಳಿಯದ ಈಕೆ ನೇಣು ಬಿಗಿದುಕೊಂಡಿದ್ದಾಳೆ ಎಂದು ಹೇಳಿದ್ದಾರೆ.